ವಿಶ್ವಕರ್ಮ ಕಲಾ ಸಂಗಮ ವತಿಯಿಂದ ಪಿಯುಸಿ ಸಾಧಕಿ ಶ್ರೀಲಕ್ಷ್ಮೀ ಆಚಾರ್ಯಗೆ ಸನ್ಮಾನ

ಉಡುಪಿ: ಹಿರಿಯ್ಕಡ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತಮ ‌ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಶ್ರೀಲಕ್ಷ್ಮೀ ಆಚಾರ್ಯ ಪೆರ್ಡೂರು ಅವರನ್ನು ವಿಶ್ವಕರ್ಮ ಕಲಾ ಸಂಗಮ ಫೇಸ್ಬುಕ್ ಪೇಜ್ ವತಿಯಿಂದ ಭಾನುವಾರ ಪರ್ಕಳದಲ್ಲಿ ಸನ್ಮಾನಿಸಲಾಯಿತು.
ಶ್ರೀ ಲಕ್ಷ್ಮೀ ವಾಣಿಜ್ಯ ವಿಭಾಗದಲ್ಲಿ 587 ಅಂಕ ಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನವನ್ನು ಪಡೆದಿದ್ದರು. ವಿಶ್ವಕರ್ಮ ಕಲಾ ಸಂಗಮದ ದೀಪಿಕಾ ಗಣೇಶ್ ಆಚಾರ್ಯ ಇವರು ಸನ್ಮಾನಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಾಧನೆಗೈದ ಶ್ರೀಲಕ್ಷ್ಮೀ ಆಚಾರ್ಯ ತಂದೆ ಪೆರ್ಡೂರು ಸುಧಾಕರ ಆಚಾರ್ಯ, ತಾಯಿ ಪೂರ್ಣಿಮಾ ಸುಧಾಕರ ಆಚಾರ್ಯ, ವಿಶ್ವಕರ್ಮ ಕಲಾ ಸಂಗಮ ಫೇಸ್ಬುಕ್ ಬಳಗದ ಮುಖ್ಯಸ್ಥರಾದ ಪುರೋಹಿತ್ ದಾಮೋದರ್ ಶರ್ಮ ಬಾರ್ಕೂರು, ಗಣೇಶ್ ಆಚಾರ್ಯ ಪರ್ಕಳ, ಎಚ್. ಸುಶಾಂತ್ ಆಚಾರ್ಯ ಬೈಂದೂರು, ಗುರುಮೂರ್ತಿ ಆಚಾರ್ಯ ಬೈಂದೂರು ಇದ್ದರು.
ವಿಶ್ವಕರ್ಮ ಕಲಾ ಸಂಗಮ ಫೇಸ್ಬುಕ್ ಬಳಗದ ಆಶಾ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.
ಬಳಿಕ ವಿಶ್ವಕರ್ಮ ಕಲಾ ಸಂಗಮ ಫೇಸ್ಬುಕ್ ಪೇಜ್ ವತಿಯಿಂದ ಕರ್ನಾಟಕ ಕಲಾರತ್ನ ಪ್ರಶಸ್ತಿ ವಿಜೇತೆ ದೀಪಿಕಾ ಗಣೇಶ್ ಆಚಾರ್ಯ ಇವರಿಂದ ಮಾತು ಕಥೆಯೊಂದಿಗೆ ಗಾನ ಮಾಧುರ್ಯ ಕಾರ್ಯಕ್ರಮ ನಡೆಯಿತು.