ಉಡುಪಿ ‘ಸಿಂಡ್ ವಾಹನ ಮೇಳ’ ಉದ್ಘಾಟನೆ: ವಾಹನ‌ ಖರೀದಿಗೆ ಕಡಿಮೆ ಬಡ್ಡಿ ದರದಲ್ಲಿ ಸಿಂಡ್ ಸಾಲ ಸೌಲಭ್ಯ: ಟಿ.ಅಶೋಕ್ ಪೈ

ಉಡುಪಿ: ಉಡುಪಿ ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಕಚೇರಿ 1 ಮತ್ತು 2ರ ಆಶ್ರಯದಲ್ಲಿ ಹಬ್ಬಗಳ ಸೀಸನ್ ಪ್ರಯುಕ್ತ ಅ.12, 13ರಂದು  ಎಂಜಿಎಂ ಕಾಲೇಜಿನಲ್ಲಿ ಆಯೋಜಿಸಲಾದ ಸಿಂಡ್ ವಾಹನ ಮೇಳವನ್ನು ಮಣಿಪಾಲದ ಡಾ| ಟಿ.ಎನ್.ಎ ಪೈ. ಫೌಂಡೇಶನ್ ಕಾರ್ಯದರ್ಶಿ ಟಿ. ಅಶೋಕ ಪೈ ಉದ್ಘಾಟಿಸಿದರು.
ಅನಂತರ ಮಾತನಾಡಿದ ಅವರು, ನಮ್ಮ ಕೆಲವು ಹಬ್ಬ ಆಚರಣೆಯ ಸಮಯದಲ್ಲಿ ಹೊಸಬಗೆಯ ಚಿನ್ನ ವಾಹನ, ಇನ್ನಿತರ ಅವಶ್ಯ ಗೃಹೋಪಕರಣಗಳನ್ನು ಖರೀದಿಸುತ್ತೇವೆ. ಜತೆಗೆ ಸ್ವಂತ ವಾಹನ ಖರೀದಿಸಬೇಕು ಎನ್ನುವುದು‌ ಎಲ್ಲರ ಕನಸಾಗಿರುತ್ತದೆ. ಹೀಗಾಗಿ ಇಂಥವರಿಗೆ ಸಿಂಡ್ ಬ್ಯಾಂಕ್ ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಸುಲಭವಾಗಿ ಸಾಲ ಸೌಲಭ್ಯ ನೀಡಿ ವಾಹನ ಖರೀದಿಸಲು ಪ್ರೋತ್ಸಾಹಿಸುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ವಲಯ ಪ್ರಬಂಧಕ ಬಾಸ್ಕರ್ ಹಂದೆ ಮಾತನಾಡಿ, ಈ ವರ್ಷ ಸುಮಾರು 300 ವಾಹನಗಳಿಗೆ 16 ಕೋಟಿ ರೂ. ಸಾಲ ವಿತರಿಸುವ ಗುರಿ ಬ್ಯಾಂಕ್ ಗೆ ಇದೆ.‌ ಹಾಗೇಯೇ ಅಕ್ಟೋಬರ್ 17, 18, 19 ರಂದು ಬ್ಯಾಂಕಿನ ಮಣಿಪಾಲ ವಲಯದ ಎಲ್ಲಾ ಶಾಖೆಗಳಲ್ಲಿ ವೈಯಕ್ತಿಕ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಗ್ರಾಹಕರು ಸದುಪಯೋಗ ಪಡೆಯಬಹುದು ಎಂದರು.
ಸಿಂಡಿಕೇಟ್ ಬ್ಯಾಂಕ್ ಮಣಿಪಾಲ ಕಚೇರಿಯ ಮಹಾ ಪ್ರಬಂಧಕರಾದ ಎಸ್. ಎಸ್. ಹೆಗ್ಡೆ, ಗಿರಿಧರ್ ವಿ. ಎಮ್.  ಮಾತನಾಡಿ ಗ್ರಾಹಕರಿಗೆ ವಾಹನ‌ ಖರೀದಿಸಲು ಇದೊಂದು ಸದಾವಕಾಶ ಎಂದರು.
ಬೆಳಿಗ್ಗೆ 10 ರಿಂದ ಸಂಜೆ 7ರವರೆಗೆ ವಾಹನ‌ ಮೇಳ ನಡೆಯುತ್ತಿದೆ. ಪ್ರತಿಷ್ಠಿತ ಕಾರು ಕಂಪನಿಗಳಾದ ಬಿಎಂಡಬ್ಲ್ಯೂ, ಹೊಂಡಾ, ಹ್ಯುಂಡೈ, ಮಾರುತಿ, ನೆಕ್ಸಾ, ಫೋರ್ಡ್, ರೆನೋಲ್ಟ್ , ಸ್ಕೋಡಾ, ಟೊಯಟಾ, ಮಹೀಂದ್ರಾ, ಇಸುಝು, ದ್ವಿಚಕ್ರ ವಾಹನಗಳಲ್ಲಿ ರೋಯಲ್ ಎನ್ ಫೀಲ್ಡ್ ಭಾಗವಹಿಸಿವೆ.
ಬ್ಯಾಂಕಿನ ಪ್ರಾದೇಶಿಕ ಕಚೇರಿ ಉಡುಪಿ- 2ರ ಕ್ಷೇತ್ರಿಯ ಪ್ರಬಂಧಕ ರಾಮ ನಾಯ್ಕ್ ಬ್ಯಾಂಕಿನಿಂದ ಸಿಗುವ ಸಾಲ ಸೌಲಭ್ಯಗಳ ಕುರಿತು ಪ್ರಾಸ್ತಾವೆನೆಗೈದರು. ಉಡುಪಿ-  1ರ ಕ್ಷೇತ್ರಿಯ ಪ್ರಬಂಧಕಿ ಸುಜಾತಾ ಸ್ವಾಗತಿಸಿ, ಹಿರಿಯ ಶಾಖಾ ಪ್ರಬಂಧಕಿ ಅರ್ಚನಾ ನಿರೂಪಿಸಿದರು. ಲೀಡ್ ಬ್ಯಾಂಕ್ ಪ್ರಬಂಧಕ ರುದ್ರೇಶ್ ವಂದಿಸಿದರು.