ಉಡುಪಿ: ಉಡುಪಿಯಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಸ್ವರ್ಣ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ.
ಪೆರಂಪಳ್ಳಿ ಬಳಿಯ ಸ್ವರ್ಣ ನದಿ ತಟದಲ್ಲಿರುವ ಪಾಸ್ಕ ಕುದ್ರು ಬಳಿ ಅವೈಜ್ಞಾನಿಕ ಅಣೆಕಟ್ಟು ನಿರ್ಮಾಣಕ್ಕೆ ಸುರಿಯಲಾಗಿರುವ ಮಣ್ಣು ತೆರವುಗೊಳಿಸದ ಕಾರಣ ನದಿ ನೀರು ನದಿ ತಟದ ಪ್ರದೇಶಗಳಿಗೆ ನುಗ್ಗುತ್ತಿದೆ.ಇದರಿಂದಾಗಿ ನದಿ ತಟದ ತೆಂಗಿನ ಮರಗಳು ನದಿಪಾಲಾಗುತ್ತಿವೆ.

ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.












