ಪೇಜಾವರ ಮಠದ ಅಧೀನ ಸಂಸ್ಥೆಯಿಂದ ಕೊರೊನಾ ಸಹಾಯಾರ್ಥ ನಿಧಿಗೆ 20 ಲಕ್ಷ ರೂ. ದೇಣಿಗೆ

ಉಡುಪಿ: ಪೇಜಾವರ ಮಠದ ಅಧೀನ ಸಂಸ್ಥೆಯಾಗಿರುವ ಮೈಸೂರಿನ ವಿಜಯ ವಿಠಲ‌ ಶಿಕ್ಷಣ ಸಂಸ್ಥೆಗಳ ವತಿಯಿಂದ ಕೊರೊನಾ ಸಂತ್ರಸ್ತರ ಪ್ರಧಾನ ಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ. ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 10 ಲಕ್ಷ ರೂ.ಗಳನ್ನು ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಸ್ಮರಣಾರ್ಥವಾಗಿ ವಿಶ್ವಪ್ರಸನ್ನತೀರ್ಥ ಶ್ರೀಪಾದರ ಮಾರ್ಗದರ್ಶನದಂತೆ ನೀಡಲಾಗಿದೆ ಎಂದು   ಸಂಸ್ಥೆಯ ಕಾರ್ಯದರ್ಶಿ ವಾಸುದೇವ ಭಟ್ ಮೈಸೂರು ತಿಳಿಸಿದ್ದಾರೆ.

ಸುಮ್ ಸುಮ್ನೆ ಮನೆಯಿಂದ ಆಚೆ ಹೋಗುವವರಿಗೆ ಈ ಹುಡುಗ ಹೇಗೆ ಜಾಡಿಸಿದ್ದಾನೆ: ನೋಡಿ ಈ ವಿಡಿಯೋ

  ಲಾಕ್ ಡೌನ್ ಸಮಯದಲ್ಲಿ ಮನೆಯಿಂದ ಸುಮ್ಮ ಸುಮ್ಮನೆ ಆಚೆ ಹೋಗುವವರಿಗೆ ತುಮಕೂರಿನ ನಿಹಾಲ್ ರಾಜ್ ಹೇಗೆ ಬುದ್ದಿ ಹೇಳಿದ್ದಾನೆ ನೋಡಿ. ಇವನ್ನಿಲ್ಲಿ ಅಪ್ಪನಿಗೆ ಪಾಠ ಹೇಳಿದ್ದರೂ ಇದು ನಮಗೆಲ್ಲಾ ಪಾಠವೆ, ಇದೊಂದು ಜಾಗೃತಿಗೋಸ್ಕರ ಹರ್ಷರಾಜ್ ,ನಿಹಾಲ್ ರಾಜ್ ,ಗಾನ ಶ್ರುತಿ ಅವರು ಮಾಡಿದ ಪುಟ್ಟ ವಿಡಿಯೋ ತುಣುಕು.