ನರೇಂದ್ರ ಮೋದಿಯವರಂತ ಆದರ್ಶ ವ್ಯಕ್ತಿತ್ವ ನಮ್ಮದಾಗಬೇಕು: ವಿಜಯ ಕೊಡವೂರು

ಉಡುಪಿ: ಪರ್ಯಾಯ ಕೃಷ್ಣಾಪುರ ಮಠ ಉಡುಪಿ, ಮೋದಿ ಉತ್ಸವ ಸಮಿತಿ ಉಡುಪಿ,
ಡಾಟ್ ಪ್ರಿಂಟ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ನರೇಂದ್ರ ಮೋದಿ ಅವರ 73ನೇ ಜನ್ಮ ದಿನದ ಪ್ರಯುಕ್ತ ಮೋದಿ ಉತ್ಸವ -2023 ಕಾರ್ಯಕ್ರಮವು ರಾಜಾಂಗಣದಲ್ಲಿ ಸೆ. 17 ರಂದು ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಕೆ ವಿಜಯ್ ಕೊಡವೂರು, ರಾಮನ ಆದರ್ಶದಂತೆ ಬದುಕಿದವರು ನರೇಂದ್ರ ಮೋದಿ. ರಾಮ ತಂದೆ ಮಾತಿಗೋಸ್ಕರ ಕಾಡಿಗೆ ಹೋಗಿ ಧರ್ಮ ಯುದ್ಧದ ಮುಖಾಂತರ ಜಯಿಸಿ ಬಂದರೆ, ನರೇಂದ್ರ ಮೋದಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯರ ಒಂದು ಸಂಸ್ಕಾರಯುತವಾದ ಮಾತಿಗೊಸ್ಕರ ತನ್ನ ಬದುಕನ್ನು ಬಿಟ್ಟು ಸಮಾಜಕ್ಕೋಸ್ಕರ ಬದುಕಿದ ನರೇಂದ್ರ ಮೋದಿ. ಇವರ ಹುಟ್ಟುಹಬ್ಬ ಆಚರಿಸುವುದೇ ಒಂದು ಹೆಮ್ಮೆಯ ಕಾರ್ಯ. ನಾವು ನರೇಂದ್ರ ಮೋದಿಯವರ ಹೆಸರನ್ನು ಹೇಳುತ್ತಾ ಬದುಕುವುದಕ್ಕಿಂತ ನರೇಂದ್ರ ಮೋದಿಯಂತೆಯೆ ಆಗಬೇಕೆಂದು ಸಂಕಲ್ಪ ಮಾಡಿಕೊಳ್ಳಬೇಕಾಗಿದೆ ಎಂದರು.

ದೇಶ ಕಂಡ ಬಲಿಷ್ಠ ದೇಶಭಕ್ತ ಪ್ರಧಾನಮಂತ್ರಿ ವಿಶ್ವನಾಯಕನಾಗಿರುವಂತಹ ನರೇಂದ್ರ ಮೋದಿಯವರ 73ನೇ ಹುಟ್ಟು ಹಬ್ಬದ ಪ್ರಯುಕ್ತ ಉಡುಪಿ ಜಿಲ್ಲೆಯಲ್ಲಿ ಮೋದಿ ಉತ್ಸವ ಸಮಿತಿಯನ್ನು ರಚಿಸಿಕೊಂಡು ಅನೇಕ ಸೇವಾ ಕಾರ್ಯಗಳನ್ನು ಮಾಡಬೇಕು ಎಂದು ಯೋಚಿಸುತ್ತಾ ಉಡುಪಿ ಜಿಲ್ಲೆಯಾದ್ಯಂತ ಅನೇಕ ಸೇವಾ ಕಾರ್ಯಗಳು ನಡೆಯುತ್ತಿವೆ. ಈ ಮೂಲಕ ಉಡುಪಿ ಜಿಲ್ಲೆಯ 500ಕ್ಕೂ ಹೆಚ್ಚು ಅಂಗನವಾಡಿಗಳಿಗೆ ಸಿಹಿ ತಿಂಡಿ ವಿತರಣೆ ಮಾಡುವ ಕಾರ್ಯ ನಡೆದಿದೆ. ಪೌರಕಾರ್ಮಿಕರಿಗೆ ಹಾಗೂ ಶಿಕ್ಷಕರಿಗೆ ಸನ್ಮಾನ ಮಾಡುವ ಕಾರ್ಯ ಹೀಗೆ ಹಲವು ರೀತಿಯ ಸೇವಾ ಕಾರ್ಯ ನಡೆಯುತ್ತಿದೆ ಎಂದರು.

ನರೇಂದ್ರ ಮೋದಿಯವರ ಹುಟ್ಟುಹಬ್ಬದ ದಿನ ಬೆಳಿಗ್ಗೆ ಹೆಜಮಾಡಿ ಟೋಲ್ ಗೇಟ್ ನಿಂದ ಶಿರೂರು ಟೋಲ್ ಗೇಟ್ ನವರೆಗೆ ಬರುವಂತಹ ಅಷ್ಟೂ ಬಸ್ ನಿಲ್ದಾಣವನ್ನು ಸ್ವಚ್ಚ ಮಾಡುವ ಕಾರ್ಯವು ನಡೆದಿದೆ ಎಂದರು.

ಈ ಸಂದರ್ಭದಲ್ಲಿ ಸಮಾನ ನಾಗರಿಕ ಸಂಹಿತೆ ವಿಷಯದಲ್ಲಿ ರಾಜ್ಯ ಮಟ್ಟದ ಭಾಷಣ ಸ್ಪರ್ಧೆ ಹಾಗೂ ನರೇಂದ್ರ ಮೋದಿಯ ಚಿತ್ರ ಬಿಡಿಸುವ ಸ್ಪರ್ಧೆ ನಡೆಯಿತು.

ಸಮಾಜಸೇವಕರನ್ನು ಗುರುತಿಸಿ ಸನ್ಮಾನಿಸಲಾಯಿತು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.