ಉಡುಪಿ: ಉಡುಪಿ ಮೀಡಿಯಾ ನೆಟ್ ವರ್ಕ್ಸ್ ಸಂಸ್ಥೆಯ ಸುದ್ದಿ ಜಾಲತಾಣ ಉಡುಪಿXPRESS.com ಇದರ 3 ನೇ ವರ್ಷದ ಸಂಭ್ರಮದ ಪ್ರಯುಕ್ತ ಸಂಯೋಜಿಸಲಾದ ಕರಾವಳಿಯ ಸಹಕಾರ ಕ್ಷೇತ್ರದ ವಿಶೇಷ ಸಂಚಿಕೆ “ಸಹಕಾರ ಸಂಗಮ” ಇದರ ಲೋಕಾರ್ಪಣೆ ಶನಿವಾರ ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಯಲ್ಲಿ ನಡೆಯಿತು.


ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ ಇದರ ಪ್ರಧಾನ ವ್ಯವಸ್ಥಾಪಕರು ಹಾಗೂ ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಇದರ ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳಿ ಇದರ ನಿರ್ದೇಶಕರಾದ ಜಯಕರ ಶೆಟ್ಟಿ ಇಂದ್ರಾಳಿ ಅವರು ಉಡುಪಿXPRESS ನ “ಸಹಕಾರ ಸಂಗಮ”ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು.
ಈ ಸಂದರ್ಭದಲ್ಲಿ ವ್ಯವಸ್ಥಾಪಕ ಸಂಪಾದಕರಾದ ಜೀವನ್ ಆರ್ ಶೆಟ್ಟಿ, ಸಂಪಾದಕರಾದ ಪ್ರಸಾದ್ ಶೆಣೈ, ಕಮರ್ಶಿಯಲ್ ವಿಭಾಗದ ಶ್ರೇಯಸ್ ಶ್ರೀಯನ್ , ಶುಭನ್ ಇದ್ದರು.












