‘ಅವನಿ ಫರ್ನಿಚರ್’ ಶೋರೂಂ ಶುಭಾರಂಭ

ಉಡುಪಿ  ಜಿಲ್ಲೆಯಾದ್ಯಾಂತ ಮನೆಮಾತಾಗಿರುವ ಪ್ರತಿಷ್ಠಿತ  ಫರ್ನಿಚರ್ ಸಂಸ್ಥೆ ಯಾದ ಅವನಿ ಫರ್ನಿಚರ್ ಹಾಗು ಕೋಲ್ಡ್ ಡ್ರಿಂಕ್ಸ್ ಸಂಸ್ಥೆಯ ಯಿಂದ ಉಡುಪಿ ಮಲ್ಪೆ ರಸ್ತೆ ಯ ಪಂದುವೆಟ್ಟು ಸಮೀಪ ಶಿವಮತಿ ಸಂಕೀರ್ಣ ದಲ್ಲಿ  ಅವನಿ ಫರ್ನಿಚರ್ಸ್ ಶೋರೂಂ  ಇತ್ತೀಚೆಗೆ  ಶುಭಾರಂಭ ಗೊಂಡಿದೆ. ಸಿಂಡಿಕೇಟ್ ಬ್ಯಾಂಕಿನ ಅರ್ಚನ ನಲಪಾಡ್ ಶೋರೂಂ ಉದ್ಘಾಟಿಸಿದರು ,ಉದ್ಯಮಿ ಜಯಕರ್ ಪೂಜಾರಿ ಮಣಿಪಾಲ್, ಯುವರಾಜ್ ಶೆಟ್ಟಿ, ಶರತ್ ಕುಮಾರ್ ತೆಂಕನೆಡಿಯೂರು, ಲಕ್ಷ್ಮೀಶ ಬಂಗೇರ, ಮೊದಲಾದವರು ಉಪಸ್ಥಿತರಿದ್ದರು. ಐದು  ಸಾವಿರ ಚದರ ಅಡಿ  ವಿಸ್ತಾರವಾದ ಪ್ರದೇಶದಲ್ಲಿ ಆರಂಭಗೊಂಡಿರುವ […]

ಫೆ.1: ಕೊಂಡಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾರಂಗಪೂಜಾ ಸಹಿತ ವಾರ್ಷಿಕ ಶೈವೋತ್ಸವ

ಹಿರಿಯಡ್ಕ: ಹಿರಿಯಡ್ಕ ಕೊಂಡಾಡಿ ಕುದಿಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾರಂಗ ಪೂಜೆ ಸಹಿತ ವಾರ್ಷಿಕ ಶೈವೋತ್ಸವವು ಫೆ.1ರಂದು ದೇವರ ಸನ್ನಿಧಿಯಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 8 ಘಂಟೆಯಿಂದ ಗಣಯಾಗ, ಪಂಚವಿಂಶತಿ, ಕಲಶಾಧಿವಾಸ, ಪ್ರಧಾನ ಹೋಮ ಶತರುದ್ರಾಭಿಷೇಕ ಜರಗಲಿದ್ದು, 11 ಗಂಟೆಯಿಂದ ಪ್ರಧಾನ ಕಲಶಾಭಿಷೇಕ, ಪ್ರಸನ್ನ ಪೂಜೆ, ಬಿಲ್ವ ಮತ್ತು ಶ್ವೇತ ಪುಷ್ಪಾರ್ಚನೆ ನಡೆಯಲಿದೆ. 11.30ರಿಂದ ಭಕ್ತಿ ಸಂಗೀತ,12ರಿಂದ ಮಹಾಪೂಜೆ ಉತ್ಸವ ಬಲಿ ಪಲ್ಲಪೂಜೆ, ಮಧ್ಯಾಹ್ನ 1ರಿಂದ  ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 7ರಿಂದ ಆರಾಧನೆ ಪೂಜೆ, ಉತ್ಸವ ಬಲಿ, […]

ಹಾಜಬ್ಬರಿಗೆ ಬಿಂದುಶ್ರೀ ಪ್ರಶಸ್ತಿ

ಕುಂದಾಪುರ: ವಿವಿಧ ಕ್ಷೇತ್ರದ ಸಾಧಕರಿಗೆ ‘ಸುರಭಿ ರಿ. ಬೈಂದೂರು’ ಸಂಸ್ಥೆಯು ಪ್ರತಿವರ್ಷ ಕೊಡಮಾಡುತ್ತಿರುವ ‘ಬಿಂದುಶ್ರೀ’ ಪ್ರಶಸ್ತಿಗೆ ಈ ಭಾರಿ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಆಯ್ಕೆಮಾಡಲಾಗಿದ್ದು, ಫೆ.3ರಂದು ಪ್ರದಾನ ಮಾಡಲಾಗುತ್ತದೆ. ಪ್ರಶಸ್ತಿಯು ಹತ್ತು ಸಾವಿರ ರೂ. ನಗದು ಚಿನ್ನದ ಪದಕ ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ. ಫೆಬ್ರವರಿ 3ರ ಸೋಮವಾರ ಸಂಜೆ 6 ಗಂಟೆಗೆ ಬಿಂದುಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದ್ದು,  ಮುಜರಾಯಿ, ಮೀನುಗಾರಿಕೆ ಹಾಗೂ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. […]

ಮೂಡುಗಿಳಿಯಾರಿನಲ್ಲಿ ಮೂಡಲು ಸಿದ್ಧವಾಗಿದೆ  ಜಗತ್ತಿನ ಪ್ರಥಮ ಯೋಗ ಆಸ್ಪತ್ರೆ

ಕುಂದಾಪುರ: ಮೂಡುಗಿಳಿಯಾರಿನಲ್ಲಿ ನಿರ್ಮಾಣವಾದ ಪ್ರಾಚೀನ ದೇಗುಲದ ವಾಸ್ತು ವಿನ್ಯಾಸ ಹೊಂದಿರುವ ಜಗತ್ತಿನ ಪ್ರಥಮ ಯೋಗ ಆಸ್ಪತ್ರೆ ಎಂಬ ಹೆಗ್ಗಳಿಕೆ ಪಾತ್ರವಾದ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಪ್ರತಿಷ್ಠಾನ “ಯೋಗಬನ” ಫೆಬ್ರವರಿ 1 ರಂದು ಲೋಕಾರ್ಪಣೆಗೊಳ್ಳಲಿದೆ.   ಕೋಟ ಡಿವೈನ್ ಪಾರ್ಕ್‍ನ ಅಂಗಸಂಸ್ಥೆಯಾದ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರವ ಹಚ್ಚಹಸಿರಿನ ರಮಣೀಯ ವಿಶಾಲವಾದ ಪರಿಸರದಲ್ಲಿ ಅಂದಾಜು 20ಕೋ.ರೂ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಆಯುಶ್ ವಿಭಾಗದಲ್ಲಿ ದೇಶದ ಪ್ರಥಮ ಪರಿಸರಸ್ನೇಹಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಕರಾವಳಿಯ ಪ್ರಾಚೀನ […]