ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ, ಮುಂಡ್ಕಿನಜೆಡ್ಡು ಇದರ 49 ನೇ ಭಜನಾ ಮಂಗಲೋತ್ಸವ ಹಾಗೂ ಯಕ್ಷಗಾನ ಕಾರ್ಯಕ್ರಮ

ಶ್ರೀ ಗೋಪಾಲಕೃಷ್ಣ ಭಜನಾ ಮಂದಿರ, ಮುಂಡ್ಕಿನಜೆಡ್ಡು ಇದರ 49 ನೇ ಭಜನಾ ಮಂಗಲೋತ್ಸವದ ಪ್ರಯುಕ್ತ ಮಂದಿರದ ಆವರಣದಲ್ಲಿ ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಸಾಲಿಗ್ರಾಮ ಮೇಳದ ಪ್ರಸಿದ್ಧ ಕಲಾವಿದರಿಂದ ಶ್ರೀ ರಾಮ ಪಟ್ಟಾಭಿಷೇಕ ಎಂಬ ಪ್ರಸಂಗ ಪ್ರದರ್ಶಿಸಲ್ಪಟ್ಟಿತು.

ಈ ಪ್ರಯುಕ್ತ ಜರುಗಿದ ಉದ್ಘಾಟನಾ ಕಾರ್ಯಕ್ರಮದಲ್ಲಿ ನಾರಾಯಣ ನಾಯ್ಕ, ಚೇರ್ಕಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಎ. ಗುರುರಾಜ ರಾವ್ ಆರೂರು ಪಂಚಾಯತ್ ಅಧ್ಯಕ್ಷರು ,ಎಂ ಬಾಲಕೃಷ್ಣ ಭಟ್, ನಿವೃತ್ತ ಪ್ರಾಧ್ಯಾಪಕರು, ಚೀಂಪ, ಹಿರಿಯ ಯಕ್ಷಗಾನಾಭಿಮಾನಿ, ರಾಜೇಂದ್ರ ಆಚಾರ್ಯ, ಮುರಳೀಧರ ಭಟ್, ಮೇಳದ ಭಾಗವತರಾದ ಚಂದ್ರಕಾಂತ ರಾವ್, ಮೂಡುಬೆಳ್ಳೆ, ಪುರುಷೋತ್ತಮ ಪ್ರಭು, ರಾಜೇಶ ಪಾಟೀಲ್, ರವಿಕುಮಾರ್ ಶೆಟ್ಟಿ, ಗೋಪಾಲಕೃಷ್ಣ ಆಚಾರ್ಯ ಮುಂತಾದವರು ಉಪಸ್ಥಿತರಿದ್ದರು.