ಏ. 27ರಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯ ಎಲ್ಲ ಹೊರರೋಗಿ ವಿಭಾಗಗಳು ಸೇವೆಗೆ ಮುಕ್ತ 

ಮಣಿಪಾಲ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಹೊರರೋಗಿಗಳ ವಿಭಾಗಗಳು ಏಪ್ರಿಲ್ 27ರಿಂದ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಸೇವೆಗೆ ಮುಕ್ತವಾಗಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ತಿಳಿಸಿದ್ದಾರೆ. ಸಾರ್ವಜನಿಕರು ಮತ್ತು ರೋಗಿಗಳು ಈ ಸೇವಾ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಈ ಸೇವೆಯನ್ನು ಪಡೆದುಕೊಳ್ಳಲು ಬರುವ ಪ್ರತಿಯೊಂದು ರೋಗಿಯು ಆಸ್ಪತ್ರೆಯ ಹೊರಾಂಗಣದಲ್ಲಿ ಹಾಕಿರುವ ತಾತ್ಕಾಲಿಕ ಜ್ವರದ ಚಿಕಿತ್ಸಾಲಯಕ್ಕೆ ಭೇಟಿ ನೀಡಬೇಕು. ನಂತರ ಸಂಬಂಧ ಪಟ್ಟ ವಿಭಾಗಗಳಿಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದ್ದಾರೆ. ಎಲ್ಲಾ ರೋಗಿಗಳು ಮತ್ತು ಆಸ್ಪತ್ರೆಗೆ […]

ಲಾಕ್‍ ಡೌನ್ ಮುಗಿದ ನಂತರ ಎಸ್‍.ಎಸ್‍.ಎಲ್.ಸಿ ಪರೀಕ್ಷೆ ಬಗ್ಗೆ ನಿರ್ಧಾರ: ಸಚಿವ ಸುರೇಶ್ ಕುಮಾರ್

ಚಾಮರಾಜನಗರ: ಕೊರೊನಾ ವೈರಸ್ ನಿಂದ ಲಾಕ್ ಡೌನ್ ಜಾರಿಯಾಗಿದ್ದು, ಲಾಕ್‍ ಡೌನ್ ಮುಗಿದ ನಂತರ ಎಸ್‍.ಎಸ್‍.ಎಲ್.ಸಿ ಪರೀಕ್ಷೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು. ನಗರದಲ್ಲಿ ಮಾತನಾಡಿದ ಸುರೇಶ್ ಕುಮಾರ್ ಅವರು, ಪರೀಕ್ಷೆಯನ್ನು ಯಾವ ಸಮಯದಲ್ಲಿ ಮಾಡಬೇಕು, ಮಕ್ಕಳಿಗೆ ಎಷ್ಟು ಸಮಯ ಕೊಡಬೇಕು ಎಂಬುದನ್ನು ನಂತರ ತೀರ್ಮಾನ ಮಾಡುತ್ತೇವೆ. ಎಸ್ಸೆಸ್ಸೆಲ್ಸಿಗಿಂತ ದೊಡ್ಡ ಪರೀಕ್ಷೆ ಕೊರೊನಾ ವಿರುದ್ಧ ಹೋರಾಡುವುದು. ಕೆಲವರು ಪರೀಕ್ಷೆ ಅನುಮಾನವೆಂದು ಗೊಂದಲ ಮೂಡಿಸುತ್ತಿದ್ದಾರೆ. ಪರೀಕ್ಷೆ ನಡೆಯುತ್ತದೆ. […]

ಮಂಗಳೂರು: ಬಂಟ್ವಾಳದಲ್ಲಿ‌ ಮತ್ತೊಂದು‌ ಕೊರೊನಾ ಪಾಸಿಟಿವ್‌: ಮತ್ತಷ್ಟು ಆತಂಕ

ಮಂಗಳೂರು: ದ.ಕ ಜಿಲ್ಲೆಯ ಬಂಟ್ವಾಳದ ಮತ್ತೊಬ್ಬ ಮಹಿಳೆಗೆ ಕೊರೋನಾ ಪಾಸಿಟಿವ್ ಇರುವು‌ದು ದೃಢಪಟ್ಟಿದೆ. ಮೊದಲು ಮೃತಪಟ್ಟ ಮಹಿಳೆಯಿಂದ ನೆರೆಮನೆ 67 ವರ್ಷದ ವೃದ್ದೆಗೆ ಸೋಂಕು ತಗುಲಿತ್ತು. ಸದ್ಯ ಅವರು ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದು, ಇದೀಗ ಅವರ ಮಗಳಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ. ಎ.21ರಂದು ಪಾಸಿಟಿವ್ ಆಗಿದ್ದ p-409 ವೃದ್ದೆಯ ಸಂಪರ್ಕದಿಂದ 33 ವರ್ಷದ ಮಗಳಿಗೆ ಸೋಂಕು ಹರಡಿದೆ. ಬಂಟ್ವಾಳದ ಕಸಬಾ ಬಳಿಯ ನಾಲ್ಕು ಮಂದಿಗೆ ಪಾಸಿಟಿವ್ ಆಗಿದ್ದು, ಇಬ್ಬರು ಈಗಾಗಲೇ ಸಾವನ್ನಪ್ಪಿದ್ದಾರೆ. ಸದ್ಯ ಒಂದೇ ಕುಟುಂಬದ ಇಬ್ಬರಿಗೆ […]

ಉಡುಪಿXpress “Caption ಪ್ಲೀಸ್ ಸ್ಪರ್ಧೆ”: ಫೋಟೋ ನಾವ್ ಕೊಡ್ತೇವೆ, Caption ನೀವ್ ಕೊಡಿ

ಉಡುಪಿXPRESS ನ್ಯೂಸ್ ವೆಬ್ ಸೈಟ್ ಈಗಾಗಲೇ ಓದುಗರಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಓದುಗರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಅಂತದ್ದೇ ಒಂದು ಸ್ಪರ್ಧೆ Caption ಪ್ಲೀಸ್ ಆಯೋಜಿಸಿದೆ ಈ ಫೋಸ್ಟರ್ ನಲ್ಲಿರುವ ಸಿಂಗಳೀಕದ ಫೋಟೋಗೊಂದು ಚೆಂದದ caption (ಶೀರ್ಷಿಕೆ) ಕೊಡಿ,‌ ಬಹುಮಾನ ಗೆಲ್ಲಿ. *caption ಆಕರ್ಷಕವಾಗಿರಲಿ, ಒಂದು ಸಾಲು caption ಗೆ ಮಾತ್ರ ಅವಕಾಶ. *ಕನ್ನಡ ಭಾಷೆಯಲ್ಲಿ ಮಾತ್ರ Caption (ಶೀರ್ಷಿಕೆ) ಬರೆಯಲು ಅವಕಾಶ. * ನಿಮ್ಮ  ಕ್ಯಾಪ್ಷನ್ ಅನ್ನು  ಕಮೆಂಟ್ ಬಾಕ್ಸ್ ನಲ್ಲಿ ಪೋಸ್ಟ್ ಮಾಡಿ. *ಉತ್ತಮ […]

ಖ್ಯಾತ ಸಾಮಾಜಿಕ ಕಾರ್ಯಕರ್ತ, ಬಜರಂಗದಳ ಮಾಜಿ ಮುಖಂಡ ಮಹೇಂದ್ರ ಕುಮಾರ್ ಹೃದಯಾಘಾತದಿಂದ ನಿಧನ

ಬೆಂಗಳೂರು: ಖ್ಯಾತ ಸಾಮಾಜಿಕ ಕಾರ್ಯಕರ್ತ, ಬಜರಂಗದಳ ಮಾಜಿ ಮುಖಂಡ ಮಹೇಂದ್ರ ಕುಮಾರ್  ಹೃದಯಾಘಾತದಿಂದ ಶನಿವಾರ ಮುಂಜಾನೆ ನಿಧನರಾಗಿದ್ದಾರೆ. ಇವರು ಬಜರಂಗದಳದಲ್ಲಿ ತಮ್ಮ ಸಾಮಾಜಿಕ ಜೀವನ ಆರಂಭಿಸಿದ್ದರು, ಆ ಬಳಿಕ ಶಾಂತಿ, ಸೌಹಾರ್ದತೆಯ ಸಂದೇಶಗಳನ್ನು ಸಾರಲು  ಹೋರಾಡಿದ್ದರು. ಇತ್ತೀಚೆಗಷ್ಟೇ  ಸಿಎಎ. ಎನ್ಆರ್ ಸಿ ವಿರುದ್ದ ಧ್ವನಿ ಎತ್ತಿದ್ದರು. ಹಾಗೂ ವಿವಿಧ ಸಾಮಾಜಿಕ ಹೋರಾಟಗಳಿಗೆ ಜನಬೆಂಬಲ ನೀಡಿ ಗುರುತಿಸಿಕೊಂಡಿದ್ದರು.ಸಾಮಾಜಿಕ ಜಾಲ ತಾಣ ಯು ಟ್ಯೂಬ್ ಗಳಲ್ಲಿ ಸಾಮಾಜಿಕ ಸಂದೇಶ ನೀಡುವ ಅಭಿಯಾನಗಳನ್ನು ಆರಂಭಿಸುವ ಮೂಲಕ ತಮ್ಮದೇ ಆದ ಜನ ಬೆಂಬಲವನ್ನು […]