ರಾಜ್ಯದ ಪ್ರಥಮ ತೇಲುವ ಸೇತುವೆ ಶೀಘ್ರದಲ್ಲೇ ಪುನರಾರಂಭ: ತಜ್ಞರ ವರದಿ ಬಳಿಕ ಸಾರ್ವಜನಿಕರಿಗೆ ಮುಕ್ತ

ಮಲ್ಪೆ: ಈ ಹಿಂದೆ ಮಲ್ಪೆ ಬೀಚ್‌ನಲ್ಲಿ ಹೊಸ ತೇಲುವ ಸೇತುವೆಯನ್ನು ಸ್ಥಾಪಿಸಲಾಗಿದ್ದು, ಮಳೆಗಾಲದ ಹಿನ್ನೆಲೆಯಲ್ಲಿ ಸೇತುವೆಯನ್ನು ಕಳಚಿಡಲಾಗಿತ್ತು. ಇದೀಗ ತೇಲುವ ಸೇತುವೆಯನ್ನು ಮತ್ತೆ ಸ್ಥಾಪಿಸಿ ಶೀಘ್ರದಲ್ಲೇ ಸಾರ್ವಜನಿಕರಿಗೆ ಮುಕ್ತಮಾಡಲಾಗುವುದು ಎಂದು ವರದಿಯಾಗಿದೆ. ಸೌಲಭ್ಯವು ವೀಕ್ಷಣೆಯಲ್ಲಿದ್ದು, ತಜ್ಞರ ತಂಡವು ತೇಲುವ ಸೇತುವೆಯ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆಯನ್ನು ಪರೀಕ್ಷಿಸಿ ದೃಢಪಡಿಸಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಮಲ್ಪೆ ಬೀಚ್‌ನ ಗುತ್ತಿಗೆದಾರ ಸುದೇಶ್ ಶೆಟ್ಟಿ ಮಾತನಾಡಿ, ಹಿಂದಿನ ತಪ್ಪುಗಳಿಂದ ನಾವು ಪಾಠ ಕಲಿತಿದ್ದೇವೆ. ಸೇತುವೆಯನ್ನು ಹೇಗೆ ಸರಿಪಡಿಸುವುದು ಮತ್ತು ಕಳಚುವುದು […]

ಡಿ.18 ರಂದು ದ ರಾಯೋ ಮಾಬೆನ್ ಡಿಸೈನರ್ ಸ್ಟುಡಿಯೋ ಉದ್ಘಾಟನೆ

ಉಡುಪಿ: ಉಡುಪಿ ಮಣಿಪಾಲದ ಜನರಿಗಾಗಿ ಲಕ್ಷ್ಮೀಂದ್ರನಗರದ ಪ್ರೀಮಿಯರ್ ಅಪ್ ಟೌನ್ ನಲ್ಲಿ ದ ರಾಯೋ ಮಾಬೆನ್ ಡಿಸೈನರ್ ಸ್ಟುಡಿಯೋ ಇದರ ಉದ್ಘಾಟನೆಯು ಡಿ.೧೮ ಭಾನುವಾರದಂದು ಬೆಳಿಗ್ಗೆ 11.30 ಕ್ಕೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಸೆಲೆಬ್ರಿಟಿ ಫೋಟೋಗ್ರಾಫರ್ ಮತ್ತು ನಿರ್ದೇಶಕ ಸುಬಿ ಸ್ಯಾಮ್ಯುಯೆಲ್, ಯೋಗ ಶಿಕ್ಷಕಿ ಸಂಧ್ಯಾ ಕಾಮತ್ ಮತ್ತು ಬೆಲ್ ಒ ಸೀಲ್ ವಾಲ್ವ್ಸ್ ನಿರ್ದೇಶಕಿ ಸಪ್ನಾ ಸಾಲಿನ್ಸ್ ಭಾಗವಹಿಸಲಿದ್ದಾರೆ. ಡಿಸೈನರ್ ಸ್ಟುಡಿಯೋದಲ್ಲಿ ಹೊಚ್ಚ ಹೊಸ ವಿನ್ಯಾಸದ ವಸ್ತ್ರಗಳು, ಮದುವೆ, ಸಮಾರಂಭಗಳಿಗೆ […]

ದಿವ್ಯಾಂಗರ ಸೇವೆ ದೇವರ ಸೇವೆಗೆ ಸಮಾನ: ವಿಜಯ್ ಕೊಡವೂರು

ಉಡುಪಿ: ಪರಮಪೂಜ್ಯ ಶ್ರೀ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು ಶ್ರೀ ಕೃಷ್ಣಾಪುರ ಮಠ ಉಡುಪಿ ಇವರ ಆಶೀರ್ವಾದ ಹಾಗೂ ಸಹಕಾರದೊಂದಿಗೆ ಕರ್ನಾಟಕ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟ ಉಡುಪಿ ಜಿಲ್ಲೆ, ಉಡುಪಿ ಜಿಲ್ಲಾ ಮಟ್ಟದ ಸಮಗ್ರ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಒಕ್ಕೂಟ ಉಡುಪಿ ಜಿಲ್ಲೆ, ದಿವ್ಯಾಂಗರ ರಕ್ಷಣಾ ಸಮಿತಿ ಕೊಡವೂರು ಇವರ ಸಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ದಿವ್ಯಾಂಗರ ಬೃಹತ್ ಸಮಾವೇಶ ಪ್ರತಿಭಾ ಪ್ರದರ್ಶನ ಹಾಗೂ ದಿವ್ಯಾಂಗರ ಕರ ಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ […]