ಮತಾಂತರ, ಗೋಕಳ್ಳತನದ ವಿರುದ್ಧದ ಹೋರಾಟಕ್ಕೆ ಬೆಂಬಲ: ಕಾರ್ಕಳ ಬಿಜೆಪಿ ಎಸ್ ಟಿ ಮೋರ್ಚಾ

ಕಾರ್ಕಳ: ಸರ್ವ ಧರ್ಮವನ್ನು ಗೌರವಿಸುವುದರ ಜೊತೆಗೆ ಮತಾಂತರ, ಗೋ ಕಳ್ಳತನ ಹಾಗೂ ಗೋ ಹತ್ಯೆಯನ್ನು ಬಲವಾಗಿ ವಿರೋಧಿಸುತ್ತೇವೆ. ಅದರ ವಿರುದ್ಧ ಹೋರಾಟ ನಡೆಸುತ್ತಿರುವ ಹಿಂದೂ ಸಂಘಟನೆಗಳಿಗೆ ಕಾರ್ಕಳ ಬಿಜೆಪಿ ಎಸ್ ಟಿ ಮೋರ್ಚಾ ಸದಾ ಬೆಂಬಲಿಸಲಿದೆ ಎಂದು ಅಧ್ಯಕ್ಷರಾದ ಕೆಪಿ ನಾಯ್ಕ್ ಹಾಗೂ ಪ್ರಧಾನ ಕಾರ್ಯದರ್ಶಿ ಗಂಗಾಧರ ಗೌಡ ಈದು ತಿಳಿಸಿದ್ದಾರೆ.

ಕಲೆಯ ಬಲದಿಂದ ಹೊಂಬೆಳಕ ಚೆಲ್ಲುತ್ತಿರುವ ವೈವಿಧ್ಯಮಯ ಕಲಾವಿದೆ ಶೃುತಿ ದಾಸ್

ಊರಿನ ಹೆಸರಿನಿಂದಾಗಿ ಅಲ್ಲಿರುವವರಿಗೆ ಮಹತ್ವತೆ ಇರುವುದುಂಟು. ಅಯೋಧ್ಯೆ, ಮಥುರಾ, ಮಿಥಿಲಾ, ಕಾಶಿ, ಉಜೈನಿ, ರಾಮೇಶ್ವರ, ಪಾಣಿಪತ್ ಮುಂತಾದ ಪ್ರದೇಶಗಳ ಜನರು ಊರುಗಳ ಪ್ರಸಿದ್ಧತೆಯಿಂದ ಗುರುತಿಸ್ಪಡುತ್ತಾರೆ. ಅವರುಗಳು ನಾವು ಇಂಥ ಊರಲ್ಲಿರುವುದು ಎಂದಾಗ ಕೇಳುಗರಿಗೆ ಏನೋ ಒಂದು ಪುಳಕ. ಕೇಳಿದವರ ಮನಸ್ಸು ವಾಯು ವೇಗದಲ್ಲಿ ಸಂಚರಿಸಿ ಆ ಊರುಗಳಿಗೆ ಸಂಬಂಧಿಸಿದ ಪೌರಾಣಿಕ, ಐತಿಹಾಸಿಕ ಮಹತ್ವವನ್ನು ಕಲ್ಪಿಸಿ ರೋಮಾಂಚನಗೊಳ್ಳುತ್ತದೆ.ಇದಕ್ಕೆ ತದ್ವಿರುದ್ಧವಾಗಿ ವಿಶಿಷ್ಟವಾದ ವ್ಯಕ್ತಿಗಳಿಂದಾಗಿ ಊರಿಗೆ ಮಹತ್ವ ಬಂದಿರುವುದನ್ನು ನಾವು ವರ್ತಮಾನ ಹಾಗೂ ಇತಿಹಾಸದಲ್ಲೂ ಕಾಣುತ್ತೇವೆ. ಕೆಲವು ಊರಿನ ಹೆಸರು ಕೇಳಿದಾಕ್ಷಣ […]

ಕೊಡವೂರು: ಕುಡಿಯುವ ನೀರಿನ ಘಟಕ ಉದ್ಘಾಟನೆ

ಕೊಡವೂರು: ಇಲ್ಲಿನ (ಸರ್ಕಲ್) ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಮತ್ತು ನಾಗರಿಕರಿಗೆ ಕುಡಿಯಲು ನೀರಿನ ಅವಶ್ಯಕತೆಯನ್ನು ಗಮನಿಸಿ ಯಾವುದೇ ಸರಕಾರದ ಅನುದಾನವನ್ನು ಕಾಯದೆ ಸ್ವತಃ ಊರಿನ ಜವಾಬ್ದಾರಿಯುತವಾದ ಸಂಘ ಸಂಸ್ಥೆಗಳ ಸಹಕಾರದಲ್ಲಿ, ಊರಿನ ದಾನಿಗಳ ಸಹಕಾರದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಯಿತು. ಕೊಡವೂರು ಶಾಲೆಯಲ್ಲಿ ಕಳೆದ 30 ವರ್ಷಕ್ಕಿಂತ ಅಧಿಕ ವರ್ಷ ಸೇವೆ ಸಲ್ಲಿಸಿದ ಶಿಕ್ಷಕರಾದ ಮಲ್ಲಿಕಾದೇವಿಯವರನ್ನು ಬೀಳ್ಕೊಡುವ ಮುಖಾಂತರ ಅವರ ಮತ್ತು ಶಾಲೆಯ ಸಂಬಂಧವನ್ನು ನೆನಪು ಮಾಡುವ ಕಾರ್ಯ ಇದಾಗಿದೆ. ಈ ಮುಖಾಂತರ ಕೊಡವೂರಿನ ನಾಗರಿಕರಿಗೆ […]

ಗುಜರಾತ್ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಆಯ್ಕೆ

ಗಾಂಧಿನಗರ: ಗುಜರಾತ್​ನ ನೂತನ ಮುಖ್ಯಮಂತ್ರಿಯಾಗಿ ಭೂಪೇಂದ್ರ ಪಟೇಲ್ ಆಯ್ಕೆಯಾಗಿದ್ದಾರೆ. ನಿನ್ನೆಯಷ್ಟೇ ಮಹತ್ವದ ಬೆಳವಣಿಗೆಯೊಂದರಲ್ಲಿ ಈ ಹಿಂದಿನ ಮುಖ್ಯಮಂತ್ರಿ ವಿಜಯ್ ರುಪಾನಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಶಾಸಕಾಂಗ ಸಭೆ ಕರೆದ ಬಿಜೆಪಿ ನಾಯಕರು ಭೂಪೇಂದ್ರ ಪಟೇಲ್ ಅವರನ್ನ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿದ್ದಾರೆ.

ಮತಾಂತರ, ಅಕ್ರಮ ಗೋಕಳ್ಳತನವನ್ನು ಹಿಂದೂ ಸಮಾಜ ಸಹಿಸದು: ಕುಯಿಲಾಡಿ ಸುರೇಶ್ ನಾಯಕ್

ಉಡುಪಿ: ಜಿಲ್ಲೆಯ ಕಾರ್ಕಳ ತಾಲೂಕಿನ ಕೆಲವೊಂದು ಭಾಗಗಳಲ್ಲಿ ಕ್ರಿಶ್ಚಿಯನ್ ಮಿಷನರಿಗಳಿಂದ ಅವ್ಯಾಹತವಾಗಿ ನಡೆಯುತ್ತಿರುವ ಮತಾಂತರ ಪ್ರಕ್ರಿಯೆ ಹಾಗೂ ಜಿಲ್ಲೆಯಾದ್ಯಂತ ನಡೆಯುತ್ತಿರುವ ಗೋ ಕಳ್ಳತನ ಮತ್ತು ಅಕ್ರಮ ಗೋ ಸಾಗಾಟನ್ನು ಹಿಂದೂ ಸಮಾಜ ಸಹಿಸುವುದಿಲ್ಲ. ಜಿಲ್ಲಾಡಳಿತ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ಮುತುವರ್ಜಿ ವಹಿಸಿ, ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಈ ಬಗ್ಗೆ ದೂರು ನೀಡಿದಾಗ ತಡ ಮಾಡದೇ ತಕ್ಷಣ ಕಾರ್ಯಾಚರಣೆ ಕೈಗೊಂಡಲ್ಲಿ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ […]