ಸೆ. 20 ರಂದು ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆ

ಉಡುಪಿ: ಜಿಲ್ಲಾ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯು ಸೆಪ್ಟಂಬರ್ 20 ರಂದು ಬೆಳಗ್ಗೆ 10.30 ಕ್ಕೆ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಬ್ರಹ್ಮಾವರ:   ಸಿವಿಲ್ ಇಂಜಿನಿಯರ್ ಗಳ  ಸಂಘದ ವತಿಯಿಂದ  ಇಂಜಿನಿಯರ್ ದಿನಾಚರಣೆ 

ಬ್ರಹ್ಮಾವರ: ಸಿವಿಲ್ ಇಂಜಿನಿಯರ್ ಗಳ  ಸಂಘದ ವತಿಯಿಂದ ಇಂಜಿನಿಯರ್ ಗಳ ದಿನವನ್ನು ಆಚ ರಿಸಲಾಯಿತು. ಈ ಸಂದರ್ಭದಲ್ಲಿ ದ್ವಿತೀಯ ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ಮುಂಡ್ಕಿನ ಜೆಡ್ಡು ದೇವರಾಜ್ ಪ್ರಭು ಅವರ ಪುತ್ರಿ ಭೂಮಿಕಾ ಪ್ರಭು ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸಾಮಾಜಿಕ ಜಾಲ ತಾಣಗಳಲ್ಲಿ ಮಕ್ಕಳ ಕಳ್ಳರ ಬಗ್ಗೆ ಸುಳ್ಳು ಸುದ್ದಿ ಹರಡಿದಲ್ಲಿ ಕ್ರಮ: ಅಕ್ಷಯ್ ಹಾಕೆ

ಉಡುಪಿ: ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಕಳ್ಳರು ಬಂದಿರುತ್ತಾರೆ ಎಂಬ ಬಗ್ಗೆ ಸುಳ್ಳು ಸುದ್ದಿ ಹರಿದಾಡುತ್ತಿದ್ದು ಈ ವಿಷಯಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ದೇಶದ/ರಾಜ್ಯದ ವಿಡಿಯೋಗಳನ್ನು ಪ್ರಕಟಿಸಲಾಗುತ್ತಿದೆ. ಇದರಿಂದ ಆತಂಕಗೊಂಡ ಸಾರ್ವಜನಿಕರು ಅಪರಿಚಿತ ಅಮಾಯಕ ವ್ಯಕ್ತಿಗಳನ್ನು ತಡೆದು ಹಲ್ಲೆ ಮಾಡುವ ಘಟನೆಗಳು ಬೆಳಕಿಗೆ ಬಂದಿರುತ್ತದೆ. ಸಾರ್ವಜನಿಕರು ತಮ್ಮ ನಗರ/ ಗ್ರಾಮ /ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಯಾವುದೇ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದ ಕೂಡಲೇ 112 ಸಹಾಯವಾಣಿಗೆ ಕರೆ ಮಾಡಿದಲ್ಲಿ ಪೊಲೀಸರು ಕೊಡಲೇ ಘಟನಾ ಸ್ಥಳಕ್ಕೆ ಬಂದು […]

ಬ್ರಹ್ಮಗಿರಿ ಲಯನ್ಸ್ ಕ್ಲಬ್ ವತಿಯಿಂದ ಇಂಜಿನಿಯರ್ ದಿನಾಚರಣೆ

ಉಡುಪಿ: ಬ್ರಹ್ಮಗಿರಿ ಲಯನ್ಸ್ ಕ್ಲಬ್ ವತಿಯಿಂದ ಇಂಜಿನಿಯರ್ ದಿನಾಚರಣೆ ಪ್ರಯುಕ್ತ ಪಾಡಿಗಾರು ಲಕ್ಷ್ಮೀ ನಾರಾಯಣ ಉಪಾಧ್ಯರನ್ನು ಗುರುವಾರದಂದು ಕಿದಿಯೂರು ಹೋಟೆಲ್ ನಲ್ಲಿ ಗೌರವಿಸಲಾಯಿತು. ಸುಮಾರು 39 ವರ್ಷಕ್ಕೂ ಹೆಚ್ಚಿನ ಕಾಲ ಸಿವಿಲ್ ಇಂಜಿನಿಯರ್ ವೃತ್ತಿಯಲ್ಲಿ ಸುಮಾರು 500 ಕ್ಕೂ ಹೆಚ್ಚು ಮನೆ ಹಾಗೂ ಕಟ್ಟಡಗಳನ್ನು ನಿರ್ಮಿಸಿದ ಇವರ ಸೇವೆ ಪರಿಗಣಿಸಿ ಶಾಲು ಹೊದಿಸಿ, ಪ್ರಶಸ್ತಿ ನೀಡಿ ಗೌರವಿಸಿ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಬ್ರಹ್ಮಗಿರಿ ಅಧ್ಯಕ್ಷ ಉಮೇಶ್ ನಾಯಕ್, ಕಿದಿಯೂರು ಹೋಟೆಲ್ ಮಾಲಕ ಭುವನೇಂದ್ರ ಕಿದಿಯೂರು […]

ಬ್ರಹ್ಮಾವರ: ಪ್ರಖ್ಯಾತ ಬರ್ಲಿನ್ ಓಕ್ ಪೀಠೋಪಕರಣ ಮಳಿಗೆ ಶುಭಾರಂಭ

ಬ್ರಹ್ಮಾವರ: ದೇಶಾದ್ಯಂತ ಮನೆ ಮಾತಾಗಿರುವ ರಾಯಲ್ ಓಕ್ ಮಾಲೀಕತ್ವದ ಹೆಸರಾಂತ ಪೀಠೋಪಕರಣಗಳ ಮಳಿಗೆ ಬರ್ಲಿನ್ ಓಕ್ ನ ನೂತನ ಶಾಖೆಯು ಬ್ರಹ್ಮಾವರದಲ್ಲಿ ಗುರುವಾರದಂದು ಶುಭಾರಂಭಗೊಂಡಿತು. ಮಾಂಡವಿ ರಿಯಲ್ ಎಸ್ಟೇಟ್ ಡೆವೆಲಪರ್ಸ್ ನ ವ್ಯವಸ್ಥಾಪಕ ನಿರ್ದೇಶಕ ಡಾ. ಜೆರ್ರಿ ವಿನ್ಸೆಂಟ್ ಡಯಾಸ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಬರ್ಲಿನ್ ಓಕ್ ಪೀಠೋಪಕರಣಗಳು ಮಹಾನಗರಗಳಾದ ಮುಂಬೈ ಬೆಂಗಳೂರು ಕೊಲ್ಕತ್ತಾ ಹೈದರಾಬಾದ್ ಮುಂತಾದ ಕಡೆ ಮಾತ್ರ ದೊರೆಯುತ್ತಿತ್ತು. ಇದೀಗ ಬ್ರಹ್ಮಾವರದಲ್ಲಿ ಸಂಸ್ಥೆಯ ಶಾಖೆ ಶುಭಾರಂಭಗೊಂಡಿರುವುದು ಉಡುಪಿ ಜನತೆಗೆ ಉತ್ಕೃಷ್ಟ ಗುಣಮಟ್ಟದ […]