ಸಿಎಂ ಮನೆಗೂ ಲಗ್ಗೆಯಿಟ್ಟ ಕೊರೊನಾ: ಹೆಚ್ಚುವರಿ ಕಾರು ಚಾಲಕ, ಸಿಬ್ಬಂದಿಗೆ ಕೊರೊನಾ ಪಾಸಿಟಿವ್: ಯಡಿಯೂರಪ್ಪ ಹೋಮ್ ಕ್ವಾರಂಟೈನ್

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮತ್ತಷ್ಟು ತಲ್ಲಣ ಸೃಷ್ಟಿಸುತ್ತಿದ್ದು, ದಿನೇ ದಿನೇ ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದೀಗ ಮುಖ್ಯಮಂತ್ರಿ ಮನೆಗೂ ಕೊರೊನಾ ಕಾಲಿಟ್ಟಿದ್ದು, ಸಿಎಂ ಗೃಹ ಕಚೇರಿ ಕೃಷ್ಣಾದ ಕೆಲವು ಸಿಬ್ಬಂದಿ ಮತ್ತು ಯಡಿಯೂರಪ್ಪನವರ ಹೆಚ್ಚುವರಿ ಚಾಲಕರೊಬ್ಬರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ದ್ವಿತೀಯ ಸಂಪರ್ಕಿತರು ಎಂಬ ಕಾರಣಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಮನೆಯಲ್ಲೇ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಇನ್ನು ಕೆಲವು ದಿನಗಳು ಮನೆಯಿಂದಲೇ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಮುಖ್ಯಮಂತ್ರಿಗಳು ನಿರಂತರ ಕಾರ್ಯ ನಿರ್ವಹಿಸುತ್ತಿದ್ದು, ಕಾರ್ಯಭಾರದ ಒತ್ತಡವು […]

ಕಾರ್ಕಳ ಒಳಚರಂಡಿ ಕಾಮಗಾರಿಯ ಅವಸ್ಥೆ ನೋಡಲು ನೂರು ಕಣ್ಣು ಸಾಲದು: ಎಂಚಿನ ಸಾವ್ ದ ರಸ್ತೆ ಮಾರ್ರೆ ಅಂತ ಉಗಿಯುತ್ತಿದ್ದಾರೆ ಸಾರ್ವಜನಿಕರು

♦ಲಕ್ಷ್ಮೀ ಚರಣ್ ಸಂಪತ್ ಕಾರ್ಕಳ ಕಾರ್ಕಳ : “ಎಂಚಿನ ಸಾವ್ ದ ರಸ್ತೆ ಮಾರ್ರೆ ಉಂದು “ಅಂತ ಕಾರ್ಕಳದ ಮುಖ್ಯ ಪೇಟೆಯಲ್ಲಿ ಸಂಚರಿಸುವ ಜನ ತಮ್ಮಷ್ಟಕ್ಕೇ ಈ ಮುಖ್ಯ ರಸ್ತೆಗೆ ಉಗಿಯುತ್ತಾರೆ.ಇಷ್ಟ್ ವರ್ಷ ಆದ್ರೂ ಇವರಿಗೊಂದು ರೋಡ್ ಮಾಡೋಕಾಗಿಲ್ವಾ ಅಂತ ಜನಪ್ರತಿನಿಧಿಗಳಿಗೆ ಮನ:ಪೂರ್ತಿ ಬೈಯುತ್ತಾರೆ. ಹೌದು. ಕಾರ್ಕಳ ಮುಖ್ಯ ರಸ್ತೆಯ 13 ಕೋಟಿ ವೆಚ್ಚದ ನೂತನ ಒಳಚರಂಡಿ ‌ಕಾಮಗಾರಿ ಸಂಪೂರ್ಣ ಅವೈಜ್ಞಾನಿಕತೆಯಿಂದ ಕೂಡಿದ ಪರಿಣಾಮ  ತಾಜ್ಯ ನೀರು ಸಮರ್ಪಕವಾಗಿ ಹರಿಯದೇ ರಸ್ತೆಯ ಇದ್ದ ಕಡೆಗೆಲ್ಲಾ ವ್ಯಾಪಿಸಿ,ಅಂಗಡಿಗಳಿಗೆಲ್ಲಾ ನುಗ್ಗಿ […]

ಎಂಟು ಪೊಲೀಸರನ್ನು ಹತ್ಯೆಗೈದಿದ್ದ ರೌಡಿ ವಿಕಾಸ್ ದುಬೆ ಪೊಲೀಸರ ಗುಂಡಿಗೆ ಬಲಿ

ಕಾನ್ಪುರ: ಇಲ್ಲಿನ ಎಂಟು ಮಂದಿ ಪೊಲೀಸರನ್ನು ಹತ್ಯೆಗೈದಿದ್ದ  ರೌಡಿಶೀಟರ್ ವಿಕಾಸ್ ದುಬೆ ಇಂದು ಬೆಳಿಗ್ಗೆ ಕಾನ್ಪುರದ ಹೊರವಲಯದಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಗ್ಯಾಂಗ್ ಸ್ಟಾರ್ ವಿಕಾಸ್ ದುಬೆಯನ್ನು ಮಧ್ಯಪ್ರದೇಶದ ಉಜ್ಜಯನಿ ದೇವಾಲಯವೊಂದರಲ್ಲಿ ನಿನ್ನೆ ಬಂಧಿಸಲಾಗಿತ್ತು. ಇಂದು ಬೆಳಿಗ್ಗೆ ಆತನನ್ನು ಕರೆದೊಯ್ಯುತ್ತಿದ್ದ ವೇಳೆ ಪೊಲೀಸರ ಕಾರು ಪಲ್ಟಿಯಾಗಿದ್ದು, ಈ ವೇಳೆ ವಿಕಾಸ್ ದುಬೆ ಪೊಲೀಸರ ಗನ್ ಕಸಿದು ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಪೊಲೀಸರು ಗುಂಡಿನ ದಾಳಿ ನಡೆಸಿದ್ದು, ದುಬೆ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಮಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಮತ್ತೊಂದು ಬಲಿ: ಮೃತಪಟ್ಟವರ ಸಂಖ್ಯೆ 31ಕ್ಕೆ ಏರಿಕೆ

ಮಂಗಳೂರು: ದಕ್ಷಿಣ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಮತ್ತೊಂದು ಬಲಿಯಾಗಿದೆ. ಮಂಗಳೂರು ಹೊರವಲಯದ ಹೊಸಬೆಟ್ಟುವಿನ 35 ವರ್ಷದ ಯುವಕ ನಗರದ ವೆನ್ ಲಾಕ್ ಕೊವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೊರೊನಾಗೆ 31 ಜನ ಮೃತಪಟ್ಟಿದ್ದಾರೆ.