ಉಡುಪಿ: ಇಂದು (ಡಿ.8) ತೋನ್ಸೆ ಪಡುಮನೆಯ ಕಂಬಳ ಮಹೋತ್ಸವ

ತೋನ್ಸೆ ಪಡುಮನೆತನದ ಅನುವಂಶಿಕವಾಗಿ ನಡೆದು ಬಂದವರ್ಷಾವಧಿ ಕಂಬಳ ಮಹೋತ್ಸವವು ಇಂದು (ಡಿ.8) ಮಧ್ಯಾಹ್ನ 1 ಗಂಟೆಯಿಂದ ತೋನ್ಸೆ ಪಡುಮನೆ ಕಂಬಳಪರಿಯಲ್ಲಿ ನಡೆಯಲಿದೆ.

ಮಧ್ಯಾಹ್ನ 1ಗಂಟೆಗೆ ತೋನ್ಸೆ ಗ್ರಾಪಂ‌ ಅಧ್ಯಕ್ಷೆ ಕುಸುಮ ರವೀಂದ್ರ ಕಂಬಳಕ್ಕೆ ಚಾಲನೆ ನೀಡಲಿದ್ದಾರೆ. ತೋನ್ಸೆ ಪಡುಮನೆಯ ಶುಭರಾಮ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜೆ 6ಗಂಟೆ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಲಿದ್ದು, ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಬಹುಮಾನ ವಿತರಣೆ ಮಾಡಲಿದ್ದಾರೆ.

ಸ್ಪರ್ಧಾ ವಿವರ1. ಹಗದ ಓಟ ಹಿರಿಯ (4 ಹಲ್ಲಿನ ಮೇಲಟ್ಟು)ಪ್ರಥಮ ಬಹುಮಾನ ರೂ. 10,000/- ದ್ವಿತೀಯ ಬಹುಮಾನ: ರೂ. 5,000/

2. ಹಗ್ಗದ ಓಟ ಕಿರಿಯ (4 ಹಲ್ಲಿನ ಒಳಗೆ)ಪ್ರಥಮ ಬಹುಮಾನ : ರೂ 10,000 / – ದ್ವಿತೀಯ ಬಹುಮಾನ: ರೂ. 5,000 /

3. ಹಲಗೆ :- ಪ್ರಥಮ ಬಹುಮಾನ: ರೂ. 10,000 / – ದ್ವಿತೀಯ ಬಹುಮಾನ : ರೂ. 5,000 /- ಕಂಬಳದಲ್ಲಿ ಭಾಗವಹಿಸಿದ ಪ್ರತೀ ಕೋಣಗಳ ಮಾಲಕರಿಗೆ ರೂ. 1,000 / – ಪ್ರೋತ್ಸಾಹ ಧನ ನೀಡಲಾಗುವುದು.

ನಿಖರ ಫಲಿತಾಂಶ ಬಗ್ಗೆ ಈ ಬಾರಿ ಸೆನ್ಸಾರ್ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು : 9845459384, 9448529578 ಎಂದು ಪ್ರಕಟಣೆ ತಿಳಿಸಿದೆ.