ಫೆ.18 ಮತ್ತು 20ರಂದು ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಸಚಿವರ ಪ್ರವಾಸ

ಉಡುಪಿ: ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಫೆಬ್ರವರಿ 18 ಮತ್ತು 20 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಫೆ. 18 ರಂದು ಬೆಳಗ್ಗೆ 7.30 ರಿಂದ 8.30 ರ ವರೆಗೆ ಕೋಟ ಗೃಹ ಕಚೇರಿಯಲ್ಲಿ ಸಾರ್ವಜನಿಕ ಭೇಟಿ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ, ಬೆ. 9.30 ಕ್ಕೆ ಹೊಂಬಾಡಿ ಮಂಡಾಡಿಯಲ್ಲಿ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಡಿಯಲ್ಲಿ ಡಿ.ಬಿ.ಟಿ ಮೂಲಕ ಅನುಷ್ಠಾನಗೊಳ್ಳುತ್ತಿರುವ ಕೊಳವೆ ಬಾವಿಗೆ ಚಾಲನೆ, 11 […]

ಬೈಂದೂರಿನಲ್ಲಿ ಸೀ ಫುಡ್ ಪಾರ್ಕ್ ಸ್ಥಾಪನೆ: ಗೋವಿಂದ ಬಾಬು ಪೂಜಾರಿ ಅಭಿನಂದನೆ

ಬೈಂದೂರು: ತಾಲೂಕಿನ ಖಂಬದ ಕೋಣೆಯಲ್ಲಿ ಮೀನಿನ ರಫ್ತು ಮತ್ತು ಮೌಲ್ಯವರ್ಧನೆಗೆ ಸೀ ಫುಡ್ ಪಾರ್ಕ್ ಅನ್ನು ಸಾರ್ವಜನಿಕ ಕಾಸಗಿ ಸಹಭಾಗಿತ್ವದಲ್ಲಿ ಸ್ಥಾಪನೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದು, ಕ್ಷೇತ್ರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಮುಂದಾದ ಸರ್ಕಾರಕ್ಕೆ ಶೆಫ್ ಟಾಕ್ ಫುಡ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈ ಲಿ ನ ಸಂಸ್ಥಾಪಕ ಗೋವಿಂದ ಬಾಬು ಪೂಜಾರಿ ಅಭಿನಂದನೆ ಸಲ್ಲಿಸಿದ್ದಾರೆ.

ಜನಪರ ಬಜೆಟ್ ಮಂಡಿಸಿದ ಸರ್ಕಾರಕ್ಕೆ ಮಹಿಳೆಯರ ಪರವಾಗಿ ಅಭಿನಂದನೆ: ನಯನಾ ಗಣೇಶ್

ಉಡುಪಿ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್ ಮಹಿಳೆಯರ,ರೈತರ,ಎಲ್ಲಾ ವರ್ಗದ ಜನರ ಜನಪರ ಬಜೆಟ್ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ನಯನಾ ಗಣೇಶ್ ಹರ್ಷ ವ್ಯಕ್ತಪಡಿಸಿದ್ದಾರೆ. ರೈತರಿಗೆ ನೀಡುತ್ತಿದ್ದ ಬಡ್ಡಿ ರಹಿತ ಸಾಲ 5 ಲಕ್ಷಕ್ಕೆ ಏರಿಕೆ. ಸಣ್ಣ,ಅತೀ ಸಣ್ಣ ರೈತರಿಗೆ 80 ಕೋಟಿ ವೆಚ್ಚದಲ್ಲಿ ಜೀವನ್ ಜ್ಯೋತಿ ಕಿಸಾನ್ ಯೋಜನೆ, ನೇತಾರ ಸಮ್ಮಾನ್ ಯೋಜನೆ 3 ಸಾವಿರದಿಂದ 5 ಸಾವಿರಕ್ಕೆ ಏರಿಕೆ, ನೇಕಾರರು,ಮೀನುಗಾರರಿಗೂ ರೈತ ವಿದ್ಯಾನಿಧಿ ಯೋಜನೆ ವಿಸ್ತರಣೆ, ಕಾರ್ಮಿಕ ಮಹಿಳೆಯರಿಗೆ ಮಾಸಿಕ 500 […]

ಇಂದಿನಿಂದ ಫೆ. 24 ರವರೆಗೆ ಉಡುಪಿ ಶ್ರೀ ಅನಂತೇಶ್ವರ ದೇಗುಲದಲ್ಲಿ ಶಿವರಾತ್ರಿ ಉತ್ಸವ

ಉಡುಪಿ: ಶ್ರೀ ಅನಂತೇಶ್ವರ ದೇಗುಲದಲ್ಲಿ ಫೆ.17 ರಿಂದ 24ರವರೆಗೆ ಶಿವರಾತ್ರಿ ಮಹೋತ್ಸವ ಹಾಗೂ ವಾರ್ಷಿಕ ರಥೋತ್ಸವ ಜರಗಲಿದೆ. ಫೆ.17ರ ರಾತ್ರಿ ಬಲಿ, ಅಂಕುರಾರೋಹಣ, ಫೆ. 18ರ ಮಹಾಶಿವರಾತ್ರಿಯಂದು ಧ್ವಜಾರೋಹಣ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಶಿವರಾತ್ರಿ ಪೂಜೆ, ಮಹಾ ರಂಗಪೂಜೆ, ಫೆ. 19 ರಿಂದ ಫೆ.21ರ ವರೆಗೆ ಪ್ರತಿದಿನ ಪ್ರಧಾನ ಹೋಮ, ಮಹಾಪೂಜೆ, ಕಟ್ಟೆಪೂಜೆ, ಫೆ.22 ರಂದು ಮಹಾಪೂಜೆ, ರಥಾರೋಹಣ ನಡೆದು ಮಹಾ ರಥೋತ್ಸವ ನಡೆಯಲಿದೆ. ಫೆ.23 ರಂದು ಕವಾಟೋದ್ಘಾಟನೆ, ಮಹಾಮಂತ್ರಾಕ್ಷತೆ, ಫೆ.24 ರಂದು ಮಹಾಸಂಪ್ರೋಕ್ಷಣೆ ಜರಗಲಿದೆ. […]

ಯರ್ಲಪಾಡಿ: ಫೆ.18 ರಿಂದ 20 ರವರೆಗೆ 15ನೇ ವರ್ಷದ ಭಜನಾ ಮಂಗಲೋತ್ಸವ; ಕೆಳಗಿನಮನೆ ಕುಟುಂಬದ ಧರ್ಮದೈವಗಳ ನೇಮೋತ್ಸವ

ಯರ್ಲಪಾಡಿ: ಶ್ರೀ ಆದಿಶಕ್ತಿ ಕಾಳಿಕಾಂಬ ಭಜನಾ ಮಂಡಳಿ ಕೆಳಗಿನ ಮನೆ ಯರ್ಲಪಾಡಿ ಇದರ 15ನೇ ವರ್ಷದ ಭಜನಾ ಮಂಗಲೋತ್ಸವ ಹಾಗೂ ಅಂತರ್ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಕುಣಿತ ಭಜನಾ ಸ್ಪರ್ಧೆ ಮತ್ತು ಕೆಳಗಿನಮನೆ ಕುಟುಂಬದ ಧರ್ಮದೈವಗಳ ನೇಮೋತ್ಸವವು ಫೆ.18 ರಿಂದ 20 ರವರೆಗೆ ಕೆಳಗಿನಮನೆ, ಯರ್ಲಪಾಡಿಯಲ್ಲಿ ನಡೆಯಲಿದೆ. ಫೆ. 18ರಂದು ಸಂಜೆ 6.00 ರಿಂದ ಫೆ. 19ರ ಬೆಳಿಗ್ಗೆ 6.00 ರವರೆಗೆ 15ನೇ ವರ್ಷದ ಭಜನಾ ಮಂಗಲೋತ್ಸವ, ಫೆ.19 ರಂದು ರಾತ್ರಿ 07 ರಿಂದ 09 […]