ಉಡುಪಿ:ಭರತನಾಟ್ಯ ವಿದ್ವತ್ ಪೂರ್ವ ಪರೀಕ್ಷೆ: ವಸುಂದರಾ ಭಟ್ ಪ್ರಥಮ

ಉಡುಪಿ: ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯವರು ನಡೆಸಿದ 2018-2019ನೇ ಸಾಲಿನ  ಭರತನಾಟ್ಯ ವಿದ್ವತ್ ಪೂರ್ವ ಪರೀಕ್ಷೆಯಲ್ಲಿ ಉಡುಪಿಯ ವಸುಂದರಾ ಭಟ್  ಶೇ.87.6  ಅಂಕದೊಂದಿಗೆ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಇವರು ನೃತ್ಯನಿಕೇತನ ಕೊಡವೂರು ಇದರ  ನಿರ್ದೇಶಕರಾದ ವಿದ್ವಾನ್ ಸುಧೀರ್ ಕೊಡವೂರು ಹಾಗೂ ವಿಧುಷಿ ಮಾನಸಿ ಸುಧೀರ್ ಇವರ ಶಿಷ್ಯೆಯಾಗಿದ್ದು, ನಾರಾವಿ ಗುರುರಾಜ ಭಟ್ ಮತ್ತು ಶ್ರೀಲತಾ ಭಟ್ ಇವರ ಸುಪುತ್ರಿ. ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮತ್ತು ಮನೇಜ್‌ಮೆಂಟ್ ಕಾಲೇಜಿನ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ.