ಯುಪಿಎಂಸಿ’ಯಲ್ಲಿ ಉಪೇಂದ್ರ ಪೈ ಪ್ರೀಮಿಯರ್ ಲೀಗ್ – ವಾಲಿಬಾಲ್ ಪಂದ್ಯಾಟ.

ಉಡುಪಿ: ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನಲ್ಲಿ ಮೇ 27ರಂದು ಯುಪಿಎಲ್ ಅಂತರ್ಕಕ್ಷ್ಯಾ ವಾಲಿಬಾಲ್ ಪಂದ್ಯಾಟ ಜರಗಿತು.ಕಾಲೇಜಿನ ಹಳೆ ವಿದ್ಯಾರ್ಥಿ ಮುಕುಂದ ರಿಟೈಲರ್ಸ್ ಮಾಲಕ ಮುಕುಂದ ಶೆಣೈ ಕಾರ್ಯಕ್ರಮ ಉದ್ಘಾಟಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕ್ರೀಡಾ ಜರ್ಸಿ ಮತ್ತು ಫಲಕ ಅನಾವರಣಗೊಂಡಿತು.ಕಾಲೇಜಿನ ಪ್ರಾಚಾರ್ಯೆ ಶ್ರೀಮತಿ ಆಶಾ ಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಚಾರ್ಯ ರಾಧಾಕೃಷ್ಣ ರಾವ್, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಶ್ರೀಮತಿ ಪ್ರಭಾ ಕಾಮತ್, ದೈಹಿಕ ಶಿಕ್ಷಣ ನಿರ್ದೇಶಕ ಗಣೇಶ್ ಕೋಟ್ಯಾನ್, ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಹರಿಕೇಶವ್, ವಿದ್ಯಾರ್ಥಿ ಸಂಯೋಜಕರಾದ ಫರೀದ್, ಸಫ್ವಾನ್, ಇಫ್ರಾಜ್ ಉಪಸ್ಥಿತರಿದ್ದರು.ತೃತೀಯ ಬಿ.ಕಾಮ್ ವಿದ್ಯಾರ್ಥಿನಿ ಸಿಂಚನ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು.