ನ.19: ಜಿಲ್ಲಾಮಟ್ಟದ ಎಂಜಿನಿಯರ್ಸ್‌ ಮತ್ತು ಆರ್ಕಿಟೆಕ್ಟ್ಸ್‌ಗಳ ಸಮಾವೇಶ

ಉಡುಪಿ: ಉಡುಪಿ ಅಸೋಸಿಯೇಶನ್‌ ಆಫ್‌ ಕನ್ಸಲ್ಟಿಂಗ್‌ ಸಿವಿಲ್‌ ಎಂಜಿನಿಯರ್ಸ್‌ ಅಂಡ್‌ ಆರ್ಕಿಟೆಕ್ಟ್ಸ್‌ (ಎಸಿಸಿಇಎ) ಸಂಸ್ಥೆ ಹಾಗೂ ಫ್ರಾನ್ಸ್‌ ಮೂಲದ ವಿದ್ಯುತ್‌ ಉಪಕರಣಗಳ ತಯಾರಿಕಾ ಸಂಸ್ಥೆ ‘ಸ್ನೆಡರ್‌’ ಜಂಟಿ ಆಶ್ರಯದಲ್ಲಿ ಜಿಲ್ಲಾಮಟ್ಟದ ಎಂಜಿನಿಯರ್ಸ್‌ ಮತ್ತು ಆರ್ಕಿಟೆಕ್ಟ್ಸ್‌ಗಳ ಸಮಾವೇಶವನ್ನು ಬ್ರಹ್ಮಾವರದ ಶಾಮಿಲಿ ಶನಯ ಸಭಾಂಗಣದಲ್ಲಿ ನ. 19ರಂದು ಆಯೋಜಿಸಲಾಗಿದೆ.
ಈ ಬಗ್ಗೆ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಶಾಂತಾ ಎಲೆಕ್ಟ್ರಿಕಲ್ಸ್‌ ಮಾಲೀಕ ಶ್ರೀಪತಿ ಭಟ್‌, ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಜಿ. ಶಂಕರ್‌ ಅಂದು ಸಂಜೆ 7ಗಂಟೆಗೆ ಸಮಾವೇಶವನ್ನು ಉದ್ಘಾಟಿಸುವರು. ಕ್ರೆಡೈ ಉಡುಪಿ ಘಟಕದ ಅಧ್ಯಕ್ಷ ಜೆರ್ರಿ ವಿನ್ಸೆಂಟ್‌ ಡಯಾಸ್‌ ಮುಖ್ಯ ಅಥಿತಿಯಾಗಿ ಭಾಗವಹಿಸುವರು. ಮಣಿಪಾಲ ಮಾಹೆಯ ಸಾರ್ವಜನಿಕ ಸೇವಾ ವಿಭಾಗದ ಉಪನಿರ್ದೇಶಕ ಶ್ರೀಧರ್‌ ರಾವ್‌ ಮತ್ತು ಸ್ನೆಡರ್‌ ಕಂಪೆನಿಯ ಉಪಾಧ್ಯಕ್ಷ ಶ್ರೀನಿವಾಸ ಶಾನುಭಾಗ್‌ ಉಪಸ್ಥಿತರಿರುವರು ಎಂದರು.
ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿಷ್ಣುಮೂರ್ತಿ ಭಟ್‌, ಗೋಪಾಲ ಪೂಜಾರಿ ಗೋಷ್ಠಿಯಲ್ಲಿ ಇದ್ದರು.