Shakti Jaguar Land Roverಸೂಪರ್ ವುಮನ್ ಅವಾರ್ಡ್ 2023: ಹೇಮಾ ನಿರಂಜನ್ ಇವರಿಗೆ ಉದ್ಯಮಿ ವಿಭಾಗದಲ್ಲಿ ಪ್ರಶಸ್ತಿ

ಬೆಂಗಳೂರು: Shakti Jaguar Land Roverಸೂಪರ್ ವುಮನ್ ಅವಾರ್ಡ್ 2023 – ಉದ್ಯಮಿ ವಿಭಾಗದಲ್ಲಿ ಮಹಿಳಾ ಉದ್ಯಮಿ,     ಹೇಮಾ ನಿರಂಜನ್ ಅವರಿಗೆ ಪ್ರಶಸ್ತಿ ಲಭಿಸಿದೆ. ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಿದ ಶಕ್ತಿ ಸಂಸ್ಥೆ, ಹಾಗೂ ತನಿಷ್ಕ್ ಚಿನ್ನಾಭರಣ ಸಂಸ್ಥೆಗೆ ಹೇಮಾ ನಿರಂಜನ್ ಧನ್ಯವಾದ ಸಲ್ಲಿಸಿದ್ದಾರೆ.

ಆಧಾರ್-ಪ್ಯಾನ್ ಜೋಡಣೆ ಕಾಲಾವಧಿ ಜೂನ್ 30 ರವರೆಗೆ ವಿಸ್ತರಣೆ

ನವದೆಹಲಿ: ನಿಮ್ಮ ಪ್ಯಾನ್ ಅನ್ನು ಆಧಾರ್‌ ಕಾರ್ಡ್ ನೊಂದಿಗೆ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಜೂನ್ 30, 2023 ರವರೆಗೆ ವಿಸ್ತರಿಸಲಾಗಿದೆ ಎಂದು ಸಿಬಿಡಿಟಿ ಮಾರ್ಚ್ 28, 2023 ರಂದು ಅಧಿಸೂಚನೆಯಲ್ಲಿ ತಿಳಿಸಿದೆ. ಮಂಗಳವಾರ ಐದನೇ ಬಾರಿಗೆ ಆಧಾರ್‌ನೊಂದಿಗೆ ಪ್ಯಾನ್ ಲಿಂಕ್ ಮಾಡಲು ಗಡುವನ್ನು ವಿಸ್ತರಿಸಿದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿಯು ಪ್ಯಾನ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವ ಕೊನೆಯ ದಿನಾಂಕವನ್ನು ಜೂನ್ 30, 2023 ಕ್ಕೆ ವಿಸ್ತರಿಸಿದೆ. ಮಾರ್ಚ್ 28, 2023 ರಂದು ಬಿಡುಗಡೆಯಾದ ಪತ್ರಿಕಾ […]

9 ವರ್ಷ ಪೂರೈಸಿದ ಉಳಿದವರು ಕಂಡಂತೆ: ನಿಮ್ಮ ರಿಚಿ ಶೀಘ್ರದಲ್ಲೇ ಹಿಂತಿರುಗಲಿದ್ದಾನೆ ಎಂದ ರಕ್ಷಿತ್ ಶೆಟ್ಟಿ

ಕನ್ನಡ ಚಿತ್ರರಂಗದಲ್ಲಿ ಬದಲಾವಣೆಯ ಯುಗಕ್ಕೆ ನಾಂದಿ ಹಾಡಿದ ಚಿತ್ರಗಳಲ್ಲಿ ಉಳಿದವರು ಕಂಡಂತೆ ಕೂಡಾ ಒಂದು ಚಿತ್ರವಾಗಿದೆ. ಚಾಲ್ತಿಯಲ್ಲಿದ್ದ ಸಿನಿಮಾ ತಯಾರಿಕೆಯ ಪಟ್ಟುಗಳನ್ನು ಬಿಟ್ಟು ಸಂಪೂರ್ಣವಾಗಿ ಹೊಸದಾದ ರೀತಿಯಲ್ಲಿ ಉಳಿದವರು ಕಂಡಂತೆ ತೆರೆಕಂಡಿತ್ತು. ಆರಂಭದಲ್ಲಿ ಉಳಿದವರು ಕಂಡಂತೆ ಜನರನ್ನು ರಂಜಿಸುವ ಬದಲಿಗೆ ಗೊಂದಲವನ್ನುಂಟು ಮಾಡಿದಂತೆ ಕಂಡರೂ ನಿಧಾನವಾಗಿ ಜನರಿಗೆ ಕಥೆಯ ಹಂದರ ಅರ್ಥವಾಗ ತೊಡಗಿತ್ತು. ಉಳಿದವರು ಕಂಡಂತೆಯ ಮೂಲಕ ಉದಯೋನ್ಮುಖ ನಟ ಮತ್ತು ದೂರದರ್ಶಿ ನಿರ್ದೇಶಕನೊಬ್ಬನು ಕನ್ನಡ ಚಿತ್ರರಂಗಕ್ಕೆ ದೊರೆತದ್ದು ಈಗ ಇತಿಹಾಸ. ಉಳಿದವರು ಕಂಡಂತೆ 9 ವರ್ಷಗಳನ್ನು […]

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ ಪರೀಕ್ಷೆ: ಪ್ರದೀಪ್ ಕುಕ್ಕುಡೆ ಉತ್ತೀರ್ಣ

ಉಡುಪಿ: ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಮಂಡಳಿ ನಡೆಸಿದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಗಾಯನ ಪರೀಕ್ಷೆಯಲ್ಲಿ ಪ್ರದೀಪ್ ಕುಕ್ಕುಡೆ ಅವರು ಶೇಕಡಾ 90% ಅಂಕ ಗಳಿಸಿ ಜಿಲ್ಲೆಯಲ್ಲಿ ವಿಶಿಷ್ಟ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರು ವಿದ್ವಾನ್ ಮಹಾಬಲೇಶ್ವರ ಭಾಗವತ್ ಅವರ ಶಿಷ್ಯ ಹಾಗೂ ಉಡುಪಿ ಮುಕುಂದ ಕೃಪಾ ಸಂಗೀತ ಶಾಲೆಯ ವಿದ್ಯಾರ್ಥಿ.

ದಿ. ಆಸ್ಕರ್ ಫರ್ನಾಂಡಿಸ್ ಅವರ 82ನೇ ಹುಟ್ಟು ಹಬ್ಬದ ಸ್ಮರಣಾರ್ಥ ವಸತಿ ನಿಲಯಗಳಿಗೆ ಅಗತ್ಯ ವಸ್ತು ವಿತರಣೆ

ಉಡುಪಿ: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ದಿ. ಆಸ್ಕರ್ ಫರ್ನಾಂಡಿಸ್ ಅವರ 82ನೇ ಹುಟ್ಟು ಹಬ್ಬದ ಸ್ಮರಣಾರ್ಥ ಮಿಷನ್ ಕಾಂಪೌಂಡ್‌ನ ಸಿ.ಎಸ್.ಐ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಹಣ್ಣು ಹಂಪಲುಗಳನ್ನು ಹಾಗೂ ಅಗತ್ಯ ವಸ್ತುಗಳನ್ನು ವಿತರಿಸಲಾಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ ಏ ಗಫೂರ್ ಮಾತನಾಡಿ, ಆಸ್ಕರ್ ಫರ್ನಾಂಡಿಸ್ ಅವರು ನಡೆದು ಬಂದ ದಾರಿ ಮತ್ತು ಅವರ ಆದರ್ಶಗಳನ್ನು ವಿವರಿಸಿದರು. ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಮಾತನಾಡಿ […]