ಮಾರ್ಪಳ್ಳಿ: ಬಾವಿಗೆ ಬಿದ್ದ ವೃದ್ಧೆಯ ರಕ್ಷಣೆ

ಉಡುಪಿ: ಬಾವಿಗೆ ಬಿದ್ದ ವೃದ್ಧೆಯೊಬ್ಬರನ್ನು ರಕ್ಷಣೆ ಮಾಡಿದ ಘಟನೆ ಗುರುವಾರ ಕುಕ್ಕಿಕಟ್ಟೆಯ ಮಾರ್ಪಳ್ಳಿ ಬಳಿ  ನಡೆದಿದೆ. ವೃದ್ಧೆಯು ತಮ್ಮ ಮನೆಯ ಬಾವಿಗೆ ಆಕಸ್ಮಿಕವಾಗಿ ಬಿದ್ದು, ಅಸ್ವಸ್ಥರಾಗಿದ್ದರು. ಅವರನ್ನು ಉಡುಪಿ ನಗರ ಠಾಣೆಯ ಪಿ.ಎಸ್.ಐ-2 ಸದಾಶಿವ ರಾ ಗವರೋಜಿ, ಅಗ್ನಿಶಾಮಕ ದಳದ ಸಿಬ್ಬಂದಿ ವಿನಾಯಕ ಹಾಗೂ ಸ್ಥಳಿಯ ಆಟೋ ಚಾಲಕ ರಾಜೇಶ್ ನಾಯಕ್ ಅವರು ಬಾವಿಗಿಳಿದು ರಕ್ಷಿಸಿದ್ದಾರೆ. ತುರ್ತು ಜೀವರಕ್ಷಣೆ ಕಾರ್ಯಾಚರಣೆಯಲ್ಲಿ ಸಾಹಸ ಮೆರೆದಿರುವ ಜೀವರಕ್ಷಕರಿಗೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ […]

ಛತ್ರಪತಿ ಶಿವಾಜಿ ಮಹಾರಾಜ್ ಬಳಗದಿಂದ 200 ಭಗವಾಧ್ವಜ ವಿತರಣೆ

ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರದ ಶಿಲಾನ್ಯಾಸ ಕಾರ್ಯಕ್ರಮದ ಅಂಗವಾಗಿ ಛತ್ರಪತಿ ಶಿವಾಜಿ ಮಹಾರಾಜ್ ಬಳಗದಿಂದ ಎರ್ಲಪಾಡಿಯಲ್ಲಿ ಸುಮಾರು 200 ಭಗವಾ ಧ್ವಜಗಳನ್ನು ಅ.5 ರಂದು ವಿತರಿಸಲಾಯಿತು.

ಕಣಜಾರು: ಭಾರತ್ ಮಾತಾ ಪೂಜನಾ ಕಾರ್ಯಕ್ರಮ

ಬೈಲೂರು: ಹಿಂದೂ ಜಾಗರಣ ವೇದಿಕೆ, ಬೈಲೂರು ವಲಯ ಕಣಂಜಾರು ಗ್ರಾಮ, ಛತ್ರಪತಿ ಶಿವಾಜಿ ಘಟಕದ ವತಿಯಿಂದ ಭಾರತ್ ಮಾತಾ ಪೂಜನಾ ಕಾರ್ಯಕ್ರಮ ಅ.5ರಂದು ನಡೆಯಿತು. ಈ ಸಂದರ್ಭ ತಾಯಿ ಭಾರತಿ ಹಾಗೂ ಅಯೋಧ್ಯಾ ಪತಿ ಶ್ರೀರಾಮಚಂದ್ರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಸ್ಥಳೀಯ ಗಣ್ಯರಾದ ವಿಕ್ರಂ ಹೆಗ್ಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಂ.ಜಾ.ವೆ. ಜಿಲ್ಲಾ ಭೂ ಸುರಕ್ಷಾ ಸಂಯೋಜಕ ರಮೇಶ್ ಕಲ್ಲೊಟ್ಟೆ, ತಾಲೂಕು ಕಾರ್ಯದರ್ಶಿ ಗುರುಪ್ರಸಾದ್  ಶೆಟ್ಟಿ  ನಾರಾವಿ, ತಾಲೂಕು ಹಾಗೂ ನಗರ ಜವಾಬ್ದಾರಿಯ ಪ್ರಮುಖರು, ಮಾತೆಯರು ವಲಯ […]

ಬೈಲೂರು: ಭಾರತ್ ಮಾತಾ ಪೂಜನಾ ಕಾರ್ಯಕ್ರಮ

ಬೈಲೂರು: ಹಿಂದೂ ಜಾಗರಣ ವೇದಿಕೆ ಬೈಲೂರು ವಲಯ ಕೌಡೂರು ಗ್ರಾಮ, ಜೈ ಹನುಮಾನ್ ಘಟಕ ವತಿಯಿಂದ ಭಾರತ್ ಮಾತಾ ಪೂಜನಾ ಕಾರ್ಯಕ್ರಮವನ್ನು ಅ.5 ರಂದು ಕೌಡೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅರ್ಚಕರಾದ ಬಿಂದು ಮಾಧವ ಭಟ್ ಅವರ ಉಪಸ್ಥಿತಿಯಲ್ಲಿ ನಡೆಯಿತು. ಈ ಸಂದರ್ಭ ತಾಯಿ ಭಾರತಿ ಹಾಗೂ ಅಯೋಧ್ಯಾ ಪತಿ ಶ್ರೀರಾಮಚಂದ್ರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಹಿಂ.ಜಾ.ವೇ. ಜಿಲ್ಲಾ ಕಾರ್ಯದರ್ಶಿ ಮಹೇಶ್ ಬೈಲೂರು, ಹಿಂ.ಜಾ.ವೆ. ಜಿಲ್ಲಾ ಭೂ ಸುರಕ್ಷಾ ಸಂಯೋಜಕ ರಮೇಶ್ ಕಲ್ಲೊಟ್ಟೆ, ತಾಲೂಕು ಕಾರ್ಯದರ್ಶಿ ಗುರುಪ್ರಸಾದ್  ಶೆಟ್ಟಿ […]