ಕೊರೋನಾ ಸಂಕಷ್ಟಕ್ಕೆ ಸಿಲುಕಿದ ಸಣ್ಣ ಉದ್ದಿಮೆಗಳಿಗೆ ವಿಶ್ವಬ್ಯಾಂಕ್ ನೆರವು

ನವದೆಹಲಿ: ಕೊರೊನಾದಿಂದ ಸಂಕಷ್ಟಕ್ಕೆ ಸಿಲುಕಿದ 15 ಕೋಟಿ ಸಣ್ಣ ಉದ್ದಿಮೆಗಳಿಗೆ 5,625 ಕೋಟಿ ರೂ. ನೆರವು ನೀಡುವುದಾಗಿ ವಿಶ್ವ ಬ್ಯಾಂಕ್‌ ತಿಳಿಸಿದೆ.
ಕೇಂದ್ರ ಸರ್ಕಾರವು ಆತ್ಮನಿರ್ಭರ ಭಾರತ್‌ ಹೆಸರಿನಲ್ಲಿ ಎಂಎಸ್‌ಎಂಇಗಳಿಗೆ  3.7 ಲಕ್ಷ ಕೋಟಿ ರೂ. ಮೊತ್ತದ ಪ್ಯಾಕೇಜ್‌ ಘೋಷಿಸಿರುವ ನಿರ್ಧಾರಕ್ಕೆ ವಿಶ್ವ ಬ್ಯಾಂಕ್‌ ಮೆಚ್ಚುಗೆ ವ್ಯಕ್ತಪಡಿಸಿದ್ದು, ಬ್ಯಾಂಕ್‌ ಅಥವಾ ಎಸ್‌ಐಡಿಬಿಐ ಮೂಲಕ ಮಾರುಕಟ್ಟೆಗೆ ನಗದು ಪೂರೈಕೆ ಮಾಡಲು ಆರ್‌ಬಿಐ ಸೂಕ್ತ ಕ್ರಮ ಕೈಗೊಂಡಿದೆ ಎಂದು ವಿಶ್ವ ಬ್ಯಾಂಕ್‌ ಭಾರತದ ನಿರ್ದೇಶಕ ಜುನೈದ್‌ ಅಹ್ಮದ್ ಹೇಳಿದ್ದಾರೆ.
ವಿಶ್ವ ಬ್ಯಾಂಕ್‌ ಒಟ್ಟು 20,625 ಕೋಟಿ ರೂ. ಮೊತ್ತವು ನೆರವು ನೀಡಿದ್ದು, ಅದರಲ್ಲಿ ಸಾಮಾಜಿಕ ಮತ್ತು ಆರೋಗ್ಯ ವಲಯಕ್ಕೆ ₹ 15 ಸಾವಿರ ಕೋಟಿ ಮೊತ್ತದ ನೆರವು ಘೋಷಿಸಿದೆ ಎಂದು ಅವರು ತಿಳಿಸಿದರು.