ಉಡುಪಿ: ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆ ಸಮಾರೋಪ

ಉಡುಪಿ: ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ವತಿಯಿಂದ ಬ್ಯಾಂಕ್ ಆಫ್ ಬರೋಡ ಸಹ ಪ್ರಾಯೋಜಕತ್ವದಲ್ಲಿ 13 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರಿಗೆ ಮಣಿಪಾಲದ ಮರಿನಾ ಒಳಾಂಗಣ ಕ್ರೀಡಾಂಗಣ ಮತ್ತು ಅಜ್ಜರಕಾಡು ಒಳಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಭಾರತ ಸಬ್ ಜ್ಯೂನಿಯರ್ ರ‍್ಯಾಂಕಿಂಗ್  ರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಮೆಂಟ್ ನ ಸಮಾರೋಪ‌ ಸಮಾರಂಭ ಭಾನುವಾರ ನಡೆಯಿತು.
ವಿಜೇತರ ಪಟ್ಟಿ ಹೀಗಿದೆ:
13 ವರ್ಷ ಬಾಲಕರ ವಿಭಾಗ-ಅನ್ಶ್ ನೇಗಿ (ಉತ್ತರಾಖಂಡ್), ಬಾಲಕಿಯರ ವಿಭಾಗ- ಉನ್ನತಿ ಹೂಡಾ (ಹರ್ಯಾಣ), 13 ವರ್ಷ ಬಾಲಕರ ಡಬಲ್ಸ್-  ವನ್ಶ್ ಪ್ರತಾಪ್ ಸಿಂಗ್ ತ್ಯಾಗಿ ಮತ್ತು ಕೌಸ್ತುಭ್ ತ್ಯಾಗಿ (ಉತ್ತರಾಖಂಡ್), 13 ವರ್ಷ ಬಾಲಕಿಯರ ಡಬಲ್ಸ್-ಉನ್ನತಿ ಹೂಡಾ ಮತ್ತು ದೀವಿತಾ (ಹರ್ಯಾಣ, ಆಂಧ್ರ ಪ್ರದೇಶ).
ಸಮರೋಪ ಕಾರ್ಯಕ್ರಮದಲ್ಲಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ, ಶಾಸಕ ಕೆ.ರಘುಪತಿ ಭಟ್, ಬ್ಯಾಂಕ್ ಆಫ್ ಬರೋಡಾ ಮಂಗಳೂರು ವಲಯದ ಮಹಾಪ್ರಬಂಧಕ ಎಂ.ಜೆ.ನಾಗರಾಜ, ಬ್ಯಾಂಕ್ ಆಫ್ ಬರೋಡಾದ ವಲಯ ಪ್ರಬಂಧಕ ರವೀಂದ್ರ ರೈ, ಬ್ಯಾಡ್ಮಿಂಟನ್ ಅಸೋಸಿಯೇಷನ್ ಆಫ್ ಇಂಡಿಯಾದ ವೀಕ್ಷಕ ಸುಖಾಂತ ದಾಸ್, ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ಗೌರವ ಕಾರ್ಯದರ್ಶಿ ಓಮರ್ ರಶೀದ್,  ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್‌ನ ಗೌರವ ಕಾರ್ಯದರ್ಶಿ ಪಿ.ರಾಜೇಶ್, ದ.ಕ. ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಸಂಘಟನ ಕಾರ್ಯದರ್ಶಿ ಎಂ.ಕಾಶೀರಾಮ್ ಪೈ, ಸಂಚಾಲಕ ಸೊಹೈಲ್ ಅಮಿನ್, ಕಾರ್ಯದರ್ಶಿ ವೈ.ಸುಧೀರ್ ಕುಮಾರ್,  ಅಶೋಕ್ ಶೆಟ್ಟಿ, ದಿವಾಕರ ಶೆಟ್ಟಿ ಉಪಸ್ಥಿತರಿದ್ದರು.