ಅಬ್ಬಕ್ಕ ಆದರ್ಶ ಪಾಲಿಸಿದವರಿಗೆ ಪ್ರಶಸ್ತಿ: ಸಚಿವ ಕೋಟ
ಉಡುಪಿ: ಅಬ್ಬಕ್ಕ ರಾಣಿಯ ಪೌರುಷ ಹಾಗೂ ಆದರ್ಶ ಪಾಲಿಸಿದ ಮಹಿಳಾ ಸಾಧಕರಿಗೆ ಈ ವರ್ಷದ ವೀರನಾರಿ ಅಬ್ಬಕ್ಕ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಬ್ಬಕ್ಕ ಉತ್ಸವ – 2020 ರ ಸಿದ್ಧತೆಗಳನ್ನು ಪರಿಶೀಲಿಸಿ ಮಾತನಾಡಿದರು. ಮುಂದಿನ ವರ್ಷದಿಂದ ಅಬ್ಬಕ್ಕ ಪ್ರಶಸ್ತಿಗೆ ಸಾಧಕರ ಆಯ್ಕೆಗೆ ಮಾನದಂಡಗಳನ್ನು ರಚಿಸಲಾಗುವುದು. ಅಲ್ಲದೇ, ಒಬ್ಬರಿಗೆ ಮಾತ್ರ ಪ್ರಶಸ್ತಿ ನೀಡಲು ಚಿಂತಿಸಲಾಗಿದೆ ಎಂದು ಸಚಿವರು ತಿಳಿಸಿದರು. ಅಬ್ಬಕ್ಕ ಉತ್ಸವ […]
ಕುಂದಾಪುರ ಶಾಸ್ತ್ರೀ ಸರ್ಕಲ್ ಕಂಪ್ಲೀಟ್ ಆದ್ಮೇಲೆ ಉದ್ಘಾಟನೆ: ಶೋಭಾ ಕರಂದ್ಲಾಜೆ
ಕುಂದಾಪುರ: ಹಲವು ಪ್ರತಿಭಟನೆಗಳ ಬಳಿಕ ಕಳೆದ ಕೆಲ ದಿನಗಳಿಂದ ವೇಗವಾಗಿ ಸಾಗುತ್ತಿರುವ ಇಲ್ಲಿನ ಶಾಸ್ತ್ರೀ ಸರ್ಕಲ್ ಫ್ಲೈಓವರ್ ಕಾಮಗಾರಿಯನ್ನು ಶುಕ್ರವಾರ ಬೆಳಿಗ್ಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದೆ ಕುಮಾರಿ ಶೋಭಾ ಕರಂದ್ಲಾಜೆ ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಶಾಸ್ರ್ತೀ ಸರ್ಕಲ್ ಫ್ಲೈಓವರ್ ಉದ್ಘಾಟನೆ ಯಾವಾಗ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಂಸದೆ ಶೋಭಾ ಕರಂದ್ಲಾಜೆ, ಕಾಮಗಾರಿ ಪೂರ್ಣಗೊಂಡ ಬಳಿಕ ಉದ್ಘಾಟನೆ ಮಾಡಲಾಗುವುದು ಎಂದು ಜಾಣ್ಮೆಯ ಉತ್ತರ ನೀಡಿದರು. ಏಪ್ರಿಲ್ ಮೊದಲಿಗೆ ಪೂರ್ಣ: ಬಳಿಕ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ನವಯುಗ ಕಂಪೆನಿ […]
ಎರಡನೇ ಮಗುವಿನ ಖುಷಿಯಲ್ಲಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ
ಮುಂಬೈ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಂದ್ರ ಮತ್ತೆ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಎರಡನೆ ಮುಗುವನ್ನು ಬರಮಾಡಿಕೊಂಡ ಶಿಲ್ಪಾ ಶೆಟ್ಟಿ ಸಂಭ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನಿಮ್ಮ ಆಶೀರ್ವಾದ ಮತ್ತು ಪ್ರೀತಿ ಪುತ್ರಿಯ ಮೇಲಿರಲಿ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡರು. ಫೆ.15ರಂದು ಶಿಲ್ಪ ಮತ್ತು ರಾಜ್ ಕುಂದ್ರ ಮುದ್ದಾದ ಹೆಣ್ಣು ಮಗುವನ್ನು ಸ್ವಾಗತ ಮಾಡಿಕೊಂಡರು. ‘ಮುದ್ದಾದ ಮಗುವಿಗೆ ಸಮಿತಾ ಶೆಟ್ಟಿ ಕುಂದ್ರ ಎಂದು ಹೆಸರಿಟ್ಟಿದ್ದೇವೆ, ನಮ್ಮ ಪ್ರಾರ್ಥನೆ ದೇವರಿಗೆ ತಲುಪಿದ್ದು, ನಮ್ಮ ಪುಟ್ಟ ದೇವತೆ ಶಮಿಶಾ ಶೆಟ್ಟಿ ಆಗಮನವನ್ನು […]
ಬಹರೇನ್ ಬಿಲ್ಲವಾಸ್ ಸಂಘಟನೆ: ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್’ಲ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ
ಅನಿವಾಸಿ ಬಿಲ್ಲವರ ಸಂಘಟನೆಯಾದ ಗುರು ಸೇವೆ ಸಮಿತಿ ಬಹರೇನ್ ಬಿಲ್ಲವಾಸ್ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಫೆ.20 ರಂದು ಬಹರೇನ್ ಬಿಲ್ಲವಾಸ್ ಅಧ್ಯಕ್ಷರಾದ ಶ್ರೀ ಸುರೇಂದ್ರ ಉದ್ಯಾವರ ಅವರ ನೇತೃತ್ವದಲ್ಲಿ ಬಿಡುಗಡೆಗೊಳಿಸಲಾಯಿತು. ಶ್ರೀ ಕ್ಷೇತ್ರದಲ್ಲಿ ನಿರ್ಮಾಣ ಗೊಂಡಿರುವ ಶ್ರೀ ಗುರು ಸಾಯನ ಬೈದ್ಯರ ಗುರು ಪೀಠದ ಸಂಪೂರ್ಣ ವೆಚ್ಚವನ್ನು ಬಹರೇನ್ ಬಿಲ್ಲವಾಸ್ ವತಿಯಿಂದ ಸೇವಾ ರೂಪದಲ್ಲಿ ವಹಿಸಿಕೊಂಡಿದ್ದೂ, ಇದು ಪುನರುತ್ಥಾನವಾಗಿ ಬ್ರಹ್ಮಕಲಶೋತ್ಸವದ ಸುಸಂದರ್ಭದಲ್ಲಿದೆ. ಈ ಸಂದರ್ಭದಲ್ಲಿ ಬಹರೇನ್ ಬಿಲ್ಲವಾಸ್ […]
ಫೆ.21: ಕೊಂಡಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ: ಶಿವರಾತ್ರಿ ಅಖಂಡ ಭಜನಾ ಮಂಗಲೋತ್ಸವ
ಹಿರಿಯಡಕ: ಶಿವರಾತ್ರಿ ಪ್ರಯುಕ್ತ ಕೊಂಡಾಡಿ ಶ್ರೀ ಮಹಾಲಿಂಗೇಶ್ವರ ಭಜನಾ ಮಂಡಳಿ ಆಶ್ರಯದಲ್ಲಿ ಅಖಂಡ ಭಜನಾ ಮಂಗಲೋತ್ಸವವು ಇಂದು ರಾತ್ರಿ ದೇವರ ಸನ್ನಿಧಿಯಲ್ಲಿ ನಡೆಯಲಿದೆ. ಸಾಯಂಕಾಲ ಗಂಟೆ 6ಕ್ಕೆ ದೇವರ ಪ್ರಾರ್ಥನೆ, ಭದ್ರದೀಪ ಸ್ಥಾಪನೆ, ಭಜನೆ ಪ್ರಾರಂಭ, 9ರಿಂದ ಗಣಯಾಗ, ನವಕಪ್ರಧಾನ ಹೋಮ, ಕಲಶ, 11ರಿಂದ ರುದ್ರಾಭಿಷೇಕ, ಕಲಶಾಭಿಷೇಕ, 12:30ಕ್ಕೆ ಮಹಾಪೂಜೆ, ಸಂಜೆ ಗಂಟೆ 4:30 ರಿಂದ ಪಂಚಾಮೃತ ಸಹಿತ ಶತರುದ್ರಾಭಿಷೇಕ, ಆರಾಧನಾ ಪೂಜೆ, 7:30 ರಿಂದ ಬಿಲ್ವಾರ್ಚನೆ, ರಾತ್ರಿ ಪೂಜೆ ನಡೆಲಿದೆ. ಫೆ.22 ರಂದು ಮಂಗಳ ಸ್ನಾನ, ಭಜನಾ […]