ಲಯನ್ಸ್ ಕ್ಲಬ್ ಬನ್ನಂಜೆ ಟೈಗರ್ ಇದರ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಲಯನ್ ಅನುಪಮ ಜಯಕುಮಾರ್ ಮತ್ತು ಅವರ ತಂಡದ ಕಾರ್ಯಕಾರಿ ಸಮಿತಿಯ ಪದ ಪ್ರಧಾನ ಕಾರ್ಯಕ್ರಮವು ಉಡುಪಿಯ ಪುರಭವನದಲ್ಲಿ ಗುರುವಾರ ನಡೆಯಿತು.ಲಯನ್ಸ್ ಜಿಲ್ಲೆಯ ಮಾಜಿ ಗವರ್ನರ್ ೮, ಜಯಕುಮಾರ್ ಶೆಟ್ಟಿ ಇಂದ್ರಾಳಿ ಪದಪ್ರಧಾನ ಕಾರ್ಯಕ್ರಮವನ್ನು ನೆರವೇರಿಸಿ ಶುಭ ಹಾರೈಸಿದರು.
ಕಳೆದ ವರ್ಷ ಅಧ್ಯಕ್ಷ ಕಾರ್ಯದರ್ಶಿ ಮತ್ತು ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ ಪ್ರಮುಖರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಲಯನ್ಸ್ ಜಿಲ್ಲಾ ಕಾರ್ಯಕ್ರಮದಲ್ಲಿ ‘ಧೀರ ಮಹಿಳೆ’ ಪ್ರಶಸ್ತಿ ಪುರಸ್ಕೃತ ವಿದ್ಯಾಲತಾ ಯು ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.
ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಲ, ಅನುಪಮ ಜಯಕುಮಾರ್ ಸರ್ವರ ಸಹಕಾರ ಯಾಚಿಸಿದರು. ಸಮಾರಂಭದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿಭಾಗದಲ್ಲಿ ಅತ್ಯಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಗೌರವ ಧನ ಮತ್ತು ವಿವಿಧ ಸಂಘ ಸಂಸ್ಥೆಗಳ ವಿವಿಧ ಕಾರ್ಯಕ್ರಮಗಳಿಗೆ ಪ್ರೋತ್ಸಾಹಕ ಧನ ವಿತರಿಸಲಾಯಿತು.
ನಿಕಟ ಪೂರ್ವ ಅಧ್ಯಕ್ಷೆ ಲ.ಸುಮಮಾಲಿನಿ ದಯಾನಂದ ಸ್ವಾಗತಿಸಿದರೆ, ನೂತನ ಕೋಶಾಧಿಕಾರಿ ಲ. ವಿದ್ಯಾ ಉದಯ ಧನ್ಯವಾದ ಸಮರ್ಪಿಸಿದರು, ಜಿಲ್ಲಾ ಪ್ರಥಮ ಉಪಗವರ್ನರ್ ೬, ಮೊಹಮ್ಮದ್ ಹನೀಫ್, ಮಾಜಿ ಗವರ್ನರ್ ಲ. ವಿಜಿ ಶೆಟ್ಟಿ, ಪ್ರಾಂತೀಯ ಮೂರರ ಅಧ್ಯಕ್ಷ ಲಯನ್ ರಿಷಿಕೇಶ್ ಹೆಗ್ಡೆ, ವಲಯ ಒಂದರ ಅಧ್ಯಕ್ಷ ಲ, ವರುಣ್ ಶೆಟ್ಟಿ, ಕಾರ್ಯದರ್ಶಿ ಲ. ರವೀಂದ್ರ ಕುಂದರ್ ವೇದಿಕೆಯಲ್ಲಿ ಉಪಸ್ಥಿತರಿದ್ದರುಲ. ರಾಘವೇಂದ್ರ ಶೆಟ್ಟಿ ಮತ್ತು ಲ, ರೇಷ್ಮಾ ಕಾರ್ಯಕ್ರಮ ನಿರೂಪಿಸಿದರು.