“ಪ್ರವರ ಹಾಲಿಡೇಸ್” ಜೊತೆ ಜಾಲಿಡೇಸ್ ಕಳೆಯಿರಿ: ಈ ಬೇಸಿಗೆ ರಜೆಯಲ್ಲೊಂದು ಟ್ರಾವೆಲ್ ಮಾಡಿ

ಇನ್ನೇನು ಬೇಸಿಗೆ ರಜೆ ಬಂತು. ಬೇಸಿಗೆಯಲ್ಲಿ ಕೂಲ್ ಕೂಲ್ ಸ್ಥಳಗಳಿಗೆ ಪ್ರವಾಸ ಮಾಡಬೇಕು ಅನ್ನುವ ಆಸೆ ಶುರುವಾಗುತ್ತದೆ. ಆ ಆಸೆಯನ್ನು ಹೇಗೆ ಈಡೇರಿಸಿಕೊಳ್ಳುವುದು ಎನ್ನುವ ಚಿಂತೆ ಬೇಡ. ಉಡುಪಿಯ ಖ್ಯಾತ ಸಂಸ್ಥೆ ಪ್ರವರ ಹಾಲಿ ಡೇಸ್, ಪ್ರವಾಸದ ಆಸಕ್ತಿ ಉಳ್ಳವರಿಗೆಂದೇ ವಿಶೇಷ ಟ್ರಾವೆಲಿಂಗ್ ಪ್ಯಾಕ್ ಗಳನ್ನು ಪರಿಚಯಿಸುತ್ತಿದೆ. ಸತತ ಮೂರು ವರ್ಷಗಳನ್ನು ಪೂರೈಸಿರುವ ಪ್ರವರ ಹಾಲಿ ಡೇಸ್, ಶಿವಮೊಗ್ಗ,ಹುಬ್ಬಳ್ಳಿ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ   ಬ್ರ್ಯಾಂಚ್ ಗಳನ್ನು ಹೊಂದಿದ್ದು, ಆಕರ್ಷಕ ಮತ್ತು ಆರ್ಥಿಕ ಸ್ನೇಹಿ ಪ್ರವಾಸದ ಸಿದ್ದತೆಗಳಿಗೆ ವೇದಿಕೆ […]

ಸ್ವೀಪ್- ಯಕ್ಷಗಾನ ಕಾರ್ಯಕ್ರಮಕ್ಕೆ ಚಾಲನೆ

ಉಡುಪಿ: ಉಡುಪಿ ಜಿಲ್ಲಾ ಸ್ವೀಪ್ ಸಮಿತಿವತಿಯಿಂದ , ಜಿಲ್ಲೆಯಲ್ಲಿ ಮತದಾನ ಜಾಗೃತಿಗಾಗಿ ಸಿದ್ದಪಡಿಸಿರುವ ಯಕ್ಷಗಾನ ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಚಂಡೆ ಬಾರಿಸುವ ಮೂಲಕ ಭಾನುವಾರ ಮಲ್ಪೆ ಬೀಚ್ ನಲ್ಲಿ ಚಾಲನೆ ನೀಡಿದರು. ಸಮೃಧ್ದಿಪುರದ ಮಹಾರಾಜನ ಕಥಾಹಿನ್ನಲೆ ಹೊಂದಿರುವ ಈ ಯಕ್ಷಗಾನದಲ್ಲಿ, ಪುತ್ರ ಸಂತಾನವಿಲ್ಲದ ಮಹಾರಾಜ ಸಹ , ತನ್ನ ಉತ್ತರಾಧಿಕಾರಿಯನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ , ಆರ್ಹ ಅಭ್ಯರ್ಥಿಯನ್ನು ಮತದಾನದ ಮೂಲಕ ಆಯ್ಕೆ ಮಾಡುವ ಕಥೆ ಇದ್ದು, ಯಾವುದೇ ಆಮಿಷಗಳಿಗೆ ಒಳಗಾಗದೇ ಪ್ರತಿಯೊಬ್ಬರೂ […]

ಹಿರಿಯಡಕ: ಬ್ರ್ಯಾಂಡ್ ರಂಗೋಲಿ ಸ್ಪರ್ಧೆ

ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು, ಹಿರಿಯಡಕ ಇಲ್ಲಿಯ ವಾಣಿಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗ ಹೋಳಿಯನ್ನು ಸೋಮವಾರ ವಿಶಿಷ್ಟ ರೀತಿಯಲ್ಲಿ ಆಚರಿಸಿತು. ಪ್ರಥಮ ವರ್ಷದ ಎಂ.ಕಾಂ. ವಿದ್ಯಾರ್ಥಿಗಳಿಗೆ ಬ್ರ್ಯಾಂಡ್ ರಂಗೋಲಿ ಸ್ಪರ್ಧೆಯನ್ನು ನಡೆಸುವ ಮೂಲಕ ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತರಲಾಯಿತು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಂಯೋಜಕ ಸ್ಪರ್ಧೆಯ ಸಂಘಟಕ ಪ್ರೊ. ಆನಂದ್ ಎಂ. ಬಿ. ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಸ್ಪರ್ಧೆಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು. ವಿದ್ಯಾರ್ಥಿಗಳು ವಿವಿಧ ಕಂಪನಿಗಳ ಬ್ರ್ಯಾಂಡ್‍ಗಳನ್ನು ರಂಗೋಲಿ ಮೂಲಕ ಬಿಡಿಸಿ, ಆಯಾ ಕಂಪನಿಯ ಬಗೆಗೆ ಔಚಿತ್ಯ […]

ಶ್ರೀ ರಾಮ ಭಜನಾ ಮಂಡಳಿ ಕೊಂಡಾಡಿ: ಎ.2 ರಿಂದ ಅಖಂಡ ಏಕಾಹ ಭಜನಾ ಮಂಗಲೋತ್ಸವ

ಉಡುಪಿ: ಶ್ರೀ ರಾಮ ಭಜನಾ ಮಂಡಳಿ ಕೊಂಡಾಡಿ ಭಜನೆ ಕಟ್ಟಿ ಹಿರಿಯಡ್ಕ  ಇದರ 45ನೇ ವರ್ಷದ ಅಖಂಡ ಏಕಾಹ ಭಜನಾ ಮಂಗಲೋತ್ಸವ ಎ.2 ರಿಂದ ಎ.13 ರ ವರೆಗೆ ಶ್ರೀ ದೇವರ ಸನ್ನಿಧಿಯಲ್ಲಿ ನಡೆಯಲಿದೆ. ಎ.2 ರಿಂದ ಸಾಯಂಕಾಲ ಗಂಟೆ 7:30 ರಿಂದ ನಿತ್ಯ ಭಜನೆ, ಎ.13 ರಂದು ಸೂರ್ಯೋದಯದಿಂದ ಏಕಾಹ ಭಜನೆ, ಮಧ್ಯಾಹ್ನ ಗಂಟೆ 12:30 ರಿಂದ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಎ. 14 ರಂದು ಸೂರ್ಯೋದಯಕ್ಕೆ ಮಂಗಳೋತ್ಸವ, ಸಂಜೆ ಗಂಟೆ 7ಕ್ಕೆ ಮರು ಭಜನೆ […]