ಕಾರ್ಕಳದ ‘ಗ್ರೀನ್ ಟೆಕ್’ನಲ್ಲಿ ನವರಾತ್ರಿಗೆ ವಿಶೇಷ ಆಫರ್: ಹಬ್ಬದ ಸಂಭ್ರಮದೊಂದಿಗೆ ಗೋಲ್ಡ್ ಕಾಯಿನ್ ನಿಮ್ಮದಾಗಿಸಿಕೊಳ್ಳಿ

ಕಾರ್ಕಳ: ಕಾರ್ಕಳದಲ್ಲಿ ನೂತನವಾಗಿ ಆರಂಭಗೊಂಡ ‘ಗ್ರೀನ್ ಟೆಕ್’ ಸೋಲಾರ್ ಹಾಗೂ ಬ್ಯಾಟರಿ ಉಪಕರಣಗಳ ಮಳಿಗೆಯಲ್ಲಿ‌ ನವರಾತ್ರಿ ಹಬ್ಬದ ಪ್ರಯುಕ್ತ ಅ.31ರ ವರೆಗೆ ಗೋಲ್ಡ್ ಕಾಯಿನ್ ಆಫರ್ ನಡೆಯುತ್ತಿದ್ದು, ಯಾವುದೇ ಉಪಕರಣಗಳ ಖರೀದಿಯ ಮೇಲೆ ಗ್ರಾಹಕರು ಒಂದು ಗೋಲ್ಡ್ ಕಾಯಿನ್ ಉಡುಗೊರೆಯಾಗಿ ಪಡೆದುಕೊಳ್ಳಬಹುದು. ಕಾರ್ಕಳ ಮೂರುಮಾರ್ಗದ ಎಸ್ ಸಿಡಿಸಿಸಿ ಬ್ಯಾಂಕ್ ಬಳಿಯ ಈಶ್ವರ್ ಭವನ ಕಾಂಪ್ಲೆಕ್ಸ್ ನ ನೆಲಮಹಡಿಯಲ್ಲಿ ನೂತನವಾಗಿ ಆರಂಭಗೊಂಡಿರುವ ‘ಗ್ರೀನ್ ಟೆಕ್’ ಸೆಲ್ಸ್ ಆ್ಯಂಡ್ ಸರ್ವಿಸ್ ಸೆಂಟರ್ ನಲ್ಲಿ ನವರಾತ್ರಿ ಹಬ್ಬದ ವಿಶೇಷ ಆಫರ್ ನಡೆಯುತ್ತಿದೆ. […]

ಶ್ರೀನಗರದ ಶಾಲೆ ಮೇಲೆ ಉಗ್ರರ ದಾಳಿ: ಮುಖ್ಯೋಪಾಧ್ಯಾಯಿನಿ, ಶಿಕ್ಷಕ ಮೃತ್ಯು; ಮತ್ತಿಬ್ಬರಿಗೆ ಗಾಯ

ಶ್ರೀನಗರ: ಕಾಶ್ಮೀರ ಕಾಣಿವೆಯಲ್ಲಿ ಅಲ್ಪ ಸಂಖ್ಯಾತ ಹಿಂದೂಗಳನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸುತ್ತಿರುವ ದಾಳಿ ಮುಂದುವರೆದಿದ್ದು, ಇಂದು ಸರ್ಕಾರಿ ಶಾಲೆಯ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಹಾಗೂ ಮತ್ತೊಬ್ಬ ಶಿಕ್ಷಕ ಹತ್ಯೆಯಾಗಿದ್ದು, ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆ. ಉಗ್ರರು ಗುರುವಾರ ಬೆಳಿಗ್ಗೆ ಶಾಲೆಯೊಳಗೆ ಪ್ರವೇಶಿಸಿ ಮುಖ್ಯೋಪಾಧ್ಯಾಯಿನಿ ಮತ್ತು ಮತ್ತೊಬ್ಬ ಶಿಕ್ಷಕನ ಹತ್ಯೆ ನಡೆಸಿದ್ದಾರೆ. ಬಾಲಕರ ಹೈಯರ್‌ ಸೆಕೆಂಡರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಸತಿಂದರ್ ಕೌರ್‌ ಮತ್ತು ಶಿಕ್ಷಕ ದೀಪಕ್‌ ಚಾಂದ್ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ […]

ಮಾಜಿ ಸಿಎಂ ಯಡಿಯೂರಪ್ಪ ಆಪ್ತ ಉಮೇಶ್ ಮನೆ ಮೇಲೆ ಐಟಿ ದಾಳಿ: ಅಪಾರ ದಾಖಲೆ ವಶಕ್ಕೆ

ಬೆಂಗಳೂರು: ತೆರಿಗೆ ವಂಚನೆ, ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಮಾಜಿ ಸಿಎಂ, ಬಿಜೆಪಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಆಪ್ತನ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ಬೆಳ್ಳಂಬೆಳಿಗ್ಗೆ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಭಾಷ್ಯಂ ಸರ್ಕಲ್‌ನಲ್ಲಿರುವ ಯಡಿಯೂರಪ್ಪ ಆಪ್ತ ಸಹಾಯಕ ಉಮೇಶ್ ಮನೆ ಮತ್ತು ಕಚೇರಿ ಸೇರಿ 4 ಕಡೆಗಳಲ್ಲಿ ಐಟಿ ದಾಳಿ ನಡೆದಿದೆ. ಉಮೇಶ್ ಅವರು ಮಾಜಿ ಸಿಎಂ ಯಡಿಯೂರಪ್ಪ, ಸಂಸದ ರಾಘವೇಂದ್ರ, ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಮೂವರಿಗೂ […]

ಎಸ್‌ಬಿಐನಲ್ಲಿ 2056 ಪ್ರೊಬೆಷನರಿ ಆಫೀಸರ್‌ ಹುದ್ದೆ: ಅರ್ಜಿ ಆಹ್ವಾನ

ಇನ್‌ಸ್ಟಿಟ್ಯೂಟ್ ಆಫ್ ಬ್ಯಾಂಕಿಂಗ್ ಪರ್ಸನಲ್‌ ಸೆಲೆಕ್ಷನ್ (ಐಬಿಪಿಎಸ್‌) ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಗಳು: ಸಹಾಯಕ ಪ್ರಾಧ್ಯಾಪಕರು, ರಿಸರ್ಚ್ ಅಸೋಸಿಯೇಟ್‌, ಹಿಂದಿ ಆಫೀಸರ್‌, ಐಟಿ ಎಂಜಿನಿಯರ್‌, ಐಟಿ ಡೇಟಾಬೇಸ್ ಅಡ್ಮಿನಿಸ್ಟ್ರೇಟರ್‌ ಸೇರಿದಂತೆ ಇತರ ಹುದ್ದೆಗಳು. ವಿದ್ಯಾರ್ಹತೆ: ವಿವಿಧ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿದೆ. ವಯೋಮಿತಿ: ಹುದ್ದೆಗಳಿಗೆ ಅನುಗುಣವಾಗಿ ಕನಿಷ್ಠ 21 ಹಾಗೂ ಗರಿಷ್ಠ 45 ಆಯ್ಕೆ ಪ್ರಕ್ರಿಯೆ: ಆನ್‌ಲೈನ್ ಪರೀಕ್ಷೆ ಹಾಗೂ ಇತರ ಮಾನದಂಡಗಳು ಅರ್ಜಿ […]

ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ: ಹಾನಗಲ್​​ ಕ್ಷೇತ್ರಕ್ಕೆ ಅಚ್ಚರಿಯ ಅಭ್ಯರ್ಥಿ ಆಯ್ಕೆ

ಶಿವರಾಜ ಸಜ್ಜನ್(ಎಡ) ಹಾಗೂ ರಮೇಶ ಭೂಸನೂರ(ಬಲ) ಬೆಂಗಳೂರು: ರಾಜ್ಯದಲ್ಲಿ ನಡೆಯುವ ಎರಡು ಕ್ಷೇತ್ರಗಳ ಉಪಚುನಾವಣೆಗೆ ಬಿಜೆಪಿ ಹೈಕಮಾಂಡ್ ಅಭ್ಯರ್ಥಿಗಳನ್ನು ಘೋಷಿಸಿದೆ. ಸಿಂದಗಿ ಕ್ಷೇತ್ರದಲ್ಲಿ ಮಾಜಿ ಶಾಸಕ ರಮೇಶ್ ಭೂಸನೂರು ಅವರನ್ನು ಕಣಕ್ಕಿಳಿಸಿದ್ರೆ, ಹಾನಗಲ್​​ ವಿಧಾನಸಭೆ ಕ್ಷೇತ್ರಕ್ಕೆ ಅಚ್ಚರಿಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದೆ. ಮಾಜಿ ಎಂಎಲ್ ಸಿ ಶಿವರಾಜ್ ಸಜ್ಜನ್ ಅವರಿಗೆ ಟಿಕೆಟ್ ಘೋಷಣೆ ಮಾಡಿದೆ. ಸಿಂದಗಿ ಕ್ಷೇತ್ರಕ್ಕೆ ರಮೇಶ ಭೂಸನೂರ ಅವರಿಗೆ‌ ನಿರೀಕ್ಷೆಯಂತೆ‌ ಟಿಕೆಟ್ ನೀಡಲಾಗಿದೆ. ಆದರೆ, ಹಾನಗಲ್ ನಲ್ಲಿ ಸಂಸದ ಶಿವಕುಮಾರ ಉದಾಸಿ ಅವರ ಪತ್ನಿ […]