ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ 10% ಕೋಟಾ ಕಾನೂನನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್

ನವದೆಹಲಿ: ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ನಿವೃತ್ತರಾಗುವ ಒಂದು ದಿನದ ಮೊದಲು ನಿರ್ಣಾಯಕ ತೀರ್ಪಿನಲ್ಲಿ, ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯೂಎಸ್) 10 ಪ್ರತಿಶತ ಮೀಸಲಾತಿ ಪ್ರಯೋಜನಗಳಿಗಾಗಿ ಕೇಂದ್ರ ಕಾನೂನಿನ ಸಿಂಧುತ್ವದ ಕುರಿತು ಸುಪ್ರೀಂ ಕೋರ್ಟ್ ಸೋಮವಾರ ತನ್ನ ತೀರ್ಪನ್ನು ನೀಡಿದೆ. “ಇಡಬ್ಲ್ಯೂಎಸ್ ಕೋಟಾವು ಕಾನೂನು ಆರ್ಥಿಕ ಮಾನದಂಡಗಳನ್ನು ಗಣನೆಗೆ ತೆಗೆದುಕೊಳ್ಳುವ ಮೂಲಭೂತ ರಚನೆ ಅಥವಾ ಸಮಾನತೆಯ ಕೋಡ್ ಅನ್ನು ಉಲ್ಲಂಘಿಸುವುದಿಲ್ಲ” ಎಂದು ಕಾನೂನನ್ನು ಎತ್ತಿ ಹಿಡಿಯುತ್ತಾ ನ್ಯಾಯಮೂರ್ತಿ ದಿನೇಶ್ ಮಹೇಶ್ವರಿ ತೀರ್ಪಿತ್ತರು. ಇಡಬ್ಲ್ಯೂಎಸ್ ಕೋಟಾ ಕಾನೂನನ್ನು […]

ಕಲ್ಯಾಣಪುರ: ಶ್ರೀ ರಾಮಾಂಜನೇಯ ದೇವಸ್ಥಾನದಲ್ಲಿ ಲಕ್ಷ ತುಳಸಿ ಅರ್ಚನೆ

ಕಲ್ಯಾಣಪುರ: ಇಲ್ಲಿನ ಶ್ರೀ ರಾಮಾಂಜನೇಯ ದೇವಸ್ಥಾನದ ಟ್ರಸ್ಟ್ ವತಿಯಿಂದ ಆದಿತ್ಯವಾರದಂದು ಲಕ್ಷ ತುಳಸಿ ಅರ್ಚನೆ ಹಾಗೂ ಲಕ್ಷ ಕುಂಕುಮಾರ್ಚನೆ ನಡೆಯಿತು. ಅರ್ಚಕಶ್ರೀಕಾಂತ್ ಅವಧಾನಿಯವರ ಮಾರ್ಗದರ್ಶನ ದಲ್ಲಿ ಧಾರ್ಮಿಕ ಪೂಜಾ ವಿಧಾನಗಳು ನಡೆದವು. ಕಾಶೀನಾಥ ಭಟ್, ಸೀತಾರಾಮ್ ಭಟ್, ಗಣಪತಿ ಭಟ್, ಮಹೇಶ್ ಭಟ್, ಗಣೇಶ ಭಟ್, ಶ್ರೀಕರ್ ಭಟ್, ಪವನ್ ಭಟ್ ಸಹಕಾರ ನೀಡಿದರು. ಟ್ರಸ್ಟಿನ ಮಹಿಳಾ ಸದಸ್ಯರಿಂದ ಲಕ್ಷ ಕುಂಕುಮಾರ್ಚನೆ ಮತ್ತು ಭಜನಾ ಕಾರ್ಯಕ್ರಮ ಜರುಗಿತು. ಮಹಾ ಪೂಜೆ ಬಳಿಕ ಪ್ರಸಾದ ವಿತರಣೆ ನಡೆಯಿತು. ನೂರಾರು […]

ಕರಾವಳಿಯ ಅಭಿಜಾತ ಕಲಾವಿದ ವಿಲಾಸ್ ನಾಯಕ್ ಕೈಯಲ್ಲಿ ಮೂಡಿದ ಪಂಜುರ್ಲಿ ದೈವ

ಬೆಂಗಳೂರು: ಇಲ್ಲಿನ ಕ್ರೈಸ್ಟ್ ಯುನಿವರ್ಸಿಟಿಯ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಕರಾವಳಿಯ ಅಭಿಜಾತ ಕಲಾವಿದ ವಿಲಾಸ್ ನಾಯಕ್ ಕುಂಚದಲ್ಲಿ ಮೂಡಿರುವ ಕಾಂತಾರದ ಪಂಜುರ್ಲಿ ದೈವ ನೋಡುಗರ ಮನವನ್ನು ಸೂರೆಗೈದಿದೆ. Exhilarating experience to create Kantara Live Art in front of a massive college audience! @shetty_rishab @hombalefilms #Kantara #Liveart #Bhootakola #Mangalore #Karnataka #India #Culture #Movies #Rishabshetty #Hombale #VilasNayak #Painting #ChristCollege #ChristUniversity pic.twitter.com/Ve0epb8U5y — Vilas Nayak (@VilasNayak) November […]

ಮಣಿಪಾಲ: ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ 7ನೇ ಎಟಿಎಂ ಶಾಖೆ ಉದ್ಘಾಟನೆ

ಮಣಿಪಾಲ: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ. ಇದರ ಮಣಿಪಾಲ ಬ್ಯಾಂಕಿನ ನೂತನ ಎಟಿಎಂ ಶಾಖೆ ಭಾನುವಾರದಂದು ಮಣಿಪಾಲದ ಕಮರ್ಷಿಯಲ್ ಕಾಂಪ್ಲೆಕ್ಸ್ ನ ನೆಲ ಅಂತಸ್ತಿನಲ್ಲಿ ಉದ್ಘಾಟನೆಗೊಂಡಿತು. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ ಅಧ್ಯಕ್ಷ ಡಾ. ಎಮ್.ಎನ್. ರಾಜೇಂದ್ರ ಕುಮಾರ್ ಎಟಿಎಂ ಅನ್ನು ಉದ್ಘಾಟಿಸಿ ಮಾತನಾಡಿ, ಎಸ್.ಸಿ.ಡಿ.ಸಿ.ಸಿ ಬ್ಯಾಂಕಿನ ಆಸ್ತಿಯೆಂದರೆ ಅದು ನವೋದಯ ಸ್ವ-ಸಹಾಯ ಸಂಘದ ಮಹಿಳೆಯರು. ಎಸ್.ಸಿ.ಡಿ.ಸಿ.ಸಿಯು ಎಲ್ಲಾ ರಾಷ್ಟ್ರೀಕೃತ ವಾಣಿಜ್ಯ ಬ್ಯಾಂಕ್ ಗಳಿಗಿಂತ ಹೆಚ್ಚು ಬಡ್ಡಿಯನ್ನು (8%) ಠೇವಣಿದಾರರಿಗೆ […]

ಉಪಚುನಾವಣಾ ಫಲಿತಾಂಶ: ಏಳರಲ್ಲಿ ನಾಲ್ಕು ಸ್ಥಾನ ಬಿಜೆಪಿಗೆ; ಆರ್.ಜೆ.ಡಿ, ಶಿವಸೇನೆ, ಟಿ.ಆರ್. ಎಸ್ ಗೆ ತಲಾ ಒಂದು ಸ್ಥಾನ

ನವದೆಹಲಿ: ಹರಿಯಾಣದ ಆದಂಪುರ, ಬಿಹಾರದ ಮೊಕಮಾ ಮತ್ತು ಗೋಪಾಲ್‌ಗಂಜ್, ಮಹಾರಾಷ್ಟ್ರದ ಅಂಧೇರಿ (ಪೂರ್ವ), ತೆಲಂಗಾಣದ ಮುನುಗೋಡೆ, ಉತ್ತರ ಪ್ರದೇಶದ ಗೋಲ ಗೋಕ್ರನಾಥ ಮತ್ತು ಒಡಿಶಾದ ಧಾಮ್‌ನಗರ ಈ ಏಳು ಕ್ಷೇತ್ರಗಳಲ್ಲಿ ನವೆಂಬರ್ 3 ರಂದು ತೆರವಾದ ಸ್ಥಾನಗಳಿಗೆ ಉಪ-ಚುನಾವಣೆ ನಡೆದಿತ್ತು. ನವೆಂಬರ್ 6 ರಂದು ಫಲಿತಾಂಶ ಪ್ರಕಟವಾಗಿದ್ದು, ಒಡಿಶಾದ ಧಾಮ್‌ನಗರ, ಬಿಹಾರದ ಗೋಪಾಲ್‌ಗಂಜ್, ಹರಿಯಾಣದ ಆದಂಪುರ ಮತ್ತು ಉತ್ತರ ಪ್ರದೇಶದ ಗೋಲಾ ಗೋಕ್ರನಾಥದಲ್ಲಿ ಬಿಜೆಪಿ ಗೆದ್ದರೆ, ಅಂಧೇರಿಯಲ್ಲಿ (ಪೂರ್ವ) ಉದ್ಧವ್ ಠಾಕ್ರೆ ನೇತೃತ್ವದ ಸೇನೆಯ ರುತುಜಾ ಲಟ್ಕೆ […]