ಉಡುಪಿ:ರೋಟರಿ ಕ್ಲಬ್ ಬ್ರಹ್ಮಾವರ, 37ನೇ ರಸ್ತೆ ಸುರಕ್ಷತಾ ಮಾಸಾಚರಣೆ

ಉಡುಪಿ:ರೋಟರಿ ಕ್ಲಬ್ ಬ್ರಹ್ಮಾವರ, ರೋಟರ್ಯಾಕ್ಟ್ ಕ್ಲಬ್ ಬ್ರಹ್ಮಾವರ, ಇಂಟರ್ಯಾಕ್ಟ್ ಕ್ಲಬ್ ಶಾರದ ಹೈಸ್ಕೂಲ್ ಚೇರ್ಕಾಡಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ 37ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಮಾಸಾಚರಣೆ 2026 ಶಾರದ ಹೈಸ್ಕೂಲು ಚೇರ್ಕಾಡಿಯ ಸಭಾಂಗಣದಲ್ಲಿ ಜರುಗಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಸಂತೋಷ್ ಶೆಟ್ಟಿ ಉದ್ಘಾಟಿಸಿ ರಸ್ತೆ ಸುರಕ್ಷತಾ ಮಾಸಾಚರಣೆಯ ಮಹತ್ವ ತಿಳಿಸಿದರು. ಮೋಟಾರು ವಾಹನ ನಿರೀಕ್ಷಕರಾದ ಶ್ರೇಯಸ್ ಕುಮಾರ್ ಕುಕ್ಕೆ ವಿದ್ಯಾರ್ಥಿಗಳಿಗೆ ದೃಶ್ಯ ಮಾಧ್ಯಮದ ಮೂಲಕ ಸಂಚಾರ ನಿಯಮ ಪಾಲನೆಯ ಮಾಹಿತಿ ನೀಡಿದರು. ರಸ್ತೆ ಸುರಕ್ಷತೆಯ ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಬ್ರಹ್ಮಾವರ ರೋಟರಿ ಕ್ಲಬ್ ಅಧ್ಯಕ್ಷ ಸತೀಶ್ ಶೆಟ್ಟಿ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಅತಿಥಿಗಳಾಗಿ ಜಿಲ್ಲಾ ಯೋಜನೆಯ ಸಭಾಪತಿ ಹರೀಶ್ ಕುಂದ‌ರ್, ಶಾಲಾ ಮುಖ್ಯೋಪಾಧ್ಯಾಯರಾದ ಮಂಜುನಾಥ ನಾಯ್ಕ, ರೋಟರಾಕ್ಟ್ ಸಭಾಪತಿ ಸುಂದರಾಮ್ ಶೆಟ್ಟಿ, ಇಂಟರ್ಯಾಕ್ಟ್ ಸಭಾಪತಿ ಜಗದೀಶ್ ಕೆಮ್ಮಣ್ಣು, ಶಾಲಾಭಿವೃದ್ಧಿ ಸಮಿತಿಯ ಆರೂರು ಶ್ರೀಧರ್ ವಿ. ಶೆಟ್ಟಿ, ಇಂಟರಾಕ್ಟ್ ಶಿಕ್ಷಕ ಸಂಯೋಜಕ ಪ್ರಸನ್ನ ಶೆಟ್ಟಿ, ರೋಟರ್ಯಾಕ್ಟ್ ಅಧ್ಯಕ್ಷ ಆಶಿಶ್ ಅಂದ್ರಾದೆ, ಇಂಟರ್ಯಾಕ್ಟ್ ಅಧ್ಯಕ್ಷೆ ಕು। ಪ್ರಜ್ಞಾ ಉಪಸ್ಥಿತರಿದ್ದರು. ಕಾರ್ಯದರ್ಶಿ ರೆಕ್ಸಾನ್ ಮೋನಿಸ್ ವಂದಿಸಿದರು.