ಉಡುಪಿ: ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ನೊಂದಣಿಯಿಲ್ಲದೆ ಬ್ರಹ್ಮಾವರ ತಾಲೂಕು ಕೆರೆಕಟ್ಟೆ
ಮನೆಯ ಬಿ.ಸುದೀಂದ್ರ ಐತಾಳ್ ಇವರು ಅನಧಿಕೃತವಾಗಿ ಪ್ರಾಣಿಗಳ ಪಾರುಗಾಣಿಕಾ ಕೇಂದ್ರವನ್ನು (ಎನಿಮಲ್ ರೆಸ್ಕ್ಯು ಸೆಂಟರ್) ನಡೆಸುತ್ತಿದ್ದು, ಮೂಲಭೂತ ಸೌಕರ್ಯಗಳ ಕೊರತೆ, ಆಹಾರ, ನೀರು, ಸ್ವಚ್ಛತೆ, ಲಸಿಕೆ, ಚಿಕಿತ್ಸೆ ಇತ್ಯಾದಿ ದಾಖಲೆಗಳು ಇರುವುದಿಲ್ಲ. ಆದ್ದರಿಂದ ಇದು ಪ್ರಾಣಿ ಹಿಂಸೆತಡೆ ಕಾಯ್ದೆ 1960 ರ ಉಲ್ಲಂಘನೆಯಾಗಿರುತ್ತದೆ.
ಆದ್ದರಿಂದ ಸಾರ್ವಜನಿಕರು ಈ ಪ್ರಾಣಿಗಳ ಪಾರುಗಾಣಿಕೆ ಕೇಂದ್ರದಲ್ಲಿ ಇನ್ನು ಮುಂದೆ ನಾಯಿ, ಬೆಕ್ಕು, ಮುದ್ದಿನ ಪಕ್ಷಿಗಳು
ಇತ್ಯಾದಿಗಳನ್ನು ನೀಡಬಾರದು. ಅನಾಥ, ಅಂಗವಿಕಲ ಮತ್ತು ಅನಾರೋಗ್ಯ ಪ್ರಾಣಿಗಳಿಗೆ ಚಿಕಿತ್ಸೆ, ಆಹಾರ ನೀಡಿ ತನ್ನದೇ ಸಮುದಾಯ ವ್ಯಾಪ್ತಿಯಲ್ಲಿ ರಕ್ಷಣೆ ಮಾಡಬೇಕು.
ಸರ್ಕಾರೇತರ ಸಂಸ್ಥೆಗಳು/ಸ್ಥಳೀಯ ಸಂಸ್ಥೆಗಳು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ ನಿಯಮಾನುಸಾರ ಪುನರ್ವಸತಿ ಕಲ್ಪಿಸಬಹುದಾಗಿದೆ ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕರ
ಕಚೇರಿ ಪ್ರಕಟಣೆ ತಿಳಿಸಿದೆ.