ಉಡುಪಿ: ಆತಂಕ ಸೃಷ್ಟಿಸಿದ ಯು ಟ್ಯೂಬ್ ಬ್ಲಾಗರ್ ನ ರಕ್ಷಣೆ

ಉಡುಪಿ: ಉಡುಪಿ ಬನ್ನಂಜೆ ಕೆ.ಎಸ್.ಆರ್.ಟಿ.ಸಿ ಬಸ್ ಸ್ಯ್ಟಾಂಡ್ ನಲ್ಲಿ ಯುವಕನೊಬ್ಬ ತಾನು‌ ಯು- ಟ್ಯೂಬ್ ಬ್ಲಾಗರ್ ಎಂದು ಮೊಬೈಲ್ ನಲ್ಲಿ ಚಿತ್ರೀಕರಣ ಹಾಗೂ ರೀಲ್ ಮಾಡಿ ಆತಂಕ ಸೃಷ್ಟಿಸಿ, ಸಾರ್ವಜನಿಕರಿಂದ ಧರ್ಮದೇಟು ತಿಂದಿದ್ದಾನೆ.
ಮೊಬೈಲ್ ಬಳಕೆಯಿಂದ ಖಿನ್ನತೆಗೋಳಗಾದ ಯುವಕನನ್ನು ವಿಶುಶೆಟ್ಟಿ ಅವರು ರಕ್ಷಿಸಿ, ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ.ರಕ್ಷಿಸಲ್ಪಟ್ಟ ಯುವಕನನ್ನು ಹೊರ‌ ಜಿಲ್ಲೆಯ‌ ನಂದ (18 ) ಎಂದು ಗುರುತಿಸಲಾಗಿದೆ. ತಾನು ಮನೋರೋಗಿಯಲ್ಲ ಎಂದು ಸಾಬೀತು ಮಾಡಲು ಹಾಗೂ ಯು – ಟ್ಯೂಬ್ ಬ್ಲಾಗರ್ ಆಗಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ವ್ಯಕ್ತಿಯಾಗಿ ಹಣ ಮಾಡಬೇಕೆಂಬ ಉದ್ದೇಶದಿಂದ ಈ ರೀತಿಯಾಗಿ ಮಾಡಿರುವುದಾಗಿ ರಕ್ಷಣಾ ಸಮಯದಲ್ಲಿ ಯುವಕ ತಿಳಿಸಿದ್ದಾನೆ. ಸದ್ಯ ಯುವಕನ ಸಂಬಂಧಿಕರು ಸಂಪರ್ಕಕ್ಕೆ ಸಿಕ್ಕಿದ್ದಾರೆ.