ಯರ್ಲಪಾಡಿಯಲ್ಲಿ ಶೃದ್ದಾಂಜಲಿ ಸಭೆ

ಬೈಲೂರು: ಯರ್ಲಾಪಾಡಿ ಗ್ರಾಮಸ್ಥರ ವತಿಯಿಂದ ನಿವೃತ್ತ ಸೈನಿಕರ ಅಸೋಸಿಯೇಶನ್ ಅಧ್ಯಕ್ಷ ಗಿಲ್ಬರ್ಟ್ ಬ್ರಗೋನ್ಸಾ ಅವರ ನೇತೃತ್ವದಲ್ಲಿ ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಬಾಂಬ್ ಸ್ಫೋಟದಿಂದ ಹುತಾತ್ಮರಾದ ಕೇಂದ್ರೀಯ ಮೀಸಲು ಪಡೆಯ 42 ಜನ ವೀರ ಯೋದರಿಗೆ ಶ್ರದ್ಧಾಂಜಲಿ  ಸಭೆ ಸೋಮವಾರ ರಾತ್ರಿ ನಡೆಯಿತು. ನೂರಾರು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.