ನಿವೃತ್ತ ಪ್ರಾಚಾರ್ಯ ಪ್ರೊ. ಕೆ. ರಾಮದಾಸ್ ಭಟ್ ನಿಧನ

ಉಡುಪಿ: ಇಲ್ಲಿನ ಎಂಜಿಎಂ‌ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ. ಕೆ. ರಾಮದಾಸ್ ಭಟ್ (90) ವಯೋಸಹಜ ಅನಾರೋಗ್ಯದಿಂದ ಬೆಳಗಾವಿಯ ಪುತ್ರನ ಮನೆಯಲ್ಲಿ ಬುಧವಾರ ನಿಧನ ಹೊಂದಿದರು.
ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ .
ಗಣ್ಯರ ಸಂತಾಪ:
ರಾಮದಾಸ್ ಭಟ್ ರ ನಿಧನಕ್ಕೆ ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ , ಶಾಸಕ ಕೆ. ರಘುಪತಿ ಭಟ್ , ಮಾಜಿ ರಾಜ್ಯಪಾಲ ಪಿ.ಬಿ. ಆಚಾರ್ಯ, ಪ್ರೊ. ಹೆರಂಜೆ ಕೃಷ್ಣ ಭಟ್ , ಪ್ರೊ. ಎಂ.ಎಲ್. ಸಾಮಗ , ಪ್ರೊ. ಎನ್.ಟಿ‌ ಭಟ್ ಮೊದಲಾದ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ