ಉಡುಪಿ ಗ್ರಾಮಾಂತರ ಅಲ್ಪಸಂಖ್ಯಾತ ಮೋರ್ಚಾ: ಸುನೀತಾ ಡಿಸೋಜ ನೇತೃತ್ವದ ನೂತನ ಸಮಿತಿಯ ಪದಗ್ರಹಣ

ಉಡುಪಿ: ಬಿಜೆಪಿ ಉಡುಪಿ ಗ್ರಾಮಾಂತರ ಅಲ್ಪಸಂಖ್ಯಾತ ಮೋರ್ಚಾದ ಪದಗ್ರಹಣ ಕಾರ್ಯಕ್ರಮವು ಭಾನುವಾರ ಬ್ರಹ್ಮಾವರ ಬಿಜೆಪಿ ಕಚೇರಿಯಲ್ಲಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯ್ಕ್ ಅಧ್ಯಕ್ಷತೆಯಲ್ಲಿ ಹಾಗು ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ  ದಾವುದ್ ಅಬೂಬಕರ್ ಮಾರ್ಗದರ್ಶನದಲ್ಲಿ ನಡೆಯಿತು.

ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಆಲ್ವಿನ್ ಡಿಸೋಜ ಭಾರತಮಾತೆಗೆ ಪುಷ್ಪಾರ್ಚನೆಗೈದು ಕಾರ್ಯಕ್ರಮ ಉದ್ಘಾಟಿಸಿದರು.

ನೂತನ ಸಮಿತಿಯ ಪದಗ್ರಹಣ:
ಗ್ರಾಮಾಂತರ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷೆಯಾಗಿ ಸುನೀತಾ ಡಿಸೋಜ ಆಯ್ಕೆ ಮಾಡಲಾಯಿತು. ಅವರಿಗೆ ಪಕ್ಷದ ಧ್ವಜ ಹಸ್ತಾಂತರಿಸಿ ಅಭಿನಂದಿಸಲಾಯಿತು.

ಉಪಾಧ್ಯಕ್ಷರಾಗಿ ಅಶ್ವಿನಿ ರೊಲಿಟಾ, ಪ್ರಧಾನ ಕಾರ್ಯದರ್ಶಿಗಳಾಗಿ ರಾಜೇಶ್ವರಿ ಮಸ್ಕರೇನಸ್, ಫ್ಲಾವಿಯಾ ಸುನೀತಾ ಡಿಸೋಜ ಕೆಮ್ಮಣ್ಣು ಮತ್ತು ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಔರ್ ಸಬ್ ಕಾ ವಿಶ್ವಾಸ್ ಧ್ಯೇಯಕ್ಕೆ ಪ್ರಭಾವಿತರಾಗಿ  ಮತ್ತು ಶಾಸಕ ಕೆ. ರಘುಪತಿ ಭಟ್ ರವರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮೆಚ್ಚಿ ಗ್ರಾಮಾಂತರ ಭಾಗದ ಅಸಂಖ್ಯಾತ ಅಲ್ಪಸಂಖ್ಯಾತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಚಿನ್ನದ ಪದಕ ವಿಜೇತ ಬಹುಮುಖ ಪ್ರತಿಭೆಗಳಾದ  ಜೋಸ್ಲಿನ್ ಡಿಸೋಜ ಬಾಕ್ಸಿಂಗ್ ಪಟು ಮತ್ತು ಜೋಯ್ಲಿನ್ ಡಿಸೋಜ ಕರಾಟೆ ಪಟುಗಳನ್ನು ಸನ್ಮಾನಿಸಲಾಯಿತು.

ಪ್ರಧಾನ ಕಾರ್ಯದರ್ಶಿ ಶೇಕ್ ಆಸೀಫ್, ಉಪಾಧ್ಯಕ್ಷ ಮಹಮ್ಮದ್ ಮುತ್ತಾಲಿ, ಗ್ರಾಮಾಂತರ ಅ.ಸಂ.ಮೋ.ಮಂಡಲ ಪ್ರಭಾರಿ ಗಿಲ್ಬರ್ಟ್ ಬ್ರಗಾಂಜ , ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆಯಾದ ಶೀಲಾ ಶೆಟ್ಟಿ, ನಿಕಟಪೂರ್ವ ಗ್ರಾಮಾಂತರ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ, ಮಂಡಲ ಪ್ರಭಾರಿ ಸದಾನಂದ ಬಳ್ಕೂರು, ತಾಲೂಕ್ ಪಂಚಾಯತ್ ಉಪಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ತಾಲೂಕು ಪಂಚಾಯತ್ ಸಾಮಾಜಿಕ ನ್ಯಾಯ ಮಂಡಳಿಯ ವಸಂತಿ, ಮಹೇಂದ್ರ ಕುಮಾರ್ ನೀಲಾವರ ಮತ್ತು ಪಕ್ಷದ ಪ್ರಮುಖರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಡುಪಿ ಬಿಜೆಪಿ ಗ್ರಾಮಾಂತರ ಪ್ರಧಾನ ಕಾರ್ಯದರ್ಶಿ ಅಶೋಕ್ ಹೇರೂರು ಕಾರ್ಯಕ್ರಮ ನಿರೂಪಿಸಿದರು.