ಉಡುಪಿ: ಉಡುಪಿ ಟೆಂಪಲ್ ಸಿಟಿ ಲಿಜನ್ ಮತ್ತು ಗಿರಿಜಾ ಹೆಲ್ತ್ ಕೇರ್ ಉಡುಪಿ ಇದರ ಜಂಟಿ ಸಹಯೋಗದೊಂದಿಗೆ ಮೇ 13ರಂದು ವಿಶ್ವ ದಾದಿಯರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಗಿರಿಜಾ ಶಿವರಾಮ್ ಶೆಟ್ಟಿ, ಡಾಕ್ಟರ್ ವಿರೂಪಾಕ್ಷ ದೇವರ ಮನೆ, ನಮ್ಮ ಲಿಜನಿನ ಅಧ್ಯಕ್ಷರಾದ ಜಗದೀಶ ಕೆಮಣ್ಣು, ರಾಷ್ಟ್ರೀಯ ಅಧಿಕಾರಿಗಳಾದ ಚಿತ್ರ ಕುಮಾರ್, ವಿಜಯ್ ಕುಮಾರ್ ಉದ್ಯಾವರ, ಕಾರ್ಯದರ್ಶಿ ಸಂತೋಷ್ ಕುಮಾರ್, ಗಿರಿಜಾ ಹೆಲ್ತ್ ಕೇರ್ ನ ಮಾಲಕರಾದ ರವೀಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವಿಧ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಹಿರಿಯ 10 ಮಂದಿ ದಾದಿಯರನ್ನು ಸನ್ಮಾನಿಸಲಾಯಿತು. ಹಾಗೂ ಪ್ರಸ್ತುತ ವಿವಿಧ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 20 ದಾದಿಯರನ್ನು ಗೌರವಿಸಲಾಯಿತು.
ಡಾಕ್ಟರ್ ವಿರೂಪಾಕ್ಷ ದೇವರ ಮನೆ ಇವರು ದಾದಿಯರ ದಿನಾಚರಣೆಯ ಮಹತ್ವದ ಬಗ್ಗೆ ವಿವರವಾಗಿ ಹೇಳಿದರು.
ಶ್ರೀಮತಿ ಗಿರಿಜಾ ಶಿವರಾಮ ಶೆಟ್ಟಿ ಅವರು ಎಲ್ಲರಿಗೂ ಶುಭಹಾರೈಸಿದರು. ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿದ್ದ ರವೀಂದ್ರ ಶೆಟ್ಟಿ ಅವರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಉಡುಪಿ ಟೆಂಪಲ್ ಸಿಟಿ ಲಿಜನನ ನಿಕಟಪೂರ್ವ ಅಧ್ಯಕ್ಷರಾದ ಸುಕುಮಾರ್, ಉಪಾಧ್ಯಕ್ಷರಾದ ಆಲ್ವಿನ್ ಮಿನೇಜಸ್, ನಿರ್ದೇಶಕರಾದ ರವಿರಾಜ್, ದಯಾನಂದ ಶೆಟ್ಟಿ, ತುಳಸಿದಾಸ್ ಉಪಸ್ಥಿತರಿದ್ದರು.












