ಕರ್ನಾಟಕದ ರಾಜ್ಯಪಾಲರಾಗಿ ಕೇಂದ್ರ ಸಚಿವ ತಾವರ್ ಚಂದ್ ಗೆಹ್ಲೋಟ್ ನೇಮಕ

ಬೆಂಗಳೂರು: ಕೇಂದ್ರ ಕ್ಯಾಬಿನೆಟ್ ವಿಸ್ತರಣೆ ಬೆನ್ನಲ್ಲೇ ಕರ್ನಾಟಕ ಸಹಿತ ಎಂಟು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಲಾಗಿದೆ.

ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ನಾಟಕದ  ರಾಜ್ಯಪಾಲರಾಗಿ ಕೇಂದ್ರ ಸಚಿವ ತಾವರ್ ಚಂದ್ ಗೆಹ್ಲೋಟ್ ಅವರನ್ನು ನೇಮಕ ಮಾಡಲಾಗಿದೆ. ತಾವರ್ ಚಂದ್ ಅವರು ಕೇಂದ್ರ ಸಾಮಾಜಿಕ, ನ್ಯಾಯ ಸಬಲೀಕರಣ ಸಚಿವರಾಗಿದ್ದರು.

ವಜೂಭಾಯಿ ವಾಲಾ ಅವರ ರಾಜ್ಯಪಾಲ ಅಧಿಕಾರಾವಧಿ ಕೆಲವು ತಿಂಗಳ ಹಿಂದೆಯೇ ಮುಗಿದಿದ್ದರೂ, ಅವರನ್ನೇ ರಾಜ್ಯಪಾಲರಾಗಿ ಮುಂದುವರೆಸಲಾಗಿತ್ತು.

ರಾಜ್ಯಪಾಲರ ಪಟ್ಟಿ ಹೀಗಿದೆ:

ಥಾವರ್​​ಚಂದ್ ಗೆಹ್ಲೋಟ್- ಕರ್ನಾಟಕ

ಬಂಡಾರು ದತ್ತಾತ್ರೇಯ- ಹರಿಯಾಣ

ಮಂಗುಭಾಯಿ ಪಟೇಲ್- ಮಧ್ಯಪ್ರದೇಶ

ರಾಜೇಂದ್ರನ್ ವಿಶ್ವನಾಥ್ ಅರ್ಲೇಕರ್- ಹಿಮಾಚಲ ಪ್ರದೇಶ

ಪಿ ಎಸ್ ಶ್ರೀಧರನ್ ಪಿಳ್ಳೈ- ಗೋವಾ

ರಮೇಶಿ ಬಯಿಸ್- ಜಾರ್ಖಂಡ್

ಹರಿಬಾಬು ಕಂಭಾಪತಿ- ಮಿಜೋರಾಂ

ಸತ್ಯದೇವ ನಾರಾಯಣ್ ಆರ್ಯ- ತ್ರಿಪುರ.