ಜೆ.ಸಿ.ಐ ಮಣಿಪಾಲ ಹಿಲ್ ಸಿಟಿ ವತಿಯಿಂದ ಯುವ ಸಬಲೀಕರಣ ತರಬೇತಿ ಕಾರ್ಯಕ್ರಮ

ಮಣಿಪಾಲ: ಮಣಿಪಾಲದ ಡಾ. ಟಿ.ಎಂ.ಎ. ಪೈ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಜೆ.ಸಿ.ಐ ಮಣಿಪಾಲ ಹಿಲ್ ಸಿಟಿ ವತಿಯಿಂದ ‘ಯುವ ಸಬಲೀಕರಣ’ ತರಬೇತಿ ಕಾರ್ಯಕ್ರಮವನ್ನು ಆ.5 ರಂದು ಹಮ್ಮಿಕೊಳ್ಳಲಾಗಿತ್ತು.

ಸಭೆಯ ಅಧ್ಯಕ್ಷತೆ ಜೇಸಿಐ ಮಣಿಪಾಲ ಹಿಲ್ ಸಿಟಿ ಅಧ್ಯಕ್ಷ ಜೇಸಿ ಜಯಂತ ತಲವಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲ ಕಾಂತರಾಜ್ ಎ.ಎನ್., ಸಂಪನ್ಮೂಲ ವ್ಯಕ್ತಿಯಾಗಿ ಜೇ.ಸಿ.ಐ. ಸೆನೆಟರ್ ಸುಭಾಷ್ ಬಂಗೇರ, ಐಕಾನಿಕ್ ತರಬೇತುದಾರರು, ಜೇಸಿಐ ಭಾರತ, ಹಾಗೂ ಜೊತೆಗೆ ಕಾಲೇಜಿನ ಪ್ರಾಧ್ಯಾಪಕ ವೃಂದದವರು ಹಾಗೂ ಜೇ.ಸಿ.ಐ. ನ ಕಾರ್ಯದರ್ಶಿ ಜೇಸಿ. ಸುನೀಲ್ ಕುಮಾರ ಮತ್ತು ಯೋಜನಾ ನಿರ್ದೇಶಕ ಜೇಸಿ. ಸಂದೀಪ್ ನಾಯಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂವಹನ ಕಲೆ, ಭಾವನಾತ್ಮಕ ಬುದ್ದಿವಂತಿಕೆ, ಕೌಶಲ್ಯ, ಮೊದಲಾದ ವಿಷಯಗಳಲ್ಲಿ ಐದು ಗಂಟೆಗಳ ತರಬೇತಿಯನ್ನು ನೀಡಿ ವಿದ್ಯಾರ್ಥಿಗಳಿಗೆ ವಿವಿಧ ಚಟುವಟಿಕೆಗಳ ಮೂಲಕ ವಿಷಯವನ್ನು ಮನದಟ್ಟು ಮಾಡಲಾಯಿತು. ವೈಯಕ್ತಿಕ ಮತ್ತೂ ಕಾಲೇಜಿನ ಕಲಿಕೆಯ ಜೀವನದಲ್ಲಿ ಸಂಹನದ ಪ್ರಾಮುಖ್ಯತೆ, ತಾಳ್ಮೆ, ಜೀವನದ ಗುರಿ ನಿರ್ಧರಣೆ, ನಾವು ಪ್ರತಿ ದಿನ ಎದುರಿಸುವ ಸಂದರ್ಭಗಳ ನಿರ್ವಹಣೆ ಗೆ ಇರಬೇಕಾದ ಭಾವನಾತ್ಮಕ ಬುದ್ದಿವಂತಿಕೆ, ಹೊಸ-ಹೊಸ ವಿಷಯಗಳನ್ನು ಗಮನಿಸುವುದು, ಸೃಷ್ಟಿಸುವುದು ಮತ್ತು ಪ್ರತಿ ವಿಷಯದಲ್ಲಿ ಹೊಸತನವನ್ನು ಕಾಣುವ ಬಗ್ಗೆ ವಿವರಿಸಲಾಯಿತು.

ಕಾಲೇಜಿನ ಪ್ರಾಧ್ಯಾಪಕ ಕಿಶನ್ ಸದಾಶಿವ ನಿರೂಪಿಸಿ, ವಂದಿಸಿದರು.

ತರಬೇತಿಯ ಕೊನೆಯಲ್ಲಿ ವಿದ್ಯಾರ್ಥಿಗಳು ತರಬೇತಿಯ ಬಗ್ಗೆ ಅವರ ಅನುಭವ ಹಂಚಿಕೊಂಡರು.