ಉಡುಪಿ: ರೋಟರಿ ಉಡುಪಿಯಿಂದ ನೀಲಾವರ ಸುಮೇಧ ವಿಶೇಷ ಮಕ್ಕಳ ಶಾಲೆಗೆ ಇನ್ವರ್ಟರ್ ಕೊಡುಗೆ

ಉಡುಪಿ: ರೋಟರಿ ಉಡುಪಿಯಿಂದ ನೀಲಾವರ ಸುಮೇಧ ವಿಶೇಷ ಮಕ್ಕಳ ಶಾಲೆಗೆ ಇನ್ವರ್ಟರ್ ನ ನೀಡಿದ್ದು ಅದರ ಹಸ್ತಾಂತರ ಕಾರ್ಯಕ್ರಮವು ಇತ್ತೀಚಿಗೆ ನೆರವೇರಿತು. ಅದರ ಪ್ರಾಯೋಜಕರಾದ ಶ್ರೀಯುತ ಕಮಲಾಕರ ನಾಯಕರು ಕೊಡುಗೆಯ ಹಸ್ತಾಂತರ ನೆರವೇರಿಸಿ ಇಂತಹ ಉಪಯುಕ್ತ ಸಾದನವನ್ನು ನೀಡುವರೇ ಬಹಳ ಸಂತೋಷ ವಾಗಿದೆಯೆಂದು ಹೇಳಿ ರೋಟರಿ ಈ ಸೇವಾಕಾರ್ಯಕ್ಕೆ ಅಭಿನಂದಿಸಿದರು.

ಪ್ರಾರಂಭದಲ್ಲಿ ಸುಮೇಧಾ ಸಂಸ್ಥೆಯ ಕೋಶಾಧಿಕಾರಿ ರಾಮಚಂದ್ರ ಉಪಾಧ್ಯಾಯರು ಸ್ವಾಗತಿಸಿದರು. ರೋಟರಿ ಅದ್ಯಕ್ಷ ರೋ. ಗುರುರಾಜ ಭಟ್ ಅವರು ದನ್ಯವಾದ ಸಮರ್ಪಿಸಿದರು. ನಂತರ ಡಾ. ಪಿ.ವಿ. ಭಂಡಾರಿ ಮತ್ತು ಡಾ. ಎ.ವಿ.ಬಾಳಿಗ ಆಸ್ಪತ್ರೆಯ ತಜ್ಞರಿಂದ ಎಲ್ಲಾ ಮಕ್ಕಳ ಆರೋಗ್ಯ ತಪಾಸಣೆ ಮತ್ತು ಸಮಾಲೋಚನೆ ನಡೆಸಲಾಯಿತು.

ಡಾ. ಪಿ.ವಿ.ಭಂಡಾರಿಯವರು ಮಕ್ಕಳ ಹೆತ್ತವರಿಗೆ ಉಪಯುಕ್ತ ಸಲಹೆ ಮತ್ತು ವಿಶೇಷ ಮಕ್ಕಳ ಆರೋಗ್ಯದ ಬಗ್ಗೆ ಸಮಾಲೋಚನೆ ಮಾಡಿದರು. ಕಾರ್ಯಕ್ರಮದಲ್ಲಿ ರೋಟರಿ ಕಾರ್ಯದರ್ಶಿ ರೋ. ವೈಷ್ಣವಿ ಆಚಾರ್ಯ, ರೋ. ಸುಬ್ರಹ್ಮಣ್ಯ ಕಾರಂತ, ರೋ. ಶುಭಲಕ್ಷ್ಮಿ ಭಟ್, ಶಾಲಾ ಮುಖ್ಯಸ್ಥೆ ಶ್ರೀಮತಿ ಸುಮನಾ ಪ್ರಭು ಮತ್ತು ಇತರ ಶಿಕ್ಷಕರು ಉಪಸ್ಥಿತರಿದ್ದರು.