ಉಡುಪಿ: ಉಡುಪಿಯ ಹೋಟೆಲ್ ಮಧುರ ಕಂಫರ್ಟ್ಸ್ ಸಭಾಂಗಣದಲ್ಲಿ ಸೆಪ್ಟೆಂಬರ್ 2ರಂದು ನಡೆದ ಮಹಾಸಭೆಯಲ್ಲಿ ಉಡುಪಿಯ ಸಾಂಸ್ಕೃತಿಕ ಸಂಸ್ಥೆಗಳಲ್ಲಿ ಒಂದಾದ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿಯ ಗೌರವಾಧ್ಯಕ್ಷರಾಗಿ ಉಡುಪಿ ವಿಶ್ವನಾಥ ಶೆಣಿೈ ಹಾಗೂ ಅಧ್ಯಕ್ಷರಾಗಿ ಪ್ರೊ| ಶಂಕರ್ ಪುನರ್ ಆಯ್ಕೆ ಆಗಿರುತ್ತಾರೆ.
ಉಪಾಧ್ಯಕ್ಷರಾಗಿ ಮರವಂತೆ ನಾಗರಾಜ ಹೆಬ್ಬಾರ್, ಪ್ರಭಾವತಿ ವಿ. ಶೆಣೈ, ಸಂಧ್ಯಾ ಶೆಣೈ, ಜೀವನ್ ರಾಂ ಸುಳ್ಯ , ವಿಘ್ನೇಶ್ವರ ಅಡಿಗ, ಆಸ್ಟ್ರೋ ಮೋಹನ್, ಡಾ| ಭಾರ್ಗವಿ ಐತಾಳ್, ಮನೋಹರ್ ನಾಯಕ್, ಮಧುಸೂದನ್ ಹೇರೂರು, ಸುಗುಣ ಸುವರ್ಣ, ಗೌರವ ಸಲಹೆಗಾರರಾಗಿ ಜಯಕರ್ ಶೆಟ್ಟಿ ಇಂದ್ರಾಳಿ , ರವೀಂದ್ರ ಪೂಜಾರಿ ತೆಳ್ಳಾರು, ಜನಾರ್ದನ ಕೊಡವೂರು, ರಾಜಗೋಪಾಲ್ ಬಲ್ಲಾಳ, ಡಾ. ಸುರೇಶ್ ಶೆಣೈ, ಡಾ. ವಿರೂಪಾಕ್ಷ ದೇವರಮನೆ, ಡಾ. ವಿಜಯೇಂದ್ರ ವಸಂತ್, ಮನೋಹರ್ ಶೆಟ್ಟಿ ತೊನ್ಸೆ ಪ್ರಧಾನ ಕಾರ್ಯದರ್ಶಿಯಾಗಿ ಶಿಲ್ಪಾ ಜೋಶಿ, ಕಾರ್ಯದರ್ಶಿಯಾಗಿ ಪೂರ್ಣಿಮಾ ಜನಾರ್ದನ್, ಜನಾರ್ದನ ಹಾವಂಜೆ, ಕೋಶಾಧಿಕಾರಿಯಾಗಿ ರಾಜೇಶ್ ಭಟ್ ಪಣಿಯಾಡಿ, ಕಾನೂನು ಸಲಹೆಗಾರರಾಗಿ ಶಶಿರಾಜ್ ಕಾವೂರು, ಸಂಚಾಲಕರಾಗಿ ರವಿರಾಜ್ ಹೆಚ್. ಪಿ ಆಯ್ಕೆಗೊಂಡರು.
ಸಂಸ್ಥೆಯ ಮಹಾಪೋಷಕರಾಗಿ ಡಾ. ಹರೀಶ್ಚಂದ್ರ , ಸಿ. ಎಸ್. ರಾವ್ , ನಾರಾಯಣ ಮಡಿ, ಹಫೀಜ್ ರೆಹಮಾನ್ ವಿಶೇಷ ಆಹ್ವಾನಿತರಾಗಿ ವಿವೇಕಾನಂದ ಎನ್., ಶಾಮಸುಂದರ್, ಸೋಮನಾಥ್ ಚಿಟ್ಪಾಡಿ, ವಿದ್ಯಾ ಶಾಮಸುಂದರ್, ಸುಮಿತ್ರ ಕೆರೆಮಠ, ಪದ್ಮಾಸಿನಿ ಉದ್ಯಾವರ, ವಿದ್ಯಾ ಸರಸ್ವತಿ, ಗಣೇಶ್ ಬ್ರಹ್ಮಾವರ, ರಾಘವೇಂದ್ರ ಅಜೇಕಾರ್, ರಂಜಿನಿ ವಸಂತ್ , ಅನಂತ ಶೆಣಿೈ, ವಸಂತ್, ನಂದಾ ಪೇಟ್ಕರ್, ಶೃತಿ ಕಾಶಿ, ಪ್ರಶಾಂತ್ ಕಾಮತ್ , ಅಮೃತಾ ಬಿ., ದಯಾನಂದ್, ಅನಂತ ಶೆಣಿೈ, ರಾಘವೇಂದ್ರ ಪ್ರಭು ಕರ್ವಾಲು, ನಿತಿನ್ ಕುಕ್ಕಿಕಟ್ಟೆ ಹಾಗೂ ಯುವ ಬಳಗದ ಸಂಚಾಲಕರಾಗಿ ಭಾವನಾ ಕೆರೆಮಠ ಆಯ್ಕೆಯಾಗಿರುತ್ತಾರೆ.












