ಕುಂಭಾಶಿ: ಕೆರೆ ಸ್ವಚ್ಛತಾ ಹಾಗೂ ಮರು ನಿರ್ಮಾಣಕ್ಕೆ ರೋಹಿತ್ ಭಟ್ ಅವರಿಂದ ಚಾಲನೆ

ಕುಂದಾಪುರ: ಉಡುಪಿಯ ವೆಂಟನಾ ಫೌಂಡೇಶನ್ ನೇತೃತ್ವದಲ್ಲಿ ಕುಂಭಾಶಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊರವಡಿ ರಸ್ತೆಯ ಶ್ರೀ ವಿಷ್ಣು ಮೂರ್ತಿ ದೇವಾಸ್ಥಾನ ಸಮೀಪ ಕೊಯ್ಯಾರಿ ಕೆರೆಯನ್ನು ಸ್ಚಚ್ಚಗೊಳಿಸುವ ಕಾರ್ಯಕ್ಕೆ ಮೇ 8ರಂದು ಚಾಲನೆ ನೀಡಲಾಯಿತು. ಮುಂದಿನ ಹತ್ತು ದಿನಗಳ ಕಾಲ ನಡೆಯುವ ಸ್ವಚ್ಚತಾ ಕಾರ್ಯದ ಸಂಪೂರ್ಣ ವೆಚ್ಚವನ್ನು ಸೇವಾ ರೂಪದಲ್ಲಿ ಫೌಂಡೇಶನ್ ಮೂಲಕ ನಡೆಸಲಾಗುವುದು. ಮೊದಲು ನೀರನ್ನು ಬರಿದಾಗಿಸಿ, ಹೂಳನ್ನು ಎತ್ತಿ ಸಂಪೂರ್ಣವಾಗಿ ಸ್ವಚ್ಚಗೊಳಿಸಿ ಸುತ್ತಲಿನ ಗದ್ದೆಗಳಿಗೆ ನೀರು ಸಿಗುವಂತೆ ಮಾಡಲಾಗುವುದು. ಸ್ಥಳೀಯ ರೈತರಿಗೆ ಬೇಸಾಯದ ಜೊತೆಯಲ್ಲಿ ತರಕಾರಿ, […]

ವಿನಾಯಕ ಹೆಗಡೆ ಕಲಗದ್ದೆಗೆ ಅರೆಹೊಳೆ ಗಣಪಯ್ಯ ಸ್ಮಾರಕ ಪ್ರಶಸ್ತಿ

ಅರೆಹೊಳೆ ಪ್ರತಿಷ್ಠಾನದ ಅಧ್ಯಕ್ಷ ಅರೆಹೊಳೆ ಸದಾಶಿವ ರಾವ್ ಅವರ ತಂದೆ, ಅರೆಹೊಳೆ ಗಣಪಯ್ಯ ಅವರ ಸ್ಮರಣಾರ್ಥ, ಸಾಮಾಜಿಕ, ಧಾರ್ಮಿಕ ಕ್ಷೇತ್ರದ ಸಾಧಕರಿಗೆ ನೀಡುವ ವಾರ್ಷಿಕ ಪ್ರಶಸ್ತಿ, ‘ಅರೆಹೊಳೆ ಗಣಪಯ್ಯ ಸ್ಮಾರಕ ಪ್ರಶಸ್ತಿ’ ಯ 2022 ನೇ ಸಾಲಿನ ಪ್ರಶಸ್ತಿಗೆ ಉತ್ತರ ಕನ್ನಡ‌ಜಿಲ್ಲೆಯ ಸಿದ್ಧಾಪುರ ಸಮೀಪದ ಕಲಗದ್ದೆಯ ವಿನಾಯಕ ಹೆಗಡೆಯವರನ್ನು ಆಯ್ಕೆ ಮಾಡಲಾಗಿದೆ. ಯಕ್ಷಗಾನ ಕಲಾವಿದರಾಗಿ, ಕಲಗದ್ದೆಯಲ್ಲಿ ಯಕ್ಷನಾಟ್ಯ ವಿನಾಯಕ ದೇವಸ್ಥಾನವನ್ನು ಸ್ಥಾಪಿಸಿ, ನಿರಂತರ ಕಲಾ ಸೇವೆಯನ್ನು ಮಾಡುತ್ತಿರುವ ಇವರು, ಶಂಭು ಶಿಷ್ಯ ಯಕ್ಷಗಾನ ಪ್ರತಿಷ್ಠಾನದ ಮೂಲಕ ಪ್ರದರ್ಶನಗಳನ್ನೂ […]

ಹೆಬ್ರಿ: ಮನೆ ಬಿಟ್ಟು ಹೋದ ಹೆಂಡತಿ; ಮನನೊಂದ ಪತಿ ನೇಣಿಗೆ ಶರಣು

ಹೆಬ್ರಿ: ಹೆಂಡತಿ‌ ಮನೆ ಬಿಟ್ಟು ಹೋದ ಕಾರಣಕ್ಕಾಗಿ ಜೀವನದಲ್ಲಿ ಮನನೊಂದ ಪತಿ ಆತ್ಮಹತ್ಯೆ ಶರಣಾದ ಘಟನೆ ಹೆಬ್ರಿ ತಾಲೂಕಿನ ಪಡುಕುಡೂರು ಗ್ರಾಮದಲ್ಲಿ ನಡೆದಿದೆ. ಪಡುಕುಡೂರು ನಿವಾಸಿ 48 ವರ್ಷದ ಸುರೇಶ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಇವರು ವಿಪರೀತ ಮದ್ಯಸೇವನೆಯ ಚಟ ಹೊಂದಿದ್ದು, ಇದೇ ಕಾರಣಕ್ಕಾಗಿ ಹೆಂಡತಿಯ ಜೊತೆ ಮನಸ್ತಾಪ ಉಂಟಾಗಿ ಆಕೆ ಎರಡು ತಿಂಗಳ ಹಿಂದೆ ಮನೆ ಬಿಟ್ಟು ಹೋಗಿದ್ದರು. ಹೆಂಡತಿ ಮರಳಿ ಬಾರದ ಕಾರಣದಿಂದ ಸುರೇಶ್ ಜೀವನದಲ್ಲಿ ಮನನೊಂದು ಮನೆಯ ಕೋಣೆಯ ಪಕ್ಕಾಸಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ […]

ಸೂಪರ್ ಮಾಮ್-ಸೀಸನ್ 4- ಸ್ಪರ್ಧಾ ವಿಜೇತೆಯಾಗಿ ಹೊರಹೊಮ್ಮಿದ ಜೋಸ್ಮಿತಾ ಡಿ’ಸಿಲ್ವಾ

ಮಂಗಳೂರು: ಮಾಮ್ಸ್ ಆಫ್ ಮಂಗಳೂರು (MOM) ಎಂಬ ಆನ್‌ಲೈನ್ ಗುಂಪೊಂದು, ಮಂಗಳೂರಿನ ಸುತ್ತಮುತ್ತಲಿನ ತಾಯಂದಿರಿಗೆ ಮೇ 8 ಭಾನುವಾರದಂದು ಫೋರಮ್ ಫಿಜಾ ಮಾಲ್‌ನಲ್ಲಿ ‘ಸೂಪರ್ ಮಾಮ್ 2022 – ಸೀಸನ್ 4’ ಸ್ಪರ್ಧೆಯನ್ನು ಆಯೋಜಿಸಿದ್ದು, ಹಲವಾರು ಮಹಿಳೆಯರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಇಎಲ್‌ಸಿ (ಲಿವ್ ಯುವರ್ ಲರ್ನಿಂಗ್), ಸಿ.ಎಫ್.ಎ.ಎಲ್ (ಬಿ ಯುವರ್ ಬೆಸ್ಟ್) ವಹಿಸಿಕೊಂಡಿದ್ದರೆ, ಫೋರಮ್ ಫಿಜಾ ಮಾಲ್‌ನ ಸಹಯೋಗದೊಂದಿಗೆ ಬೋನ್ ಮಸಾಲಾ ಸಂಸ್ಥೆಯು ಸಹ ಪ್ರಾಯೋಜಕತ್ವವನ್ನು ವಹಿಸಿಕೊಂಡಿತ್ತು. ಕಾರ್ಯಕ್ರಮವನ್ನು ಡ್ರೀಮ್ ಕ್ಯಾಚರ್ಸ್ […]