ಸಂಶೋಧನಾ ವಿದ್ಯಾರ್ಥಿ ಸುಹಾಸ್ ಗೆ ಪಿಎಚ್.ಡಿ ಪದವಿ ಪ್ರದಾನ

ಉಡುಪಿ: ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡ, ಇದರ ಸಂಖ್ಯಾಶಾಸ್ತ್ರ ವಿಭಾಗದ ಸಂಶೋಧನಾ ವಿದ್ಯಾರ್ಥಿ ಸುಹಾಸ್ ಮಂಡಿಸಿದ “ಎ ಸ್ಟಡಿ ಆನ್ ಡಿಸೈನ್ ಆಂಡ್ ಅನಾಲಿಸಿಸ್ ಆಫ್ ಸರ್ವೈವಲ್ ಪ್ರೊಬ್ಯಾಬಿಲಿಟಿ ಮಾಡೆಲ್ಸ್” ಮಹಾಪ್ರಬಂಧಕ್ಕೆ “ಡಾಕ್ಟರ್ ಆಫ್ ಪಿಎಚ್.ಡಿ” ಪದವಿ ನೀಡಿ ಗೌರವಿಸಲಾಯಿತು. ವಿಶ್ವ ವಿದ್ಯಾಲಯದ ಕುಲಪತಿ ಮತ್ತು ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಸಮ್ಮುಖದಲ್ಲಿ ಡಾ. ದಿನಕರ್ ಎಮ್ ಸಾಲುಂಕೆ ಪದವಿ ಪ್ರದಾನ ಮಾಡಿದರು. ಸುಹಾಸ್ ಕೆವಿವಿಯ ಸಂಖ್ಯಾಶಾಸ್ತ್ರ ಪ್ರಾಧ್ಯಾಪಕಿ ಡಾ. ಶ್ರೀಮತಿ ಎಸ್.ಬಿ ಮುನೋಲಿ ಇವರ […]
ರಾಜ್ಯಸಭಾ ಚುನಾವಣೆ: 2 ರಾಜ್ಯಗಳಿಂದ ತಲಾ 4 ಸ್ಥಾನಗಳನ್ನು ಗೆದ್ದ ಬಿಜಿಪಿ, ಕಾಂಗ್ರೆಸ್; ಮಹಾರಾಷ್ಟ್ರ, ಹರಿಯಾಣದಲ್ಲಿ ಫಲಿತಾಂಶ ವಿಳಂಬ

ಬೆಂಗಳೂರು: ಜಿದ್ದಾಜಿದ್ದಿ ರಾಜ್ಯಸಭಾ ಚುನಾವಣಾ ಹೋರಾಟದಲ್ಲಿ ಕರ್ನಾಟಕದ ಆಡಳಿತಾರೂಢ ಬಿಜೆಪಿ ಪಕ್ಷದ ಮೂರೂ ಅಭ್ಯರ್ಥಿಗಳು ನಿರೀಕ್ಷೆಯಂತೆಯೆ ಗೆದ್ದಿದ್ದಾರೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ನಟ ಜಗ್ಗೇಶ್ ಮತ್ತು ಲೆಹರ್ ಸಿಂಗ್ ಮೂರು ರಾಜ್ಯಸಭಾ ಸ್ಥಾನಗಳನ್ನು ಗೆದ್ದು ಗೆಲುವಿನ ನಗೆ ಬೀರಿದ್ದರೆ, ಕಾಂಗ್ರೆಸ್ ಒಂದು ಸ್ಥಾನವನ್ನು ಪಡೆದುಕೊಂಡಿದೆ ಮತ್ತು ಜನತಾ ದಳ ಶೂನ್ಯ ಸಂಪಾದನೆ ಮಾಡಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಮೂರು ಮತ್ತು ಬಿಜೆಪಿ ಒಂದು ಸ್ಥಾನವನ್ನು ಗೆದ್ದಿದೆ. ಏತನ್ಮಧ್ಯೆ, ನಿಯಮಗಳ ಉಲ್ಲಂಘನೆ ಆರೋಪದ ಮೇಲೆ ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ […]
ದೈವಸ್ಥಾನಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಸಚಿವರಿಗೆ ಮನವಿ

ಕಾರ್ಕಳ: ಯರ್ಲಪಾಡಿ ಗ್ರಾಮ ಪಂಚಾಯತ್ ವತಿಯಿಂದ, ಯರ್ಲಪಾಡಿ ಗ್ರಾಮದ ಜಾರ್ಕಳ, ನೂಜಿಗುಡ್ಡೆ, ಬಾವದಕರೆ ಬ್ರಹ್ಮಮುಗೇರ ದೈವಸ್ಥಾನಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವಂತೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರಿಗೆ ವಿಶೇಷ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಪೂಜಾರಿ ಯರ್ಲಪಾಡಿ, ಯರ್ಲಪಾಡಿ ಬಿಜೆಪಿ ಗ್ರಾಮ ಸಮಿತಿ ಪ್ರಧಾನ ಕಾರ್ಯದರ್ಶಿ ಮುಸ್ತಾಫ್ ಜಾರ್ಕಳ ಉಪಸ್ಥಿತರಿದ್ದರು.
ಯಶ್ ಪಾಲ್ ಸುವರ್ಣ ಕೇವಲ ಬಿಜೆಪಿಯ ಆಸ್ತಿಯಲ್ಲ, ಸಮಸ್ತ ಹಿಂದೂ ಸಮಾಜದ ಆಸ್ತಿ: ಶ್ರೀಕಾಂತ ನಾಯಕ್

ಕಾಪು: ಯಶ್ ಪಾಲ್ ಸುವರ್ಣ ಅವರಿಗೆ ಕೊಲೆ ಬೆದರಿಕೆ ಹಾಕಿರುವುದು ಅತ್ಯಂತ ಖಂಡನೀಯ. ಸಮಾಜಘಾತುಕ ಶಕ್ತಿಗಳು ಹಿಂದುತ್ವ ಹಾಗೂ ಬಿಜೆಪಿ ಪಕ್ಷಕ್ಕಾಗಿ ಕೆಲಸ ಮಾಡುವವರನ್ನು ಈ ರೀತಿ ಬೆದರಿಸುವುದು ಅವರ ಶಂಡತನ. ಇಂತಹ ಸಮಾಜಘಾತುಕ ಶಕ್ತಿಗಳನ್ನು ಪೋಲಿಸ್ ಇಲಾಖೆ ಕೂಡಲೇ ಮಟ್ಟ ಹಾಕಬೇಕು. ಇಂತಹ ಬೆದರಿಕೆಗಳು ಸಮಾಜದ ಶಾಂತಿಯನ್ನು ಕದಡುವ ಸಾಧ್ಯತೆ ಇದೆ. ಯಶ್ ಪಾಲ್ ಸುವರ್ಣ ಕೇವಲ ಬಿಜೆಪಿಯ ಆಸ್ತಿಯಲ್ಲ, ಅವರು ಸಮಸ್ತ ಹಿಂದೂ ಸಮಾಜದ ಆಸ್ತಿ. ಅವರಿಗೆ ನಮ್ಮಂತಹ ಲಕ್ಷಾಂತರ ಹಿಂದೂಗಳ ಆಶೀರ್ವಾದವಿದ ಮತ್ತು […]
ಜೂನ್ 12: ಉಡುಪಿ-ಅಡ್ವೊಕೆಸಿ ಆಫ್ ಕನ್ಸ್ಯುಮರ್ಸ್ ಆಂಡ್ ಸಿಟಿಜನ್ಸ್ ವೇದಿಕೆಯ ಉದ್ಘಾಟನೆ

ಉಡುಪಿ: ಜೂನ್ 12 ಭಾನುವಾರದಂದು ಬೆಳಿಗ್ಗೆ 11 ಗಂಟೆಗೆ “ಯು-ಆಕ್ಟ್” (ಉಡುಪಿ- ಅಡ್ವೊಕೆಸಿ ಆಫ್ ಕನ್ಸ್ಯುಮರ್ಸ್ ಆಂಡ್ ಸಿಟಿಜನ್ಸ್) ವೇದಿಕೆಯ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟಕರಾಗಿ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಶ್ರೀ ಶಾಂತವೀರ ಶಿವಪ್ಪರವರು ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಶ್ರೀಮತಿ ಶರ್ಮಿಳಾ ಎಸ್, ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ, ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್. ವಿಷ್ಣುವರ್ಧನ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ […]