ಕೆಥೊಲಿಕ್ ಸಭಾ ಉಡುಪಿ ವಲಯ ಸಮಿತಿಯಿಂದ ದಿನಸಿ ಕಿಟ್ ವಿತರಣೆ

ಉಡುಪಿ: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಉಡುಪಿ ವಲಯ ಸಮಿತಿಯ ವತಿಯಿಂದ ಲಾಕ್ ಡೌನ್ ನಿಂದಾಗಿ ತುಂಬಾ ಸಮಸ್ಯೆಯಲ್ಲಿರುವ ಕುಟುಂಬಗಳಿಗೆ ದಿನಸಿ ಸಾಮಾಗ್ರಿಗಳ ಕಿಟ್ ವಿತರಣೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮವನ್ನು ಉಡುಪಿ ವಲಯ ಪ್ರಧಾನ ಧರ್ಮಗುರುಗಳಾದ ಚಾರ್ಲ್ಸ್ ಮಿನೇಜಸ್ ಅವರು ಸಂಬಂಧಿತ ಘಟಕದ ಅಧ್ಯಕ್ಷರುಗಳಿಗೆ ಸಾಂಕೇತಿಕವಾಗಿ ವಿತರಿಸಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು ಕೋರೊನಾ ಪ್ರತಿಯೊಬ್ಬರಿಗೆ ಇಂದು ಸಮಸ್ಯೆಯಾಗಿದ್ದು ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ನಿಯಮ ಜಾರಿಯಲ್ಲಿದ್ದು ಈ ಸಂದರ್ಭದಲ್ಲಿ ಹಲವಾರು ಕುಟುಂಬಗಳಿಗೆ […]

ಉಡುಪಿಯ ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಹಡಿಲು ಬೀಳದಂತೆ ಶಾಸಕ ರಘುಪತಿ ಭಟ್ ಕ್ರಮವಹಿಸಲಿ: ಪ್ರಮೋದ್ ಮಧ್ವರಾಜ್ ಆಗ್ರಹ

ಉಡುಪಿ: ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಜಿಲ್ಲೆಯಾದ್ಯಂತ ಬರುವ ಗರ್ಬಿಣಿ ಮಹಿಳೆಯರು ಮತ್ತು ಪುಟಾಣಿ ಮಕ್ಕಳ ಚಿಕಿತ್ಸೆಗೆ ಹಳೆಯ ಸರಕಾರಿ ಕಟ್ಟಡದ ವ್ಯವಸ್ಥೆಯಲ್ಲಿ ಬದಲಾವಣೆ ಅಗತ್ಯತೆಯನ್ನು ಮತ್ತು ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಬೇಕು ಎನ್ನುವ ಮನವಿಯನ್ನು ಪ್ರಮೋದ್ ಮಧ್ವರಾಜ್, ಸರಕಾರದ ಮುಂದಿಟ್ಟಾಗ ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಉದ್ಯಮಿ ಡಾ. ಬಿ. ಆರ್. ಶೆಟ್ಟಿಯವರು ಮುಂದೆ ಬಂದು ಉಡುಪಿಯಲ್ಲಿ ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು […]

ಉಡುಪಿ: ಎಚ್.ಆರ್.ಎಸ್ ಉಡುಪಿ ವತಿಯಿಂದ ನೂತನ ಆ್ಯಂಬುಲೆನ್ಸ್ ಲೋಕಾರ್ಪಣೆ

ಉಡುಪಿ: ಕಳೆದ ಹದಿನೇಳು ವರ್ಷದಿಂದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕಾರ್ಯಚರಿಸುವ ಸರಕಾರೇತರ ಸೇವಾ ಸಂಸ್ಥೆ ಎಚ್.ಆರ್.ಎಸ್ ವತಿಯಿಂದ ಇಂದು ಆ್ಯಂಬುಲೆನ್ಸ್ ಅನ್ನು ಲೋಕಾರ್ಪಣೆ ಮಾಡಲಾಯಿತು. ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ರೆಸಿಡೆನ್ಸ್ ಡಾಕ್ಟರ್ ಚಂದ್ರಶೇಖರ್ ಅಡಿಗ, ಸರ್ಜನ್ ಸುದೇಶ್ ಕುಮಾರ್ ಅಂಬ್ಯುಲೆನ್ಸ್ ನ ಉದ್ಘಾಟನೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಡಾ. ಚಂದ್ರಶೇಖರ್ ಅಡಿಗ ಅವರು, ಕೊರೊನಾ ಸೋಂಕು ಈ ದೇಶದ ಜನರ ಮೇಲೆ ಬಹಳಷ್ಟು ಪರಿಣಾಮ ಬೀರಿತ್ತು. ಈ ಸಂದರ್ಭದಲ್ಲಿ ಎಚ್.ಆರ್.ಎಸ್ ಸಂಸ್ಥೆ ಕೈಜೋಡಿಸಿ ನಮ್ಮೊಂದಿಗೆ […]

ಮಣಿಪಾಲ ಆರೋಗ್ಯ ಕಾರ್ಡ್ 2021ರ ನೋಂದಾವಣಿ ಪ್ರಕ್ರಿಯೆಗೆ ಚಾಲನೆ

ಮಣಿಪಾಲ: ಮಣಿಪಾಲ ಆರೋಗ್ಯ ಕಾರ್ಡ್ 2021ರ ನೋಂದಣಿ ಪ್ರಕ್ರಿಯೆಗೆ ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ವರ್ಚು ವಲ್ ವೇದಿಕೆಯ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಡಾ.‌ ಬಲ್ಲಾಳ್ ಅವರು, ಕಳೆದ 20 ವರ್ಷಗಳಲ್ಲಿ ನಾವು ಸಾಮಾಜಿಕ ಕಾಳಜಿಯೊಂದಿಗೆ ಉತ್ಕ್ರಷ್ಟ ಗುಣಮಟ್ಟದ ಚಿಕಿತ್ಸೆಯನ್ನು ರಿಯಾಯಿತಿ ದರದಲ್ಲಿ ನೀಡುವುದರ ಮೂಲಕ ಈ ಯೋಜನೆಗೆ ಹೆಚ್ಚು ಹೆಚ್ಚು ಸದಸ್ಯರನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದೇವೆ. ಮಣಿಪಾಲ್ ಕಾರ್ಡ್ “ಸಂಪೂರ್ಣ ಕುಟುಂಬಕ್ಕಾಗಿ ಶ್ರೇಷ್ಠ ಮೌಲ್ಯ ಮತ್ತು […]

ಕುತ್ತಿಗೆ ಸುತ್ತಲು ಕಪ್ಪಾಗಿದ್ದರೆ ಅಂಗೈಯಲ್ಲೇ ಇದೆ ಪರಿಹಾರ!

ನಿಮ್ಮ ಮುಖ ಮುದ್ದು ಮುದ್ದಾಗಿ, ಯಾವುದೆ ಕಲೆಗಳಿಲ್ಲದೇ ಚೆನ್ನಾಗಿಯೇ ಇರಬಹುದು. ಆದರೆ ನೀವು ಕಪ್ಪು ಕುತ್ತಿಗೆ ಹೊಂದಿದ್ದರೆ, ನಿಮ್ಮ ಮುಖದ ಆಕರ್ಷಣೆ ಕಡಿಮೆಯಾಗೋದು ಖಂಡಿತಾ. ಕಪ್ಪು ಕುತ್ತಿಗೆಗೆ ಕಾರಣವೇನು ಯೋಚಿಸಿದ್ದೀರಾ? ಕಪ್ಪಾದ ಕುತ್ತಿಗೆಗೆ ಪ್ರಾಥಮಿಕ ಕಾರಣವೆಂದರೆ ನೈರ್ಮಲ್ಯ ಕಳಪೆಯಾಗಿರಬಹುದು. ಸೌಂದರ್ಯವರ್ಧಕಗಳಲ್ಲಿನ ರಾಸಾಯನಿಕಗಳು, ಮಾಲಿನ್ಯಕಾರಕ ಮತ್ತು ಇತರ ಕೆಲವು ಕಾರಣಗಳು.  ಈ ಸಮಸ್ಯೆಗೆ ನಮ್ಮ ಅಂಗೈಯಲ್ಲೇ ಪರಿಹಾರವಿದೆ ಎನ್ನುತ್ತಾರೆ ರಮಿತಾ ಶೈಲೇಂದ್ರ ರಾವ್ ಕಿತ್ತಳೆ ಸಿಪ್ಪೆ ಹುಡಿ ವಿಟಮಿನ್ ಸಿ ಕಿತ್ತಳೆಯಲ್ಲಿದ್ದು ಇದನ್ನು ಒಣಗಿಸಿ ಮಾಡಿದ ಹುಡಿಯನ್ನು ಅರ್ಧಭಾಗ […]