ಮಣಿಪಾಲ: ವಿಶ್ವ ರಕ್ತ ದಾನಿಗಳ ದಿನದ ಅಂಗವಾಗಿ, ಘೋಷ ವಾಕ್ಯ ರಚನಾ ಸ್ಪರ್ಧೆ

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ರಕ್ತ ಕೇಂದ್ರವು ವಿಶ್ವ ರಕ್ತ ದಾನಿಗಳ ದಿನದ ಅಂಗವಾಗಿ , ಘೋಷ ವಾಕ್ಯ ರಚನಾ ಸ್ಪರ್ಧೆ ಏರ್ಪಡಿಸಿದೆ. ಸ್ಪರ್ಧೆಯೂ ಎಲ್ಲರಿಗೂ ಮುಕ್ತವಾಗಿದ್ದು , ಸಾರ್ವಜನಿಕರು, ಮಕ್ಕಳು ವಯಸ್ಸಿನ ಭೇದವಿಲ್ಲದೆ ಕಳುಹಿಸಬಹುದು. ವಿಷಯ: ರಕ್ತ ನೀಡಿ, ಭರವಸೆ ನೀಡಿ: ಒಟ್ಟಾಗಿ ನಾವು ಜೀವ ಉಳಿಸೋಣ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಕಳುಹಿಸಬಹುದು.

ಎರಡೂ ಭಾಷೆಯ ವಿಜೇತರಿಗೆ ಪ್ರತ್ಯೇಕ ಬಹುಮಾನವಿದೆ. ಘೋಷ ವಾಕ್ಯ ಕಳುಹಿಸಲು ಕೊನೆಯ ದಿನಾಂಕ 10ನೇ ಜೂನ್ 2025. ವಿಜೇತರು ಆಕರ್ಷಕ ಬಹುಮಾನವನ್ನು 14ನೇ ಜೂನ್ 2025ರಂದು ನಡೆಯುವ ರಕ್ತದಾನಿಗಳ ದಿನದ ಕಾರ್ಯಕ್ರಮದಲ್ಲಿ ಪಡೆಯಲಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ದೂ: 0820 2922331. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುವುದು.

ಘೋಷ ವಾಕ್ಯ ಕಳುಹಿಸಲು ಮತ್ತು ನಿಯಮಗಳನ್ನು ತಿಳಿಯಲು ಈ ಕೆಳಗಿನ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ.