ಸೌಕೂರು ಮೇಳ ಸ್ತ್ರೀ ಪಾತ್ರಧಾರಿ ದಿನೇಶ್ ಹೆನ್ನಾಬೈಲ್ ಹಾಗೂ ಪುಂಡು ವೇಷಧಾರಿ ಪ್ರಸನ್ನ ಆಚಾರ್ಯ;ರಸ್ತೆ ಅಪಘಾತದಲ್ಲಿ ನಿಧನ

ಕುಂದಾಪುರ: ಸೌಕೂರು ಮೇಳದ ಸ್ತ್ರೀ ಪಾತ್ರಧಾರಿ ದಿನೇಶ್ ಹೆನ್ನಾಬೈಲ್ ಹಾಗೂ ಪುಂಡು ವೇಷಧಾರಿ ಪ್ರಸನ್ನ ಆಚಾರ್ಯ – ಇಬ್ಬರೂ ರಾತ್ರಿಯ ಪ್ರದರ್ಶನಕ್ಕೆ ತೆರಳುತ್ತಿದ್ದಾಗ  ಗುಣವಂತೆ ಎಂಬಲ್ಲಿ ಅಪಘಾತ ಸಂಭವಿಸಿ  ನಿಧನರಾಗಿದ್ದಾರೆ . ಇಂದು ಸೌಕೂರು ಮೇಳದ ಪ್ರದರ್ಶನ ಮುರ್ಡೇಶ್ವರದಲ್ಲಿತ್ತು . ಪ್ರಸನ್ನರು ತಮ್ಮ ಊರಾದ ಹೊನ್ನಾವರಕ್ಕೆ ಇಂದು ಬೆಳಿಗ್ಗೆ ಬೈಕ್ ನಲ್ಲಿ ಸಹ ಕಲಾವಿದರಾದ ದಿನೇಶ್ ಹೆನ್ನಾಬೈಲರೊಂದಿಗೆ ತೆರಳುತಿದ್ದ  ಸಂದರ್ಭ ಈ ಅಪಘಾತ ಸಂಭವಿಸಿದೆ .