10 ನೇ ಮಹಡಿಯಲ್ಲಿ ಸಿಲುಕಿದ್ದ ಎಂಟು ವರ್ಷದ ವಿಶೇಷ ಚೇತನ ಮಗುವನ್ನು ರಕ್ಷಿಸಿದ ಅಗ್ನಿಶಾಮಕ ದಳ: ಉಡುಪಿಯಲ್ಲೊಂದು ಸಿನೀಮೀಯ ಮಾದರಿ ಕಾರ್ಯಾಚರಣೆ

ಉಡುಪಿ: ಇಲ್ಲಿನ ಬ್ರಹ್ಮಗಿರಿಯಲ್ಲಿರುವ ಅಪಾರ್ಟ್‌ಮೆಂಟ್‌ ಒಂದರ 11ನೇ ಮಹಡಿಯ ಬಾಲ್ಕನಿಯಿಂದ 10 ನೇ ಮಹಡಿಗೆ ಇಳಿದ ಎಂಟು ವರ್ಷದ ವಿಶೇಷ ಚೇತನ ಮಗುವನ್ನು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ವಿಭಾಗದ ತಂಡವೊಂದು ವಿಶೇಷ ರಕ್ಷಣಾ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ರಕ್ಷಿಸಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಸೋಮವಾರ ಈ ಘಟನೆ ನಡೆದಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿಯ ಕ್ಷಿಪ್ರ ಸ್ಪಂದನೆ ಮಗುವಿನ ಸುರಕ್ಷತೆಯನ್ನು ಖಾತ್ರಿಪಡಿಸಿದೆ. ಘಟನೆಯ ವಿವರ ಸೋಮವಾರ ಬೆಳಗ್ಗೆ 11:40 ರ ಸುಮಾರಿಗೆ ಸಂಕಟದ ಕರೆ ಸ್ವೀಕರಿಸಿದ ತಕ್ಷಣ ಠಾಣಾಧಿಕಾರಿ […]

ಎಬಿವಿಪಿ ಸಂಸ್ಥಾಪನಾ ದಿನಾಚರಣೆ

ಉಡುಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ವತಿಯಿಂದ ಸೋಮವಾರ 75ನೇ ವರ್ಷದ ಸಂಸ್ಥಾಪನ ದಿನ ಹಾಗೂ ರಾಷ್ಟ್ರೀಯ ವಿದ್ಯಾರ್ಥಿ ದಿವಸದ ಅಂಗವಾಗಿ ಧ್ವಜಾರೋಹಣ ಮತ್ತು ಸಭಾ ಕಾರ್ಯಕ್ರಮವನ್ನು ಉಡುಪಿಯ ಕೇಶವ ನಿಲಯದಲ್ಲಿ ಮಾಡಲಾಯಿತು.

ಬ್ರಹ್ಮಾವರ: ಯುವ ವಿಚಾರ ವೇದಿಕೆ ವತಿಯಿಂದ ವನಮಹೋತ್ಸವ

ಬ್ರಹ್ಮಾವರ: ಯುವ ವಿಚಾರ ವೇದಿಕೆ (ರಿ) ಕೊಳಲಗಿರಿ, ಗ್ರಾಮ ಪಂಚಾಯತ್ ಉಪ್ಪೂರು, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ಸುವರ್ಣ ಎಂಟರ್ಪ್ರೈಸಸ್ ಬ್ರಹ್ಮಾವರ ಇವರ ಸಂಯುಕ್ತ ಆಶ್ರಯದಲ್ಲಿ ಜುಲೈ 09 ಆದಿತ್ಯವಾರದಂದು ವೇದಿಕೆಯ ವಠಾರದಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮ ನಡೆಸಲಾಯಿತು. ಔಷಧೀಯ ಗಿಡ, ಹಣ್ಣುಗಳ ಗಿಡ ಹಾಗೂ ಇನ್ನಿತರ ಸುಮಾರು 100 ಗಿಡಗಳನ್ನು ವೇದಿಕೆಯ ವಠಾರದಲ್ಲಿ ಹಾಗೂ ಸದಸ್ಯರ ಮನೆಗಳಲ್ಲಿ ನೆಡಲಾಯಿತು. ಕೇವಲ ಗಿಡಗಳನ್ನು ನೆಡುವುದು ಮಾತ್ರವಲ್ಲದೆ ಅವುಗಳ ರಕ್ಷಣೆ ಹಾಗೂ ಪೋಷಣೆ ಕೂಡ ಪ್ರತಿಯೊಬ್ಬರ […]