ಸ್ವಾತಂತ್ರ್ಯಾ ನಂತರದ ಆರ್ಥಿಕ ನೀತಿಗಳು ಈಗಿನ ಪರಿಸ್ಥಿತಿಗೆ ಕಾರಣ – ಪ್ರಸನ್ನ ಉಪ್ಪುಂದ

ಉಪ್ಪುಂದ: ಸ್ವಾತಂತ್ರ್ಯಾ ನಂತರ ತೆಗೆದುಕೊಳ್ಳಲಾದ ಆರ್ಥಿಕ ಅಭಿವೃದ್ಧಿಯ ಮಾದರಿಯೇ ಈಗಿನ ಪರಿಸ್ಥಿತಿಗೆ ಕಾರಣ. ಬಂಡವಾಳಶಾಹಿ ಉದ್ಯಮದ ಉದ್ದೇಶ ಲಾಭವನ್ನು ಹೆಚ್ಚಿಸುವುದೇ ಹೊರತು ಉದ್ಯೋಗ ಸೃಷ್ಟಿಯಲ್ಲ. ದೊಡ್ಡ ಕೈಗಾರಿಕೆಗಳು ಮತ್ತು ಮುಂದುವರಿದ ತಂತ್ರಜ್ಞಾನವು ಉದ್ಯೋಗದ ಸ್ವರೂಪವನ್ನು ಬದಲಿಸುತ್ತಾ ಹೋಗುವುದಲ್ಲದೆ, ಉದ್ಯೋಗಗಳನ್ನು ಕಡಿತಗೊಳಿಸುತ್ತದೆ. ಈ ಕಾರಣದಿಂದಲೇ ಯುರೋಪ್, ಅಮೇರಿಕಾ ಚೀನಾಗಳಲ್ಲಿ ನಿರುದ್ಯೋಗ ಹೆಚ್ಚಾಗಿರುವುದು. ಭಾರತ ಇದಕ್ಕೆ ಹೊರತಾಗಿರಲು ಅಸಾಧ್ಯ. ಆದ್ದರಿಂದ ಜನಸಂಖ್ಯೆ ಹೆಚ್ಚಿರುವ ಭಾರತವು ಉದ್ಯೋಗವನ್ನು ಉತ್ತೇಜಿಸುವ ಆರ್ಥಿಕ ನೀತಿಗಳನ್ನು ಅವಲಂಬಿಸಬೇಕಾಗಿದೆ ಎಂದು ಸ್ವಾವಲಂಬಿ ಭಾರತ ಅಭಿಯಾನದ ಉಡುಪಿ ಜಿಲ್ಲಾ […]