ನಾಳೆ (ಜ.28) ಶಿರೂರು ಕರಾವಳಿ ಸಂಭ್ರಮ ಯಕ್ಷಗಾನ ನಾಟ್ಯ ವೈಭವ

ಶಿರೂರು: ಯುವಶಕ್ತಿ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಶಿರೂರು ಕರಾವಳಿ ಸಂಭ್ರಮ-2023 ಶಿರೂರು ಸಂಭ್ರಮದಲ್ಲೊಂದು ಸ್ಪೆಷಲ್ ಎಡಿಷನ್ ಯಕ್ಷಗಾನ ನಾಟ್ಯ ವೈಭವ ಸಂಜೆ 6 ಗಂಟೆಯಿಂದ ನಡೆಯಲಿದೆ. ಕಾರ್ಯಕ್ರಮದಲ್ಲಿ ಸುನಿಲ್ ಭಂಡಾರಿ ಕಡತೋಕ, ಕುಮಾರಿ ಚಿಂತನಾ ಹೆಗ್ಡೆ ಮಾಳ್ಕೊಡು, ಆರ್ಡಿ ಸಂತೋಷ್ ಕುಮಾರ್, ಸುಜನ್ ಹಾಲಾಡಿ, ಪ್ರಕಾಶ್ ಕಿರಾಡಿ, ಸುಧೀರ್ ಉಪ್ಪೂರು ಮುಂತಾದ ಕಲಾವಿದರು ಭಾಗವಹಿಸಲಿದ್ದರೆ.

ಮೂಡ್ ಆಫ್ ದಿ ನೇಷನ್ ಸಮೀಕ್ಷೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವಕ್ಕೆ ಮತ್ತೊಮ್ಮೆ ಬಹುಮತ

ನವದೆಹಲಿ: ಇಂಡಿಯಾ ಟುಡೇ ಮಾಧ್ಯಮ ಸಂಸ್ಥೆಯು ಮೂಡ್ ಆಫ್ ದಿ ನೇಷನ್ ಸರ್ವೆ ನಡೆಸಿದೆ. ಅದರಂತೆ, ಪ್ರಸ್ತುತ ಪರಿಸ್ಥಿತಿಯಲ್ಲಿ ಚುನಾವಣೆಯೇನಾದರೂ ನಡೆದರೆ 67% ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರಕಾರಕ್ಕೆ ಬಹುಮತ ನೀಡಲಿದ್ದಾರೆ ಎಂದು ಸರ್ವೆ ತಿಳಿಸಿದೆ. ಸರ್ವೆಯಲ್ಲಿ ಬಿಜೆಪಿಗೆ- 284, ಕಾಂಗ್ರೆಸ್ ಗೆ- 68, ಇತರರಿಗೆ- 191 ಸ್ಥಾನಗಳು ಲಭಿಸಿವೆ. ಉತ್ತಮ ಪ್ರಧಾನಿ ನರೇಂದ್ರ ಮೋದಿ: 47% ಅಟಲ್ ಬಿಹಾರಿ ವಾಜಪೇಯಿ: 16% ಇಂದಿರಾ ಗಾಂಧಿ: 12% ಮನಮೋಹನ್ ಸಿಂಗ್: 08% ಕಳೆದ ಎಂಟು […]

2022 ರಲ್ಲಿ ಭಾರತದಲ್ಲಿ 7 ಅತಿಹೆಚ್ಚು ಮಾರಾಟವಾದ ಕಾರುಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ ಟಾಟಾ ನೆಕ್ಸಾನ್

2022 ರಲ್ಲಿ ಭಾರತದಲ್ಲಿ ಅತಿಹೆಚ್ಚು ಮಾರಾಟವಾದ 7 ಅತ್ಯುತ್ತಮ ಕಾರುಗಳಲ್ಲಿ ಟಾಟಾ ಮೋಟಾರ್ಸ್ ಕಂಪನಿಯ ನೆಕ್ಸಾನ್ ನಾಲ್ಕನೇ ಸ್ಥಾನದಲ್ಲಿದೆ. ಭಾರತೀಯ ಕಾರು ಮಾರುಕಟ್ಟೆಯಲ್ಲಿ ಮಾರುತಿ ಸುಝುಕಿ ತನ್ನ ಒಂದನೇ ಸ್ಥಾನವನ್ನು ಬಿಟ್ಟುಕೊಟ್ಟಿಲ್ಲ. ಮೊದಲ ಮೂರನೇ ಸ್ಥಾನದಲ್ಲಿ ವ್ಯಾಗನ್ ಆರ್, ಬಲೇನೋ ಮತ್ತು ಸ್ವಿಫ್ಟ್ ಕಾರುಗಳಿದ್ದರೆ ನಾಲ್ಕನೇ ಸ್ಥಾನದಲ್ಲಿ ಟಾಟಾ ನೆಕ್ಸಾನ್, ಮಾರುತಿ ಸುಝುಕಿ ಅನ್ನು ಬೆನ್ನಟ್ಟುತ್ತಿದೆ. ಮಾರುತಿ ಸುಝುಕಿ ಅವರ ಆಲ್ಟೋ, ಹ್ಯುಂದಯಿ ಕಂಪನಿಯ ಕ್ರೆಟಾ ಮತ್ತು ಮಾರುತಿ ಯವರ ಸ್ವಿಫ್ಟ್ ಕ್ರಮವಾಗಿ ಐದು ಆರು ಮತ್ತು […]

ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಇವರಿಗೆ “ಜಿಲ್ಲಾ ಚುನಾವಣಾಧಿಕಾರಿ” ಪ್ರಶಸ್ತಿಯ ಗರಿ

ಉಡುಪಿ: ಭಾರತ ಚುನಾವಣಾ ಆಯೋಗವು 13ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು “ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುವೆ” ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸುವಂತೆ ನಿರ್ದೇಶನ ನೀಡಿರುವ ಹಿನ್ನಲೆಯಲ್ಲಿ ರಾಜ್ಯ ಮಟ್ಟದಲ್ಲಿ ಜ.25 ರಂದು ಬೆಂಗಳೂರು ಇಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಗಿತ್ತು. ಈ ಸಂದರ್ಭದಲ್ಲಿ ರಾಜ್ಯ ಮಟ್ಟದಲ್ಲಿ ವಿವಿಧ ವಿಭಾಗಗಲ್ಲಿ ಅಧಿಕಾರಿ ಸಿಬ್ಬಂದಿಗಳನ್ನು ಆಯ್ಕೆ ಮಾಡಲಾಗಿದ್ದು, ಅದರಂತೆ “ಜಿಲ್ಲಾ ಚುನಾವಣಾಧಿಕಾರಿ” ವಿಭಾಗದಲ್ಲಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ ಆಯ್ಕೆಯಾಗಿದ್ದು, ಬುಧವಾರದಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ […]

ಅತ್ತೂರು ಸಂತ ಲಾರೆನ್ಸ್ ಮೈನರ್ ಬೆಸಿಲಿಕಾ ವಾರ್ಷಿಕೋತ್ಸವ ಸಂಪನ್ನ

ಕಾರ್ಕಳ: ಐದು ದಿನಗಳ ಕಾಲ ನಡೆದ ಸಂತ ಲಾರೆನ್ಸ್ ಮೈನರ್ ಬೆಸಿಲಿಕಾ ಅತ್ತೂರಿನ ವಾರ್ಷಿಕ ಹಬ್ಬವು ಜನವರಿ 26 ಗುರುವಾರದಂದು ಅದ್ಧೂರಿಯಾಗಿ ಸಂಪನ್ನಗೊಂಡಿತು. ಬೆಂಗಳೂರಿನ ಆರ್ಚ್‌ಡಯಾಸಿಸ್‌ನ ಆರ್ಚ್‌ಬಿಷಪ್ ಡಾ.ಬರ್ನಾಡ್ ಮೊರಾಸ್ ಅವರು ಅಂತಿಮ ದಿನದ ಹಬ್ಬದ ಆಚರಣೆಗಳ ನೇತೃತ್ವ ವಹಿಸಿದ್ದರು. ಸತ್ಯ ಮತ್ತು ಪ್ರಾಮಾಣಿಕತೆ ಶಾಶ್ವತ ಸದ್ಗುಣಗಳು. ಇವುಗಳಿಂದ ನವ ಸಮಾಜ ನಿರ್ಮಾಣ ಸಾಧ್ಯ. ಕೌಟುಂಬಿಕ ಜೀವನದಲ್ಲೂ ನಮಗೆ ಇದು ಬೇಕು. ನಾವು ಶಾಂತಿ ಮತ್ತು ಪ್ರೀತಿಯಿಂದ ಬದುಕಿದಾಗ, ನಾವು ದೇವರನ್ನು ಸಾಕ್ಷಾತ್ಕರಿಸಬಹುದು ಎಂದು ಅವರು ಧರ್ಮಬೋಧನೆ […]