ಕುಂದಾಪುರ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆಯ ನೂತನ ಅಧ್ಯಕ್ಷರಾಗಿ ವೆಂಕಟ ಪೂಜಾರಿ ಸಸಿಹಿತ್ಲು ಅವಿರೋಧವಾಗಿ ಆಯ್ಕೆ

ಕುಂದಾಪುರ : ತಾಲ್ಲೂಕು ಕ್ರಷಿ ಉತ್ಪನ್ನ ಮಾರುಕಟ್ಟೆಯ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಬೈಂದೂರಿನ ವೆಂಕಟ ಪೂಜಾರಿ ಸಸಿಹಿತ್ಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನೂತನ ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ವಸಂತಕುಮಾರ್ ಶೆಟ್ಟಿ ಕೆದೂರು ಆಯ್ಕೆಯಾಗಿದ್ದಾರೆ. ಕುಂದಾಪುರ ತಹಶೀಲ್ದಾರ್ ಕೆ. ಆನಂದಪ್ಪ ನಾಯ್ಕ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕಿರಣ್ ಕೊಡ್ಗಿ, ಬಿಜೆಪಿ ಮಂಡಲ ಅಧ್ಯಕ್ಷರುಗಳಾದ ಶಂಕರ ಅಂಕದಕಟ್ಟೆ, ದೀಪಕಕುಮಾರ ಶೆಟ್ಟಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಭಾಸ್ಕರ […]

ಮದುವೆಯಲ್ಲಿ ಕೊರೊನಾ ಜಾಗೃತಿ: ‘ಕೊರೊನಾ ವಿರುದ್ಧ ಜಯಿಸಲು 20 ಸೂತ್ರಗಳು’ ಕೈಪಿಡಿ ಅನಾವರಣ

ಕುಂದಾಪುರ: ಕೊರೋನಾ ಜಾಗತಿಕ ಮಹಾಮಾರಿಯಾಗಿ ಪರಿಣಮಿಸಿರುವ ಈ ಕಾಲಘಟ್ಟದಲ್ಲಿ ಕೊರೋನಾ ವಿರುದ್ಧ ಜಾಗೃತಿ ಮೂಡಿಸುವ ಕೆಲಸಗಳು ಮನೆಮನೆಯಲ್ಲಿಯೂ ಆಗಬೇಕಿದೆ. ಆ ಹಿನ್ನೆಲೆಯಲ್ಲಿ  ಬೈಂದೂರು ತಾಲೂಕು ಸೇನಾಪುರ ಗ್ರಾಮದ ಒಳಬೈಲು ಎಂಬಲ್ಲಿ ಜೂ.14ರಂದು ನಡೆದ ಸರಳ ಮದುವೆಯ ಸಡಗರದ ನಡುವೆಯೂ ಕೊರೋನಾ ಬಗ್ಗೆ ಜಾಗೃತಿ ಮೂಡಿಸುವ ‘ಕೊರೋನಾ ವಿರುದ್ಧ ಜಯಿಸಲು 20 ಸೂತ್ರಗಳು’ ಎನ್ನುವ ಕೈಪಿಡಿಯನ್ನು ಬಿಡುಗಡೆಗೊಳಿಸಿ ನೆರೆದವರಲ್ಲಿ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು. ಸೇನಾಪುರ ಗ್ರಾಮ ಒಳಬೈಲು ಶ್ರೀಮತಿ ಶಾರದಾ ಮತ್ತು ಗೋಪಾಲ ಇವರ ಪುತ್ರ ರಾಜಗುರು ಪಡುಕೋಣೆ […]

ಎಸ್.ಎಸ್.ಎಲ್.ಸಿ ಪರೀಕ್ಷೆ: ವಿದ್ಯಾರ್ಥಿಗಳ ಸುರಕ್ಷತೆಗೆ ಆದ್ಯತೆ: ಪೋಷಕರು ಅತಂಕ ಪಡುವ ಅಗತ್ಯವಿಲ್ಲ: ಜಿಲ್ಲಾಧಿಕಾರಿ

ಉಡುಪಿ ಜೂನ್ 15: ಜೂನ್ 25 ರಿಂದ ಆರಂಭವಾಗುವ ಎಸ್.ಎಸ್.ಎಲ್.ಸಿ ಪರೀಕ್ಷೆಯು ಜಿಲ್ಲೆಯಲ್ಲಿ ಒಟ್ಟು 51 ಪರೀಕ್ಷಾ ಕೇಂದ್ರಗಳಲ್ಲಿ ನಡೆಯುತ್ತಿದ್ದು, ಕೋವಿಡ್-19 ಹಿನ್ನಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗೆ ಅತ್ಯಂತ ಗರಿಷ್ಠ ಅದ್ಯತೆ ನೀಡಲಾಗಿದ್ದು, ಪೋಷಕರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದು  ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಸುರಕ್ಷತೆಗೆ ಗರಿಷ್ಠ ಆದ್ಯತೆ: ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸುವ ಕುರಿತಂತೆ ಹೈಕೋರ್ಟ್ ನೀಡಿರುವ ಸೂಚನೆಗಳಂತೆ ರಚಿಸಲಾಗಿರುವ ಎಸ್.ಓ.ಪಿ. ಅನ್ವಯ ವಿದ್ಯಾರ್ಥಿಗಳ ಸುರಕ್ಷತೆಗೆ ಗರಿಷ್ಠ ಆದ್ಯತೆ ನೀಡಿದ್ದು, ಜಿಲ್ಲೆಯ ಎಲ್ಲಾ ಎಸ್.ಎಸ್.ಎಲ್.ಸಿ. […]

ಉಡುಪಿ: ಇಂದು ಮತ್ತೆ ಎರಡು ಕೊರೊನಾ ಪ್ರಕರಣ ದೃಢ

ಉಡುಪಿ: ಜಿಲ್ಲೆಯಲ್ಲಿ ಇಂದು ಹೊಸದಾಗಿ ಎರಡು ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 1028 ಕ್ಕೆ ಏರಿಕೆಯಾಗಿದೆ. ಇಂದು 23 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ ಒಟ್ಟು 736 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಜಿಲ್ಲೆಯಲ್ಲಿ ಇನ್ನು 291 ಸಕ್ರಿಯ ಪ್ರಕರಣಗಳಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಮಿಂಚಿನ ಓಟ: ಸುಗುಣೇಂದ್ರ ಹೆಗಡೆ ಕ್ಲಿಕ್ಕಿಸಿದ ಚಿತ್ರ

ಸುಗುಣೇಂದ್ರ ಹೆಗಡೆ ಮೂಲತಃ ಬೆಳ್ತಂಗಡಿಯವರು ವೃತ್ತಿಯಲ್ಲಿ ಪರಿಣತ ಛಾಯಾಗ್ರಾಹಕರು. ವೃತ್ತಿಪರ ಛಾಯಾಚಿತ್ರಗಳ ಜೊತೆಜೊತೆಗೆ ಪರಿಸರದ ವಿವಿಧ ಭಂಗಿಗಳನ್ನು ಸೆರೆಯಾಗಿಸುವ ಇವರ ಚಿತ್ರಗಳು ಕಾಡುವಂತಿದೆ.ಆಕ್ಷನ್ ಚಿತ್ರಗಳು ಕೂಡ ಸೊಗಸಾಗಿದೆ.ಇಲ್ಲಿ ಅವರು ಕ್ಲಿಕ್ಕಿಸಿದ ಬೈಕ್ ಓಟದ ಚಿತ್ರವೊಂದಿದೆ.ಸುಗುಣೇಂದ್ರ ಬೆಳ್ತಂಗಡಿ ಸಂಪರ್ಕ:9535227051 (ನೀವು ಕ್ಲಿಕ್ಕಿಸಿದ ಕ್ರಿಯಾಶೀಲ ಚಿತ್ರಗಳನ್ನು ನಿಮ್ಮ ಸ್ವ-ವಿವರಗಳ ಜೊತೆ ಉಡುಪಿxpress  ಗೆ ಕಳುಹಿಸಿ. ಸೂಕ್ತವೆನ್ನಿಸಿದ್ದನ್ನು ZOOM IN ವಿಭಾಗದಲ್ಲಿ ಪ್ರಕಟಿಸುತ್ತೇವೆ  whatsapp:7483419099)