ಕುಂದಾಪುರ: ವಿನಾಯಕ ಟಾಕೀಸ್ ರಿಕ್ಷಾ ನಿಲ್ದಾಣ ವಡೇರಹೋಬಳಿಗೆ ಸ್ಥಳಾಂತರ

ಕುಂದಾಪುರ: ಪುರಸಭಾ ವ್ಯಾಪ್ತಿಯ ವಿನಾಯಕ ಟಾಕೀಸಿನ ಹತ್ತಿರದ ಆಟೋ ರಿಕ್ಷಾ ನಿಲ್ದಾಣಕ್ಕೆ ಬದಲಿ ಸ್ಥಳವಾಗಿ ವಡೇರಹೋಬಳಿ ಗ್ರಾಮದ ಸ. ನಂ. 110/2ಎ1 ರಲ್ಲಿ 0.03 ಎಕ್ರೆ ಜಮೀನಿನ ಸ್ಥಳದಲ್ಲಿ ಆಟೋರಿಕ್ಷಾಗಳನ್ನು ನಿಲ್ಲಿಸಲು ಸ್ಥಳ ನಿಗದಿಪಡಿಸಿ, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಆದೇಶಿಸಿರುತ್ತಾರೆ.