ಬ್ರಹ್ಮಾವರ: ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ವತಿಯಿಂದ ದತ್ತು ಸ್ವೀಕೃತ ಶಾಲೆಯ ನೂತನ ಕಟ್ಟಡದ ಶಿಲಾನ್ಯಾಸ

ಬ್ರಹ್ಮಾವರ: ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ (ರಿ.) ಬೆಂಗಳೂರು ವತಿಯಿಂದ ದತ್ತು ಸ್ವೀಕೃತ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡಕ್ಕೆ ದಾನಿಗಳಾದ ಎಚ್.ಎಸ್. ಶೆಟ್ಟಿ ಅವರು ಕೊಡಮಾಡಿದ 2.5 ಕೋಟಿಗೂ ಅಧಿಕ ವೆಚ್ಚದ ಶಾಲಾ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವು ಶುಕ್ರವಾರದಂದು ನಡೆಯಿತು. ಕಟ್ಟಡದ ಶಿಲಾನ್ಯಾಸವನ್ನು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಬೆಂಗಳೂರು ಇದರ ಅಧ್ಯಕ್ಷ, ದಾನಿಗಳಾದ ಹೆಚ್. ಎಸ್ ಶೆಟ್ಟಿ ಹಾಗೂ ಶಾಸಕ ಕೆ. ರಘುಪತಿ ಭಟ್ ನೆರವೇರಿಸಿದರು. ಈ ಸಂದರ್ಭದಲ್ಲಿ ಹೆಗ್ಗುಂಜೆ […]

ಭಾರತೀಯ ಅಂಚೆ ಇಲಾಖೆ ಸಿಬ್ಬಂದಿಗಳಿಗೆ ತರಬೇತಿ ಶಿಬಿರ ಸಮಾರೋಪ ಸಮಾರಂಭ

ಉಡುಪಿ: ಭಾರತೀಯ ಅಂಚೆ ಇಲಾಖೆಯ ಉಡುಪಿ ವಿಭಾಗದ ಸುಮಾರು ತನ್ನ ನೌಕರರಿಗಾಗಿ 750 ಮಿಕ್ಕಿ ನೌಕರರಿಗೆ ಕೇಂದ್ರ ಸರಕಾರದ ಇಲಾಖೆಯ ಹೊಸ ಯೋಜನೆಯ ಬಗ್ಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭವು ಗುರುವಾರದಂದು ನಡೆಯಿತು. ಉಡುಪಿ ಅಂಚೆವಿಭಾಗದ ಅಧೀಕ್ಷಕ ನವೀನ್ ಚಂದರ್ ಮೂಳೂರು ಅಧ್ಯಕ್ಷತೆ ವಹಿಸಿ ಮಾತನಾಡಿ, ಜನವರಿ ಮತ್ತು ಫೆಬ್ರವರಿ ತಿಂಗಳಿನಲ್ಲಿ ಇಲಾಖೆಯ ಜಿ. ಡಿ. ‌ಕೆ ರಿಫ್ರಶರ್ ಮತ್ತು ಪಾರ್ಸೆಲ್ ಡಿ.ಇ.ಪಿ ಹಾಗೂ ಡಾಕ್ ಕರ್ಮಯೋಗಿ ಪೋರ್ಟಲ್ ಅಡಿಯಲ್ಲಿ ತರಬೇತಿ ನೀಡಲಾಗಿದೆ. ಈ ತರಬೇತಿಯು ಮುಖ್ಯವಾಗಿದ್ದು, […]

ಕರಾವಳಿಯ ಯಕ್ಷಗಾನ ಕಲೆಯಲ್ಲೂ ರಾಜಕೀಯ ಬೆರೆಸಿರುವ ಬಿಜೆಪಿ ನಡೆ ಖಂಡನೀಯ: ರಮೇಶ್ ಕಾಂಚನ್

ಉಡುಪಿ: ರಾಜ್ಯ ಬಿಜೆಪಿ ಸರಕಾರವು 40% ಕಮಿಷನ್ ತಿಂದು ಅದೂ ಸಾಕಾಗದೆ ಈಗ ಇದ್ದ ಬದ್ದ ಎಲ್ಲಾ ಸಂಘ ಸಂಸ್ಥೆಗಳಿಗೂ ರಾಜಕೀಯ ಅಂಟಿಸುವ ಪರಿಪಾಠ ಬೆಳೆಸುತ್ತಿರುವುದು ಖಂಡನೀಯ. ಉಡುಪಿ ಜಿಲ್ಲೆಯಲ್ಲಿ ರಾಜ್ಯ ಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನ ನಡೆಸುವ ಮೂಲಕ ಯಕ್ಷಗಾನ ರಂಗಕ್ಕೂ ರಾಜಕೀಯ ತಂದಿರುವುದು ಬೇಸರದ ಸಂಗತಿ. ಸಮಗ್ರ ಯಕ್ಷಗಾನ ಹೆಸರಲ್ಲಿ ಯಕ್ಷಗಾನದ ಸಮಗ್ರತೆಯನ್ನು ಮರೆತು ಸೀಮಿತಗೊಳಿಸಿರುವುದು ನ್ಯಾಯವೇ ? ನಮ್ಮ ರಾಜ್ಯದ ಸಂಸ್ಕೃತಿಕ ಜಾನಪದ ಕಲೆಯಾದ ಯಕ್ಷಗಾನ ಸಮ್ಮೇಳನದಲ್ಲಿ 90%ಕ್ಕೂ ಅಧಿಕ ರಾಜಕೀಯ ನಾಯಕರೇ […]

ಶಿವಪಾಡಿ ಅತಿರುದ್ರಯಾಗ: ಫೆ.12 ಪುಟಾಣಿಗಳಿಗಾಗಿ “ಬಾಲಶಿವ” ಸ್ಪರ್ಧೆ

ಶಿವಪಾಡಿ: ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಅತಿರುದ್ರ ಮಹಾಯಾಗದ ಪ್ರಯುಕ್ತ ಪುಟಾಣಿಗಳಿಗಾಗಿ “ಶಿವೋತ್ಸವ ಬಾಲಶಿವ” ಎಂಬ ವೇಷಭೂಷಣ ಸ್ಪರ್ಧೆಯನ್ನು ಫೆಬ್ರವರಿ 12 ಭಾನುವಾರದಂದು ಮಣಿಪಾಲದ ಸರಳೇಬೆಟ್ಟುವಿನ ಶಿವಪಾಡಿಯಲ್ಲಿರುವ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಏರ್ಪಡಿಸಲಾಗಿದೆ. 1 ರಿಂದ 12 ವರ್ಷದ ಮಕ್ಕಳಿಗೆ ಬಾಲಶಿವನ ವೇಷ ಧರಿಸಿ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ. ಈ ಸ್ಪರ್ಧೆಯು 1 ರಿಂದ 4 ವರ್ಷದ ಪುಟಾಣಿಗಳಿಗೆ “ಸಬ್ ಜೂನಿಯರ್”, 4 ರಿಂದ 8 ವರ್ಷದ ಮಕ್ಕಳಿಗೆ “ಜೂನಿಯರ್” ಮತ್ತು 8 ರಿಂದ 12 ವರ್ಷದ […]

ಸದನದಲ್ಲಿ ಹಿಂದಿನ ವರ್ಷದ ಬಜೆಟ್ ಓದಿದ ಅಶೋಕ್ ಗೆಹ್ಲೋಟ್: ಬಜೆಟ್ ಮೊದಲೆ ಸೋರಿಕೆಯಾಗಿದೆಯೆ ಎಂದ ಪ್ರತಿಪಕ್ಷ

ಜೈಪುರ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಶುಕ್ರವಾರದಂದು ಸದನದಲ್ಲಿ ಹಳೆ ಬಜೆಟ್ ಅನ್ನು ಏಳು ನಿಮಿಷಗಳ ಕಾಲ ಓದಿದ್ದು, ಆ ಬಳಿಕ ಮುಖ್ಯ ಸಚೇತಕ ಅವರನ್ನು ಎಚ್ಚರಿಸಿದ್ದು, ತಪ್ಪಿನ ಅರಿವಾಗಿ ಸದನದ ಕ್ಷಮೆ ಕೇಳಿದ್ದಾರೆ. ಗೆಹ್ಲೋಟ್ ಸರಕಾರದಿಂದ ಪ್ರಮಾದವಾಗಿದೆ, ಬಜೆಟ್ ಕೂಡಾ ಇತರ ಪೇಪರ್ ಗಳಂತೆ ಮೊದಲೇ ಸೋರಿಕೆ ಆಗಿದೆ ಎಂದು ಪ್ರತಿಪಕ್ಷಗಳು ಸರಕಾರವನ್ನು ಮುಜುಗರಕ್ಕೆ ಸಿಲುಕಿವೆ ಮಾತ್ರವಲ್ಲ, ಸದನದಲ್ಲಿ ಗದ್ದಲ ಸೃಷ್ಟಿಸಿವಿಧಾನಸಭೆಯ ಬಾವಿಯಲ್ಲಿ ಕುಳಿತು ಸದನವನ್ನು 30 ನಿಮಿಷಗಳ ಕಾಲ ಮುಂದೂಡುವಂತೆ ಮಾಡಿದೆ. ಈ […]