ಧಾರ್ಮಿಕ ಕ್ಷೇತ್ರದಲ್ಲಿ ಮಲೆಕುಡಿಯರ ಕೊಡುಗೆ ಅಪಾರ: ಶಶಿಧರ ಕುಲಾಲ್

ಕಾರ್ಕಳ: ಧಾರ್ಮಿಕ ಕ್ಷೇತ್ರದಲ್ಲಿ ಮಲೆಕುಡಿಯ ಸಮುದಾಯದ ಸೇವೆ ಅಪಾರವಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಇನ್ನಿತರ ಎಲ್ಲಾ ದೇವಸ್ಥಾನ, ದೈವಸ್ಥಾನಗಳಲ್ಲಿ ಸಮುದಾಯದಿಂದ ಆಗುತ್ತಿರುವ ಸೇವಾ ಕಾರ್ಯವೇ ಇದಕ್ಕೆ ಸಾಕ್ಷಿಯಾಗಿದೆ. ಜಿಲ್ಲಾ ಮಟ್ಟದಲ್ಲಿ ಸಂಘಟನೆಯನ್ನು ಕಟ್ಟಿಕೊಂಡು ಪ್ರತಿ ವರ್ಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಧರ್ಮ ಜಾಗೃತಿ ಮೂಡಿಸುತ್ತಿರುವುದು ಅತ್ಯಂತ ಶ್ಲಾಘನೀಯ ಎಂದು ಶಶಿಧರ ಕುಲಾಲ್ ಹೇಳಿದರು. ಭಾನುವಾರ ನಡೆದ ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ 9ನೇ ವಾರ್ಷಿಕೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಡೀ ಜಗತ್ತಿಗೆ ಪೀಡಿಸುತ್ತಿರುವ ಕೊರೊನಾದಂತಹ […]

ಶತಮಾನೋತ್ಸವ ಸಂಭ್ರಮ: ಸಾಸ್ತಾನ ಚರ್ಚಿನಲ್ಲಿ ಧರ್ಮಗುರುಗಳು, ಧರ್ಮಭಗಿನಿಯರಿಗೆ ಹುಟ್ಟೂರ ಗೌರವ

ಕೋಟ: ಧರ್ಮಗುರು ಅಥವಾ ಧರ್ಮಭಗಿನಿಯಾಗಿ ಸೇವೆ ಮಾಡಲು ಬರುವ ಕರೆ ದೇವರ ವರವಾಗಿದ್ದು, ಅದನ್ನು ಪ್ರೀತಿಯಿಂದ ಸ್ವೀಕರಿಸಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಮೈನರ್ ಸೆಮಿನರಿಯ ನಿರ್ದೇಶಕ ಬ್ಯಾಪ್ಟಿಸ್ಟ್ ಮಿನೇಜಸ್ ಹೇಳಿದರು. ಅವರು ಸೋಮವಾರ ಸಾಸ್ತಾನ ಸಂತ ಅಂತೋನಿ ದೇವಾಲಯದ ಶತಮಾನೋತ್ಸವ ಸಂಭ್ರಮದ ಪ್ರಯುಕ್ತ ಧರ್ಮಗುರು ಅಥವ ಧರ್ಮಭಗಿನಿಯದ ಸೇವೆಯನ್ನು ನೆನೆದು ಬಲಿಪೂಜೆಯ ಪ್ರಧಾನ ಧರ್ಮಗುರುಗಳಾಗಿ ಸಂದೇಶ ನೀಡಿದರು. ಯೇಸು ಸ್ವಾಮಿ ಜಗತ್ತಿಗೆ ನೀಡಿದ ಶಾಂತಿ ಸಂದೇಶವನ್ನು ಪ್ರಸಾರ ಮಾಡುವ ಸೇವೆಯಲ್ಲಿ ಜಗತ್ತಿನಾದ್ಯಂತ ಧರ್ಮಗುರುಗಳು ಮತ್ತು ಧರ್ಮಭಗಿನಿಯರು ತಮ್ಮ […]